ಅನ್ನಪೂರ್ಣಾ ೭೭
ಭವ ಕೆಲಸವಾಗಿತ್ತು ಆಗ. ವ್ರತ ಉಪವಾಸಗಳಿದ್ದರೂ ಸರಿಯೇ,ಯಾರಿಗೂ ಹಸಿವಾಗುತ್ತಿರಲಿಲ್ಲ. ಅನ್ನಪೂರ್ಣೆಗೆ ತೃಪ್ತಿಯಾಗಬೇಕು,-ಅದಕ್ಕಾಗಿ ಬರಿ ಹೊಟೆಯವರಾರೂ ಇರಲಿಲ್ಲ.
ಕರೆ ಕೊಟ್ಟ ಸ್ವಲ್ಪ ಹೊತ್ತಿನ ತನಕ ಅರ್ಚಕರು ನಿಯಮದಂತೆ ಕಾದು
ಕುಳಿತುಕೊಳ್ಳುವರು. ಯಾರೂ ಬರುತ್ತಿರಲಿಲ್ಲ. ದೇವಿಗೆ ಸಮರ್ಪಿಸಿದ ನೈವೆದ್ಯವನ್ನೆತ್ತಿಕೊಂಡು ಆ ಮೇಲೆ ಅವರು ಗೃಹಾಭಿಮುಖವಾಗಿ ತೆರಳುವರು.
ಊರು ಮುಖಂಡರಿಗೆ ಸಂತೋಷವಾಯಿತು.ಅನ್ನದಾನಕ್ಕಾಗಿ
ದೇವಿಯ ಭಂಡಾರದಿಂದ ಏನೇನೂ ವೆಚ್ಚವಾಗುವುದಿಲ್ಲವಲ್ಲಾ ಎಂದು.
* * * * * *
ಮೊದಲು ಬಂದುದು ಪರದೇಶಿಯರ ಆಕ್ರಮಣ-ಕೊಳ್ಳೆ. ಅದರ
ಹಿಂದಿನಿಂದ ಬಂದುದು ಕ್ಷಾಮ,-ಬರಗಾಲ. ದಾರಿದ್ರ್ಯ ದೇವಿ ಅಲ್ಲಿ ತೋರಿ ಕೊಂಡು ಕೆಲಕಾಲ ನರ್ತಿಸಿ ಹೊರಟು ಹೋಗಿದ್ದಳು.
ಆಗ ಹಸಿದವರಿಗಾಗಿ ಅನ್ನಪೂರ್ಣೆಯ ಕರೆ ಬಂದಾಗ ಜನರು ತಂಡ
ತಂಡವಾಗಿ , ಇಳಿಮೊಗದವರಾಗಿ, ಅವನತಶಿರರಾಗಿ ದೇಗುಲದ ಮುಂದೆ ಬಂದು ನಿಂತರು. ಅನ್ನದಾನದ ಕಾರ್ಯ ಉತ್ಸಾಹದಿಂದ ನಡೆಯತೊಡಗಿತು.
ಅಂದಿನಿಂದ ಹಸಿದವರ ಹೊಟ್ಟೆ ತಣಿಯಲಿಲ್ಲ.ನಿರುದ್ಯೋಗಿಗಳು,
ದಿನಗೂಲಿ ದೊರಕದವರು, ಅರೆಹೊಟ್ಟೆಯವರು, ಭಿಕ್ಷುಕರು, ಬಡವರು- ಇವರ ಸ್ತೋಮಗಳಿಗೆ ಕಡಿಮೆ ಇರಲಿಲ್ಲ.
ಈ ವ್ಯವಹಾರ ಹೀಗೆಯೆ ಮುಂದೆ ಸಾಗಿತು. ಊರ ಮುಖಂಡರು
ಮಿಕಿ ಮಿಕಿ ಪರಸ್ಪರ ನೋಡಿಕೊಂಡರು.ಅರ್ಚಕರು ಬೇಸತ್ತು ಗೊಣಗುಟ್ಟತೊಡಗಿದರು.ಹಸಿದು ಬಂದವರು ಅರೆ ಹೊಟ್ಟೆಯಲ್ಲೇ ಹಲವೊಮ್ಮೆ ಹಿಂದಿ ರುಗಿದರು. ಮನೆಗೆ ನೈವೇದ್ಯಕ್ಕೆ ಕೊಂಡೊಯ್ಯುವುದಕ್ಕೆ ತಡವಾಗುತ್ತದೆಂದು ಅರ್ಚಕರು ಚಡಪಡಿಸಿದರು.
- * * * * *
ಆಗಲೇ ಒಮ್ಮಿಂದೊಮ್ಮೆಲೆ ಜನರು ಮಾತನಾಡಿಕೊಳ್ಳತೊಡಗಿದ್ದು.
"ಹೀಗೆ ಅನುದಿನವೂ ಉಪದ್ರನವಿತ್ತರೆ ಹೇಗೆ?"
"ಅನ್ನಪೂರ್ಣಾ ದೇವಿಗೆ ಅತೃಪ್ತಿಯಾಗಿದೆ!"