ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಕಥಾಸಂಗ್ರಹ-೪ ನೆಯ ಭಾಗ ತರುವಾಯ ಮಾರ್ಗಶಿರಮಾಸದ ಶುಕ್ಲ ಪಕ್ಷದಲ್ಲಿ ಉತ್ತರಾನಕ್ಷ ತ್ರಯುಕ್ತ ಪಾದ ಅಷ್ಟಮಿಯ ದಿನದ ನಡುವಗಲೆಂಬ ಅಭಿಜಿನ್ನು ಹೂರ್ತದಲ್ಲಿ ಮಹಾಹರ್ಷ ದೊಡನೆ ವಿಜಯ ಪ್ರಯಾಣವನ್ನು ಬೆಳಿಸಿ ಶ್ರೀರಾಮನು ಹನುಮಂತನ ಮೇಲೆ ಕೂತು ಕೊಂಡು ಹೊರಟನು. ಲಕ್ಷ್ಮಣನು ಅಂಗದನ ಮೇಲೇರಿ ಬಂದನು, ಸಮಸ್ಯೆ ಕಪಿ ಸೇನೆಗಳೂ ನೀಲನ ಅಪ್ಪಣೆಯ ಮೇರೆಗೆ ದೊಡ್ಡ ದೊಡ್ಡ ಮರಗಳನ್ನೂ ಪರ್ವತ ಶಿಖರ ಗಳನ್ನೂ ಕಿತ್ತು ತೆಗೆದು ಕೊಂಡು ಆರ್ಭಟಿಸುತ್ತ ನಡೆದವು. ಆ ಸೇನಾ ಸಮೂಹದಲ್ಲಿ ಕರಡಿಗಳೇ ಕರಿಘಟೆಗಳು, ಮುಸುಗಳೇ ಕುದುರೆಗಳು, ಸಿಂಗಳೀಕಗಳೇ ತೇರುಗಳು, ಇತರ ಕಪಿಗಳೆಲ್ಲಾ ಕಾಲಾಳುಗಳು. ಈ ಪ್ರಕಾರವಾದ ಕಪಿಚತುರಂಗಬಲಕ್ಕೆ ತೋಳು ಗಳೇ ಗದಾಯುಧಗಳಾಗಿಯ ಉದ್ದವಾದ ಬಾಲಗಳೇ ಸಬಳಗಳಾಗಿಯ ಕೂರ ವಾದ ಉಗುರುಗಳೇ ಗರಗಸಗಳಾಗಿಯ ಕೋರೇ ಹಲ್ಲುಗಳೇ ಕತ್ತಿಗಳಾಗಿಯೂ ಬೆಟ್ಟ ಗುಡ್ಡ ಮರಗುಂಡುಗಳೇ ಕೋದಂಡಾದಿ ನಾನಾಯುಧಗಳಾಗಿಯ ಕಾಣಿಸು ತಿದ್ದುವು. ಇಂಥ ಕಪಿಸೇನಾ ಮಹಾಭಾರವನ್ನು ತಡೆಯಲಾರದೆ ಆದಿಶೇಷನ ಕೊರ ಳುಗಳು ಕುಸಿದುವು. ಕುಲಗಿರಿಗಳು ಜರುಗಿದವು. ಕೂರ್ಮನ ಉಸಿರು ಕುತ್ತಿಗೆಯಲ್ಲಿ ಮಿಡುಕಿತು. ದಿಗ್ಗಜಗಳು ತಲೆಯನ್ನು ಕೊಡಹಿದುವು. ಬ್ರಹ್ಮಾಂಡ ಮಂಡಲವು ಬಲು ಬೊಬ್ಬೆಯಿಂದ ತುಂಬಿತು. ಕಪಿಬಲದ ಪದಹತಿಯಿಂದೆದ್ದ ರಜೋರಾಜಿಯಿಂದ ಸೂರ್ಯನ ಬೆಳಕು ಚೆನ್ನಾಗಿ ಕಾಣಿಸಲಿಲ್ಲ. ಸಮುದ್ರವು ಮುಚಿ ಸಂಕಪ್ರಾಯವಾ ಯಿತು. ಮೇರುಗಿರಿಯ ಕೀಲುಗಳು ಕಳಚಿದುವು. ಊರ್ಧ್ವಲೋಕಗಳು ಅಲ್ಲಾಡಿ ದುವು. ಇಂಥ ಸೇನೆಯ ಮಹಾ ಭಾರದಿಂದ ಲೋಕವೇನಾಗುವುದೋ ಎಂದು ಹಿರಣ್ಯ ಗರ್ಭನು ಚಿಂತಿಸುತ್ತಿದ್ದನು. ಈ ರೀತಿಯಾಗಿ ಹೊರಟ ಸೈನ್ಯವು ಆ ದಿವಸದಲ್ಲೆ ಮಲಯಪರ್ವತದ ಬಳಿಗೆ ಹೋಗಿ ಅದರ ವಿಸ್ತಾರವಾದ ತಪ್ಪಲಲ್ಲಿ ದಳಪತಿಯಾದ ನೀಲನ ಅಪ್ಪಣೆಯ ಮೇರೆಗೆ ಬೀಡುಬಿಟ್ಟಿತು. ಮಾರನೆಯ ದಿವಸ ಬೆಳಗಾದ ಕೂಡಲೇ ಅಲ್ಲಿಂದ ಹೊರಟು ಮರು ದಿವಸಗಳಲ್ಲಿ ಸಮುದ್ರದ ದಡವನ್ನು ಸೇರಿತು. ಆ ಸಮುದ್ರರಾಜನು ತೆರೆಗಳೆಂಬ ತೋರಣಗಳಿಂದಲೂ ನೊರೆಗಳೆಂಬ ಬೆಳುಗೊಡೆಗಳಿಂದಲೂ ತುಂತುರು ಹನಿಗಳೆಂಬ ಚೌಕಿಗಳಿಂದಲೂ ಸುಳಿಗಳ ಘುಳು ಘುಳು ಧ್ವನಿಗಳೆಂಬ ಭೇರ್ಯಾದಿವಾದ್ಯರವಗಳಿಂ ದಲೂ ಕೂಡಿ ಬಂದು ರಘುಪತಿಯನ್ನು ಇದಿರುಗೊಳ್ಳುವವನ ಹಾಗೆ ಮೆರೆದನು. ಆಗ ಸಕಲ ಸೇನಾನಾಯಕರೂ ಕಡಲ ದಡದಲ್ಲಿಳಿದರು. ಅಲ್ಲಿ ಶ್ರೀರಾಮನಿಗೆ ಎಳೆಚಿಗುರು ಗಳ ಹೊದಿಕೆಯಿಂದ ದಿವ್ಯವಾದ ಅರಮನೆಯ ಓಲಗದ ಚಾವಡಿಯ ಕ್ಷಣಮಾತ್ರ ದಲ್ಲಿ ಉಂಟಾದುವು. ಹೀಗೆ ಎರಡನೆಯ ಕಡಲಿನಂತೆ ಬಂದು ಕಡಲ್ಲಡದಲ್ಲಿ ಆದ ಕಪಿಬಲವನ್ನು ಕಂಡು ಅಲ್ಲಿದ್ದ ರಾವಣನ ಕಡೆಯ ರಕ್ಷಸರು ಹೆದರಿ ಓಡಿಹೋಗಿ ಒಡೊಲಗದ ಚಾವಡಿಯಲ್ಲಿ ಕೂತಿದ್ದ ರಾವಣನ ಮುಂದೆ ಕೈ ಮುಗಿದು ತಾವು ಹೊತ್ತು ಕೊಂಡು ಬಂದ ಭಯದ ಬೀಜಗಳ ಬಹು ಭಾರದಿಂದ ಬಳಲಿದರೋ ಎಂಬಂತೆ ಕಂಗೆಟ್ಟು ಒಂದೆ