ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಕಥಾಸಂಗ್ರಹ-೪ ನೆಯ ಭಾಗ ಕೋಪದೃಷ್ಟಿ ಯಿಂದ ನೋಡುತ್ತ ಭಟರನ್ನು ಕುರಿತು ಹೂ ! ಹೂ ! ಸಾವಕಾಶವೇ ತಕ್ಕೆ ? ಬೆಟ್ಟ ಗಳು ಬೇಗಬೇಗ ಬರಲಿ ಎಂದು ಆರ್ಭಟಿಸುತ್ತಿರಲು ಅದನ್ನು ಕೇಳಿ ಸುಗ್ರೀವನು ಸೇತುವು ಇಷ್ಟು ಮಾತ್ರದಿಂದ ಬೇಗ ಸಾಗುವುದಿಲ್ಲ ವೆಂದು ಕೋಪ ದಿಂದೆದ್ದು ಉದಯ ಪರ್ವತಕ್ಕೆ ಹಾರಿ ಅದರ ಶಿಖರವನ್ನು ಕಿತ್ತು ತನ್ನ ಎಡಗೈ. ಯಲ್ಲಿಟ್ಟುಕೊಂಡು ಅಲ್ಲಿಂದ ಅಸ್ತಾಚಲಕ್ಕೆ ಹಾರಿ ಅದರ ಶಿಖರವನ್ನು ಕಿತ್ತು ಬಲಗೈ ಯಲ್ಲಿಟ್ಟು ತೆಗೆದುಕೊಂಡು ಬಂದು ನಳನ ಕೈಯಲ್ಲಿ ಕೊಟ್ಟನು. ಕೂಡಲೆ ವಿನತನು ಶತಕೋಟಿಯೆಂಬ ಪರ್ವತವನ್ನೂ ಸುಷೇಣನು ಸುದರ್ಶನಾದ್ರಿಯನ್ನೂ ನನಸನು ಪಾರಿ ಯಾತ್ರಮಹೀಧರವನ್ನೂ ವೃಷಭನು ವೃಷಭಾಚಲವನ್ನೂ ಗವಯನು ಗೋವರ್ಧನ ಭೂಧರವನ್ನೂ ಗವಾಕ್ಷನು ಅಂಜನಶಿಖರಿಯನ್ನೂ ತೆಗೆದು ಕೊಂಡು ಬಂದು ನಳನ ಕೈಗೆ ಕೊಟ್ಟರು. ಅರರೇ ! ಶಿವಶಿವಾ ! ಈ ಸಾಹಸವನ್ನು ಹೊಗಳುವುದಕ್ಕೆ ಎರಡು ಸಾವಿರ ನಾಲಿಗೆಗಳುಳ್ಳ ಶೇಷನಿಗಾದರೂ ಸಾಧ್ಯವೇ ? ಕುಲಗಿರಿಗಳೊ ? ಕಿಡಿಕಟ್ಟು ಗಳೋ? ವಾನರವೀರರೋ? ಅದ್ಭುತವಜ್ರ ಶರೀರಗಳೊ? ಸುಮುಖ ದುರ್ಮುಖ ತಾರ ದಧಿಮುಖ ಕುಮುದ ಮೈ೦ದ ದ್ವಿವಿದ ಶತಬಲಿ ರುಮ ರುಮಣಕ ಜೋತಿರ್ಮುಖ ಗಜ ಗಂಧಮಾದನರೇ ಮೊದಲಾದ ಕಪಿನಾಯಕರು ಮೇರು ಮಹೀಧರವನ್ನು ಬಳ ಸಿದ ಕಡಲ ನಡುವೆಯಿರುವ ಗಿರಿಗಳನ್ನೆಲ್ಲಾ ತಂದೆಟ್ಟಿದರು. ಈ ವರೆಗೂ ಯಾರ ಹವಣ ಸ್ತೋತ್ರಾರ್ಹವಾದುದಲ್ಲ. ವಾಲಿ ಕುಮಾರ ನಾದ ಅಂಗದನ ಸಾಹಸವು ಎಲ್ಲರನ್ನೂ ಮೀರಿಸಿತು. ಮೂವತ್ತು ಮೂರು ಕೋಟಿ ದೇವ ತೆಗಳಿಗೆ ಅಧೀಶ್ವರನಾದ ಇಂದ್ರನ ಮೊಮ್ಮಗನಲ್ಲವೇ ? ಅಂಥವನ ಪರಾಕ್ರಮವನ್ನು ಹೇಳಬೇಕೆಂಬುದೇನು ? ಕೂಗಿ ಬೊಬ್ಬಿರಿದು ಕೈಲಾಸಪರ್ವತದ ಬಳಿಗೆ ಹಾರಿ ನೋಡಿಆಹಾ ಇದೊಂದು ಗಿರಿಯಿಂದಲೇ ನಮ್ಮ ಸೇತುಬಂಧನಕಾರ್ಯವು ಮುಗಿದುಹೋ ಗುವುದು. ನಾನು ಇದನ್ನು ತೆಗೆದುಕೊಂಡು ಹೋಗಿ ಕೊಡುವುದರಿಂದ ನಳನ ಕೋಪವು ಅಡಗುವುದು. ಪೂರ್ವದಲ್ಲಿ ರಾವಣನು ಈ ಪರ್ವತವನ್ನು ಅಲ್ಲಾಡಿಸಿ ಸಿಕ್ಕಿ ನೊಂದು ಬಲಹೀನನಾಗಿ ಗೋಳಾಡಿದನು. ನಾನು ಇಂಥ ಪರ್ವತವನ್ನು ಕಿತ್ತು ಎತ್ತಿ ಕೊಂಡು ಹೋಗಿ ಸಮುದ್ರದಲ್ಲಿ ಹಾಕಿದರೆ ರಾವಣನು ಆ ವರ್ತಮಾನವನ್ನು ಕೇಳಿ ನನಗೆ ಹೆದರಿ ಜಗಳವನ್ನ ಪೇಕ್ಷಿಸದೆ ಶರಣಾಗತನಾಗಿ ಬಂದು ರಾಮನಿಗೆ ಸೀತೆಯನ್ನೂ ಪ್ಪಿಸಿ ಓಡಿಹೋಗುವನು ಎಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ ತನ್ನ ಮಹಾ ಬಾಹುಗ ಳಿಂದ ಆ ಕೈಲಾಸನಗರವನ್ನು ಬಿಗಿಯಾಗಿ ತಬ್ಬಿ ಹಿಡಿದು ಜಡಿದು ಅಲ್ಲಾಡಿಸಲು ತಿರುಗಿ ಮರ್ಖನಾದ ರಾವಣನು ಬಂದನೆಂದು ಶಿವನ ಪಟ್ಟಣವು ಬೆದರಿತು. ಆಗ ಶಂಕರನು ಜ್ಞಾನದೃಷ್ಟಿ ಯಿಂದ ತಿಳಿದು ಅಂಗದನ ಬಳಿಗೆ ಬಂದು-ಎಲಾ, ನೀನು ಯಾರೋ ? ಈ ಗಿರಿಯನ್ನು ಕೀಳುವಂತೆ ನಿನಗೆ ಅಪ್ಪಣೆಯನ್ನಿ ತವರಾರು ? ಬಿಟ್ಟು ಆಚೆಗೆ ಹೋಗು ಎನ್ನಲು ಅಂಗದನು ಕಿರುನಗೆಯಿಂದ ಕೂಡಿ ಶೂಲಿಯನ್ನು ನೋಡಿಹೋಗೆಂದು ಹೇಳುವಷ್ಟು ಸಲಿಗೆಯು ನಿನಗೆ ಯಾರಿಂದುಂಟಾಯಿತು ? ಸುಮ್ಮನಿರು ಎಂದು ಹೇಳಿ ಮಹಾದೇವನನ್ನು ಗಣಿಸದೆ ಕೈಲಾಸಪರ್ವತವನ್ನು ಸಮ