ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಕಥಾಸಂಗ್ರಹ-೪ ನೆಯ ಭಾಗ ಳಿಗಳೆಂಬ ಮಹಾಲಯಗಳಿಗೆ ಆಧಾರಸ್ತಂಭವಾಗಿರುವುದೆಂದು ನೀನು ತಿಳಿಯೆಯಾ ? ನಿನ್ನೊ ಡೆಯನಾದ ರಾಮನ ವೃದ್ದಿ ಯನ್ನೇ ನೀನು ವಿಚಾರಿಸದೆ ಹೋದೆಯಲ್ಲಾ! ಈ ನಗರವನ್ನು ಕಿತ್ತು ಹಾಕಿದ ಮೇಲೆ ಕಡಲೆಲ್ಲಿರುವುದು ? ನೀನೆಲ್ಲಿ ನಿಲ್ಲುವಿ? ನಿನ್ನ ರಸನೆಲ್ಲಿ ರುವನು ? ಲಂಕೆಯಲ್ಲಿರುವದು ? ಸೀತಾರಾವಣರ ಸ್ಥಿತಿಯಂತಿರುವುದು ? ಹಗೆಗಳೆಲ್ಲಿ ನಿಲ್ಲುವರು ? ಛೇ ! ಅವಿಚಾರಮತಿಯೇ, ಹೋಗೆಂದನು. ಆಗ ಅಂಜನಾತನಯನು ಆ ಮಾತುಗಳನ್ನು ಕೇಳಿ ನಾಲೊಗನನ್ನು ಕುರಿತು -ನೀವು ಅನಾದಿಸಂಸಿದ್ಧ ವಾಗಿ ಲೋಕಗಳನ್ನು ನಿರ್ಮಾಣಮಾಡುವುದೆಂಬುದೊಂದೇ ಕಾರ್ಯದಲ್ಲಿ ಆಸಕ್ತರಾಗಿರುವುದರಿಂದ ಉನ್ನಿಷದ್ಭುದ್ಧಿಶಕ್ತಿಯಿಲ್ಲದವರಾಗಿದ್ದೀರಿ. ಮೇಲೆ ವೃದ್ದಾ ಪ್ರವೊಂದೆಡೆಗೊಂಡಿದೆ. ಅದು ಕಾರಣ ನನ್ನ ಉದ್ದೇಶ ಶಕ್ತಿಗಳಿಗೆ ಫಲ ವಿಂಥದೆಂದು ಯೋಚಿಸಿ ತಿಳಿಯಲಾರದವರಾಗಿದ್ದೀರಿ. ಆದರೂ ಚಿಂತೆಯಿಲ್ಲ. ಅದನ್ನು ನಾನೇ ವಿವರಿಸಿ ಹೇಳುತ್ತೇನೆ ಕೇಳಿರಿ. ನೀವು ಈ ಸುರಾಚಲದ ವಿಚಾರವು ನನಗೆ ತಿಳಿ ಯದೆಂದು ಹೇಳುತ್ತೀರೋ ? ಹಾಗಲ್ಲ, ನಾನು ಇದರ ಸಂಗತಿಗಳನ್ನೆಲ್ಲಾ ಮೊದಲೇ ತಿಳಿದಿದ್ದೇನೆ. ಈಗ ನಾನು ಈ ರನ್ನ ದಪ್ಪಲನ್ನು ಕಿತ್ತು ಇದನ್ನು ಆಧಾರೀಕರಿಸಿಕೊಂಡಿ ರುವ ಸಮಸ್ತ ಲೋಕಗಳನ್ನೂ ನನ್ನ ಬಾಲದಿಂದ ಧರಿಸಿ ಕೈ ಕಾಲು ಮೊದಲಾದ ಅ೦ಗ ಗಳಿಂದ ರಾಮನ ಸೇವೆಯನ್ನು ಮಾಡಿ ವಿರೋಧಿಯಾದ ದಶಕಂಠನನ್ನು ಸಂಹರಿಸಿದ ಮೇಲೆ ಪುನಃ ಈ ರತ್ಕಾಸನವನ್ನು ಅಲ್ಲಿಂದ ತಂದು ಇಲ್ಲೇ ಇಟ್ಟು ನನ್ನ ಬಾಲವನ್ನು ಬಿಡಿಸಿಕೊಂಡು ನನ್ನೊಡೆಯನಾದ ರಘುವಂಶೋತ್ತಂಸನ ಸೇವಾರ್ಥವಾಗಿ ಅಯೋ ಧ್ಯಾನಗರವನ್ನು ಕುರಿತು ಹೋಗುವೆನು ಎಂದು ನಾನು ಮೊದಲೇ ನಿಶ್ಚಯಿಸಿದ್ದೇನೆ. ಅದು ಕಾರಣ ನೀವು ನಿಮ್ಮ ದಾರಿಯನ್ನು ಹಿಡಿದುಕೊಂಡು ಹೋಗಿರಿ ಎನ್ನಲು ಅಂಚೆ ದೇರನು ಆ ಮಾತುಗಳಿಗೆ ಪ್ರತಿಯಾಗಿ ಉತ್ತರವನ್ನು ಹೇಳುವುದಕ್ಕೆ ಉಪಾಯವಿಲ್ಲ ದವನಾಗಿ ಪೊಂಬೆಟ್ಟವನ್ನು ಕೀಳುತ್ತಿರುವ ಹನುಮಂತನ ಹೊಟ್ಟೆಯಲ್ಲಿ ತನ್ನ ನಾಲ್ಕು ಮೊಗಗಳನ್ನೂ ಚಾಚಿ ತನ್ನ ಕೈಗಳಿಂದ ಅವನ ಕೈಗಳನ್ನು ಹಿಡಿದುಕೊಂಡು ದೈನ್ಯ ದಿಂದ ಎಲೈ ವಾಯುಪುತ್ರನೇ ! ಕೇಳು ನಿನ್ನ ರಸನಾದ ರಾಮನು ನನ್ನನ್ನು ಈ ಕಲ್ಪಕ್ಕೊಡೆಯನನ್ನಾಗಿ ನೇಮಿಸಿರುವನು. ಮುಂದಣ ಕಲ್ಪಕ್ಕೆ ನಿನ್ನನ್ನು ಒಡೆಯನ ನ್ನಾಗಿ ತೀರ್ಪು ಮಾಡಿರುವನು. ಮುಂದುಂಟಾಗುವ ನಿನ್ನ ಪ್ರಭುತ್ವದಲ್ಲಿ ನಿನ್ನ ಮನಸ್ಸು ಬಂದಂತೆ ಮಾಡಿಕೊಳ್ಳುವವನಾಗು. ನಮ್ಮ ಅಧಿಕಾರಕಾಲವಾಗಿರುವ ಈಗ ನೀನು ಸರ್ವರಂತೆ ನಮ್ಮ ಮಾತನ್ನು ಮನ್ನಿಸು ಎಂದು ಹೇಳಿ ತಬ್ಬಿಕೊಂಡನು. ಆಗ ಮರು ತನು ಜನು. ಮೊದಲು ನೀವೇ ರಾವಣಾದಿಗಳಿಗೆಲ್ಲಾ ವರವನ್ನು ಕೊಟ್ಟು ಅಧರ್ಮ ವನ್ನು ಹೆಚ್ಚಿಸಿದಿರಿ. ಈಗ ಅಂಥ ದುಷ್ಟರನ್ನು ಕೊಲ್ಲುವವರ ಪ್ರಯತ್ನ ಕೂ ತಡೆಮಾ ಡುತ್ತೀರಿ. ಇದಾವಧರ್ಮಸಾರವೋ ನನಗೆ ತಿಳಿಯದು. ಆಗಲಿ, ಹೇಗಾದರೂ ನೀವು ಜಗತ್ತಿನ ಪ್ರಭುತ್ವವನ್ನು ಹೊಂದಿದವರಾಗಿದ್ದೀರಿ. ಆದುದರಿಂದ ಇದೊಂದು ಸಾರಿ ನಿಮ್ಮ ಸ್ಪಣೆಯನ್ನು ಮನ್ನಿ ಸುವೆನು. ನಿಮ್ಮೊಡನೆ ನನಗೆ ವಾದವೇಕೆ ? ಬಿಜಯಮಾಡಿರಿ ಎಂದುಕೊಳ್ಳುತ್ತ ಓಸರಬಾರದಂತೆ ಸುರಗಿರಿಯನ್ನು ಯಥಾಸ್ಥಾನದಲ್ಲಿಟ್ಟು ಅದರ