ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬) ಯವನ ಯಾಮಿನೀ ವಿನೋದ ಎಂಬ ನೋಡಿ, ಅಯಾ ! ಕಲೀಫರು ಬರುವ ಕಾಲದಲ್ಲಿ ಸಕಲವೂ, ಕನವಾದ ಸ್ಥಿತಿಯಲ್ಲಿರಬೇಕೆಂಬುದನ್ನು ನೀನು ಚೆನ್ನಾಗಿ ತಿಳಿದಿರುವೆ. ಈಗ ಸಕಲ ಸಂರಂಭವೂ ಸಿದಸಿಗಬೇಕಾದರೆ, ಸ್ವಲ್ಪ ಕಾಲವು ಬೇಕಾಗುವುದು, ಆದುದರಿಂದ, ದಯಮಾಡಿ ತಮ್ಮ ಆತುರಭರಿತವಾದ ಕುತೂಹಲವನ್ನು ಕೊಂಚಕಾಲ ತಾಳಿಕೊಂಡಿರಬೇಕೆಂದು ಹೇಳಿ, ಸಮಾಧಾನಪಡಿಸಿರೆಂದು ಅವರಿಗಾಜೆಯನ್ನಿಟ್ಟು ಕಳುಹಿಸಿದಳು. ನಂತರ ಪರ್ಸಿಯಾ ರಾದ ಫುತ್ರನ ಮತ್ತು ಇರ್ಬತಿಹರನಬಳಿಗೆ ಬಂದು ಸಾವಕಾಶವಾಗಿ ಮಾತನಾಡಿ ಸಂತೋಷಪಡುವುದಕ್ಕೆ ಅವಕಾಶ ದೊರೆಯದೆ ಹೋದರಿಂದ, ಕಣಿ ರನ್ನು ಸುರಿಸುತ್ತ ಅವರ ಎದುರಿಗೆ ಬಂದು ನಿಂತುಕೊಂಡಳು. ಕೂಡಲೆ ರಾಜಪುತ್ರನು ತನಗೆ ಶುಭಸೂಚನೆ ಉಂಟಾಗಲಿಲ್ಲವೆಂದು ಹೆದರಿದಂತೆ, ಇರ್ಬ ತೆಹರನೂ ವ್ಯಸನಾಕಾಂತನಾಗಿ ಭಯದಿಂದ ನಡುಗುತ್ತ ಅಮಾ ! ನೀನು ನಮ್ಮಗಳನ್ನು ಹೊರಟುಹೋಗುವಂತೆ ಹೇಳುವುದಕ್ಕಾಗಿ ಬಂದಿರು ವಂತೆ ತೋರುವುದು. ಆದರೆ ಈ ರಾಜಪುತ್ರನು ನಿನ್ನನ್ನು ಅಗಲಿದ್ದು ಪುನಹ ಬಂದು ಕೊಡುವ ಸೌಭಾಗ್ಯವೆಂಬ ತಾಳೆಯನ್ನು ಹೊಂದಿದ್ದರೆ, ಭಗವಂತನ ದಯದಿಂದ ಆತನು ಸುಖವಾಗಿರಬಹುದು. ಇಲ್ಲವಾದರೆ ನಿನ್ನನ್ನು ಆತನು ಅಗಲಿಹೋಗುವುದೇ ಪ್ರಯಾಸವೆಂದು ತೋರುವುದೆಂದು ನುಡಿ ಯಲು, ರಾಜಕುಮಾರನು ತನ್ನ ಮನೋರಥವನ್ನು ಸರಿಯಾಗಿ ಗುರು ಶಿಸಿದ ಇರ್ಬತಿಹರನನ್ನು ವಂದಿಸಿ, ತಾನು ರಾಣಿಯನ್ನು ನೋಡಿ, ಕ ರನ್ನು ಸುರಿಸಿದನು. ರಾಣಿಯು, ಹಾ ! ಮಣನಾಥಾ ! ನಿನ್ನ ಅದೃಷ್ಯವನ್ನು ನನ್ನ ದೌರ್ಭಾಗ್ಯದೊಂದಿಗೆ ಕೂಡಿಸಿದ ಭಗವಂತನಿಂದ, ನೀನು ಧನ್ಯನಾದೆ. ನನ್ನನ್ನು ಅಗಲಿದಬಳಿಕ ನೀನು ಇತರವಾದ ಪರಮಾಶ್ಚರೈಗಳನ್ನು ಅತ್ರಾನಂದವನ್ನು ಸಹ ಹೊಂದಬಹುದು. ಆದರೂ, ಮತ್ತೊಂದುಸಾರಿ ನೋಡಬಹುದೆಂಬ ಕೋರಿಕೆಯನ್ನು ಸಹ ಹೊಂದಿ, ಕುತೂಹಲಿನ ಬಹುದು. ನಾನಾದರೋ, ದೌರ್ಭಾಗ್ಯಸಂಪನ್ನಳಾಗಿ, ವೆಹಿಸಿದ ಸುಗೂಸನನ್ನು ಕಡದವಳಾಗಿ ಅತ್ಯಂತವಾದ ವ್ಯಸನದಿಂದ ಕೊರಗು, ಗಣಪಿ ಯ ನಾದ ನಿನ್ನಂತಹ ಸುಂದರಾಂಗನನ್ನು ತೊರೆದು, ನಾನಾವಿಧವಾದ ಅಂತರಂಗ