ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಕಥಾಸಂಗ್ರಹ-೪ ನೆಯ ಭಾಗ ನಿನ್ನ ಬಳಿಗೆ ಕಳುಹಿಸಿದರು. ಈಗ ನಾವು ಸಂತೋಷದಿಂದ ಕಳುಹಿಸಿರುವ ರಥದ ಮೇಲೆ ನೀನು ಕುಳಿತು ಕೊಂಡು ಯುದ್ಧ ಮಾಡುವುದನ್ನು ನೋಡಬೇಕೆಂಬ ಕುತೂಹಲವು ನಮ್ಮೆ ಲರಿಗೂ ಬಹಳವಾಗಿದೆ. ಅದು ಕಾರಣ ಈ ನಮ್ಮ ಕೋರಿಕೆಯನ್ನು ಕೃಪೆಮಾಡಿ ನೆರವೇ ರಿಸ ಬೇಕೆಂದು ಪ್ರಾರ್ಥಿಸುತ್ತಾರೆ. ಸರ್ವಜ್ಞನಾದ ನೀನು ಅವರ ಪ್ರಾರ್ಥನೆಯನ್ನು ನೆರವೇರಿಸಬೇಕೆಂದು ಬಹು ವಿಧದಿಂದ ಹೇಳಲು ಶ್ರೀರಾಮನು ಆ ಮಾತುಗಳಿಗೆ ಒಡಂ ಬಟ್ಟು ಇ೦ದ್ರನ ರಥವನ್ನೇರಿದನು. ಆಗ ವೀರನಾದ ಆಂಜನೇಯನು ಎದ್ದು ಬೊಬ್ಬಿರಿದು ಹೋಗಿ ಆ ದಿವ್ಯ ರಥದ ಧ್ವಜದಂಡಾಗ್ರದಲ್ಲಿ ಕುಳಿತನು. ಸುರರಾಜನ ಸಾರಥಿಯಾದ ಮಾತಲಿಯು ರಾಮನ ಅಡಿದಾವರೆಗಳಿಗೆ ನಮಸ್ಕರಿಸಿ ರಥದ ಮೇಲೆ ಹತ್ತಿ, ಕುದುರೆಗಳ ಕಡಿವಾಣಗಳನ್ನು ಹಿಡಿದು ಅವುಗಳ ಕುತ್ತಿಗೆಗಳ ಇಕ್ಕೆಲಗಳನ್ನೂ ತಟ್ಟಿ ಮೈದಡವಿ ಎದುರಿಗಿರುವ ಹಗೆಯ ಸಾರಥಿಯನ್ನು ಮೂದಲಿಸಿ ಕುದುರೆಗಳನ್ನು ಮುಂದಕ್ಕೆ ನಡಿಸಿದನು. ಆಗ ದೇವತೆಗಳು ಸಂತೋಷದಿಂದ ಶ್ರೀರಾಮನ ಮೇಲೆ ಪೂಮಳೆಗರೆದು ` ವಿಜಯಿ ಭವ ಎಂದು ಹರಸಿ ದೇವದುಂದುಭಿಗಳನ್ನು ತಾಡಿಸಿದರು. ಕೂಡಲೆ ರಾಮರಾವ ಣರ ರಥಗಳೆರಡೂ ಸಮರರಂಗದಲ್ಲಿ ಎದುರೆದುರಾಗಿ ನಿಂತವು. ಆಗ ರಥಿಕರಿಬ್ಬರ ಸಿಂಹನಾದಗಳೂ ಸಾರಥಿಗಳಿಬ್ಬರ ಚಪ್ಪರಣೆಯ ಮಹಾ ವೀರರಾದ ರಾಮರಾವ ಣರ ಉದ್ದಂಡ ಧನುವಾ೦ಡಗಳ ಮೌರ್ವಿನಿನಾದಗಳೂ ಎರಡು ರಥಚಕ್ರಗಳ ಚೀತ್ಕಾರ ಧ್ವನಿಗಳೂ ಅವರೀಲ್ವರೂ ಪ್ರಯೋಗಿಸುತ್ತಿರುವ ಬಾಣಗಳ ಭೀಂಕೃತಿ ಭೀಕ ರಧಾನವೂ ಒಟ್ಟಾಗಿ ಸೇರಿ ಮೊದಲು ದೇವಾಸುರರ ದೋರ್ದಂಡಾಭಿಘಾತದಿಂದ ಪ್ರಮಥಿತವಾದ ಮಹಾ ಸಮುದ್ರಸಂಭೂತವಾದ ಕೋಲಾಹಲ ಧ್ವನಿಗಿಂತಲೂ ಮಿಗಿ ಲಾಗಿ ಲೋಕತ್ರಯವನ್ನೂ ತುಂಬಿ ಕಿವುಡುಮಾಡಿತು. ಕಲಹವು ಬಲವಾಗಲು ಆಗ ಕುಪಿತನಾದ ದಶಾನನನು ರಾಮನನ್ನು ಕುರಿತು-ಎಲೈ ರಾಮನೇ ! ಕೇಳು. ನಿನಗಿನ್ನೇಕೆ ಸೀತಾಪೇಕ್ಷೆಯು ? ನೀನು ಶುದ್ಧ ಮಢನೆಲಾ ! ಇಂದ್ರ ಪ್ರೇಷಿತವಾದ ರಥದ ಬಲವನ್ನು ನಂಬಿ ಬೆರೆತಿರುವಿಯೋ ? ನಾನು ಬ್ರಹೈದ್ರಾದಿ ಸುರಸಂಕು ಅವು ಸಮರಭೂಮಿಯಲ್ಲಿ ಎದುರಾದಾಗ ಅವರೆಲ್ಲರನ್ನೂ ಒಂದು ತೃಣಕ್ಕಾದರೂ ಸಮಾನವಾಗಿ ಬಗೆಯುವವನಲ್ಲ. ಈ ನನ್ನ ಶೌರ್ಯಾಗ್ನಿಯಿಂದ ಕ್ಷಣಕಾಲದಲ್ಲಿ ಮೂರು ಲೋಕಗಳನ್ನೂ ಸುಟ್ಟು ಬೂದಿಮಾಡಿ ಬಿಡಬಲ್ಲೆನು. ನನ್ನ ಮನೋನಿಶ್ಚಯವು ಹೀಗಿರುವಲ್ಲಿ ನೀನು ದುರಾಶಾಪಾಶಬದ್ದನಾಗಿ ವ್ಯರ್ಥಾಯಾಸದಿಂದ ಬಳಲಿ ಕೆಡು ತಿರುವಿಯಲ್ಲಾ ಅಂದನು. ಆಗ ಸಂಗ್ತಿರಥನಂದನನು-ಎಲಾ ರಣಮರ್ಖ ನಾದ ರಾವಣನೇ ! ಕೇಳು. ನಿನಗಿರುವ ದುರ್ಗವ್ರವೆಂಬ ಹುಚ್ಚು ನಿನ್ನ ತಲೆಗೇರಿರು ವುದು, ಸನ್ನಿ ಪಾತಜ್ವರಪೀಡಿತನು ತನ್ನ ಯುಕ್ತಾಯುಕ್ತ ವನ್ನು ಹೇಗೆ ತಿಳಿಯನೋ ಹಾಗೆ ಉನ್ಮತ್ತನಾದ ನಿನಗೆ ನಿನ್ನ ಹಿತಾಹಿತವು ತಿಳಿಯದು. ದುರಾಶಾಪಾಶಬದ್ಧ ನಾಗಿ ಮೃತ್ಯುದೇವತೆಗೆ ಮುಂದಲೆಯನ್ನು ಕೊಟ್ಟಿರುವವನು ನೀನು. ಲೋಕದಲ್ಲಿ ಸ್ವಾರ್ಥಾಪೇಕ್ಷೆಗೆ ಹಾನಿಯೊಂದೇ ಮುಖ್ಯ ಲಾಭವಾಗಿರುವುದು. ಅಂಥ ನಿನಗೆ