ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಕಥಾಸಂಗ್ರಹ-೪ ನೆಯ ಭಾಗ 8, THE BATTLE OF LANKA; DEATH OF INDRAJITU ೮, ಇಂದ್ರಜಿತ್ಸಂಹಾರ ಇತ್ತ ಲಂಕಾದುರ್ಗದಲ್ಲಿ ನಕ್ತಂಚರ ಚಕ್ರೇಶ್ವರನಾದ ರಾವಣನು ತನ್ನ ಪ್ರಿಯ ಸಹೋದರನೂ ಅಸಹಾಯ ಶೂರನೂ ಆದ ಕುಂಭಕರ್ಣನು ಯುದ್ಧರಂಗದಲ್ಲಿ ಮಡಿದುಹೋದನೆಂಬ ಸುದ್ದಿಯನ್ನು ಕೇಳಿ ಅನಿವಾರ್ಯ ದುಃಖದಿಂದ ಕೂಡಿ ಹಾಸಿ ಗೆಯ ಮೇಲೆ ಬಿದ್ದು ಹೊರಳುತ್ತ ಚಿಂತೋದಧಿಯಲ್ಲಿ ಬಿದ್ದು ದಡವನ್ನು ಕಾಣದೆ ಕಂಗೆಟ್ಟು ಹರವಸಂಗೊಂಡನು. ಆ ಕಾಲದಲ್ಲಿ ಶೂರನಾದ ಇಂದ್ರಜಿತೇ ಮೊದಲಾದ ರಾಕ್ಷಸ ನಾಯಕರು ಬಂದು ನೋಡಿ ವ್ಯಸನಾಗ್ನಿ ತಪ್ತರಾದರೂ ಮು೦ಗೆಡದೆ ರಾವ ಣನಿಗೆ ಶೈಕ್ಲೋಪಚಾರವನ್ನು ಮಾಡಿದುದರಿಂದ ಅವನು ಮರ್ಧೆ ತಿಳಿದೆದ್ದು ಕುಳಿತು ಹಾ ಕುಂಭಕರ್ಣನೇ ! ನನ್ನ ಮದಿಸಿದ ಪಟ್ಟದಾನೆಯೇ ! ಸಾಮಾನ್ಯರಾದ ನರ ರಿಗೂ ಕಪಿಭಟರಿಗೂ ಸೋತು ಮಡಿದುಹೋದೆಯಾ ! ಈ ನಿಶಾಚರ -ಚಕ್ರವು ಸಲಗ ನಿಲ್ಲದ ಆನೆಗಳ ತಂಡದಂತಾಯಿತು. ವಿಭೀಷಣನು ಶತ್ರು ಪಕ್ಷವನ್ನು ವಹಿಸಿದಾಗಲೇ ನನ್ನೆಡದ ಭುಜಬಲವು ಬಯಲಾಯಿತೆಂದು ತಿಳಿದಿದ್ದರೂ ನಿನ್ನ ತ್ರಿಲೋಕಾದ್ಭುತ ಒಲಾತಿಶಯವನ್ನು ನೆನಸಿ ಧೈರ್ಯಗೊಂಡಿದ್ದೆನು. ದುರ್ವಿಧಿಯು ನಿನ್ನನ್ನೂ ಮುರಿದು ಹಾಕಿತೇ ! ನಿನ್ನ ಬಲದಿಂದ ಲೋಕತ್ರಯದ ವೀರರನ್ನೂ ತೃಣಕ್ಕೆಣೆಯಾಗಿ ತಿಳಿದಿದ್ದೆ ನಲ್ಲಾ ! ಈ ಲಂಕಾನಗರದ ಅರಮನೆಯಲ್ಲಿ ನೀನು ಮಲಗಿದ್ದುದರಿಂದ ಸುರನರೋ ರಗನಾಯಕರೆಲ್ಲರೂ ಲಂಕೆಯೆಂಬ ಹೆಸರನ್ನು ಕೇಳಿದಮಾತ್ರದಿಂದಲೇ ಬೆಚ್ಚಿ ಬಿದ್ದು ಮೂರ್ಛಹೊಂದುತ್ತಿದ್ದರಲ್ಲಾ ! ಲಂಕಾನಗರದ ಒಡೆಯತನದ ಬಲವು ಬಯಲಾ ದಂತೆ ನೀನು ಮಡಿದು ಮಾಯವಾದಿಯಾ ! ಅಯ್ಯೋ, ನನ್ನ ಭುಜಬಲವೇ ! ನಿನಗೆ ಅಂತ್ಯ ಕಾಲವು ಒದಗಿತೇ ! ಇದು ವರೆಗೂ ಯುದ್ದ ರಂಗದಲ್ಲಿ ನಿನಗೆದುರಾಗಿ ಹಿಂದಿರು ಗಿದ ವೀರರಿಲ್ಲವಲ್ಲಾ ! ಅರಿವೀರರು ನಿನ್ನನ್ನು ಸ್ವಪ್ನದಲ್ಲಿ ನೋಡಿ ಆರ್ತಧ್ವನಿಯಿಂದ ಮೃತಿಹೊಂದುತ್ತಿದ್ದರಲ್ಲಾ ! ನಮ್ಮ ಕುಲವಿರೋಧಿಗಳಾದ ದೇವತೆಗಳಿಗೆ ತೃಪ್ತಿಕರ ವಾದ ಯಜ್ಞ ಕ್ರಿಯೆಗಳು ರಾಕ್ಷಸಕುಲೋದ್ದಾರಕನಾದ ನಿನ್ನಿಂದ ಪ್ರಳಯವನ್ನು ಹೊಂದಿದ್ದವಲ್ಲಾ ! ಹಾ, ವೀರಭಾತೃವಿಹೀನನಾದೆನೇ ಎಂದು ಪುನಃ ಮರ್ಧೆ ಹೊಂದಿದನು. ಆ ಮೇಲೆ ಸ್ವಲ್ಪ ಹೊತ್ತಿನ ಮೇಲೆ ಮ ರ್ಛ ತಿಳಿದೆದ್ದು ಕುಂಭಕರ್ಣ ನನ್ನು ನೆನೆನೆನೆದು ಮರುಗಿ ಹಂಬಲಿಸುತ್ತಿರುವ ತಂದೆಯ ಬಳಿಗೆ ಬಂದು ಇಂದ್ರಜಿತ್ತು -ಎಲೈ ತಂದೆಯೇ ! ಲಾಲಿಸು, ಲೋಕದ ಜೀವಿಗಳಿಗೆ ಜನನವು ಹೇಗೆ ಸ್ವಭಾವವೊ ಹಾಗೆ ಮರಣವೂ ಸ್ವಭಾವವಾದುದು. ಇಷ್ಟು ಮಾತ್ರಕ್ಕಾಗಿ ಸರ್ವವಿದ್ಯಾವಿಶಾರದ ನಾದ ನೀನು ಮರುಗುವದುಚಿತವೇ ? ಅದರಲ್ಲಿ ನಮ್ಮ ರಾಕ ಸಕುಲದವರು ಇರುವ ವರೆಗೂ ಜಗದೀಕರತೆಯಿಂದ ಬದುಕಿ ವೀರರೊಡನೆ ಕಾದಿ ಮಡಿಯುವುದು ಶ್ರೇಯ ಸ್ಮರವು. ಅದರಂತೆ ನನ್ನ ಚಿಕ್ಕಪ್ಪನಾದ ಕುಂಭಕರ್ಣನು ಅಸಂಖ್ಯಾತರಾದ ಅರಿಭಟ ರನ್ನು ಬಡಿದುರುಳಿಸಿ ಹಿಂದೆಗೆಯದೆ ಕಾದಿ ಶತ್ರುಕುಲದವರ ಎದೆಗುಬ್ಬಸವನ್ನು ಂಟು