ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 ಕಥಾಸಂಗ್ರಹ-೪ ನೆಯ ಭಾಗ ಪರಾಕ್ರಮಗಳನ್ನು ನೆನೆ ನೆನೆದು ಹಂಬಲಿಸಿ ರೋದಿಸಿ. ಬಾಯಾರಿ ಕಂಗೆಟ್ಟು ಸರ್ವಾ೦ತಃ ಪುರಸ್ನಿಯರೊಡನೆ ಹೊರಟು ರಣಭೂಮಿಗೆ ಬಂದು ರಾವಣನ ಹೆಣದ ಮೇಲೆ ಬಿದ್ದು ಹೊರಳುತ್ತ ಕಲ್ಕರಗಳು ಕರಗುವಂತೆ ಕೊರಗಿ ಮೊರೆಯಿಡುತ್ಯ-ಹಾ , ಕಾಂತನೇ ಮಡಿದಿಯಾ ? ವೀರಪತ್ನಿ ಯೆಂಬ ಬಿರುದು ನಿನಗಿಂದು ಹೋಯಿತೇ ? ಅಂತಃಪುರಸ್ತಿ ಯಾದ ನನ್ನನ್ನು ತಿರಸ್ಕರಿಸಿ ವೀರಲಕ್ಷ್ಮಿಯನ್ನು ವರಿಸಿದಿಯಾ ? ಸರ್ವಕಾಲದಲ್ಲೂ ಸರ್ವಾವಸ್ಥೆಗಳಲ್ಲೂ ನಿನ್ನ ನೆನಪನ್ನು ಬಿಟ್ಟಿರಿಯದ ನನ್ನಲ್ಲಿ ಅಪರಾಧವೇನಿರುವುದು ? ಆಜ್ಞಾನಿಯಾದ ನನಗೆ ವಿವೇಕವನ್ನು ಬೋಧಿಸುವುದು ಸರ್ವಜ್ಞನಾದ ನಿನಗೆ ಧರ್ಮವ ವೇ ? ಸತ್ಯಪೂರ್ವಕವಾಗಿ ಮಹಾತ್ಮನಾದ ನಿನ್ನ ಕೈ ಹಿಡಿದು ಬಾಳುತ್ತಿದ್ದ ನನ್ನನ್ನು ಬಿಟ್ಟು ಪರಲೋಕವಾಸಿಯಾಗುವುದು ನಿನ್ನಂಥವರಿಗೆ ವಿಹಿತವೇ ? ನಿಷ್ಕಾರಣವಾಗಿ ನನ್ನನ್ನು ಅನಾಥೆಯನ್ನು ಮಾಡಬಹುದೇ ? ಅವಲಂಬನವೃಕ್ಷವಿಲ್ಲದ ಬಳ್ಳಿಯಂತಾದೆ ನಲ್ಲಾ ಎಂದು ವಿವಿಧವಾಗಿ ನಿಜವಲ್ಲಭನ ಗುಣಾವಳಿಗಳನ್ನು ಹೊಗಳಿಕೊಂಡು ಮೂರ್ಛಹೊಂದುತ್ತ ಎಚ್ಚೇಳುತ್ತ ದುಃಖಿಸುತ್ತ ಸಂಕಟಪಡುತ್ತಿದ್ದಳು, ಅನಂತರದಲ್ಲಿ ಲೋಕಮಾನ್ಯ ಯಶಸ್ಸನಾದ ಶ್ರೀರಾಮನು ವಿಭೀಷಣನನ್ನು ನೋಡಿ-ಎಲೈ ರಾಕ ಸರಾಜೇಂದ್ರನೇ ! ವಿಧಿಯ ನಿಯಮವನ್ನು ಮೀರಿ ನಡೆವುದಕ್ಕೆ ಯಾರಿಂದಲೂ ಆಗದು. ನೀನು ಹೋಗಿ ಜಗದೇಕವೀರನಾದ ರಾವಣನ ಪಟ್ಟಮಹಿ ಪಿಯ ಮಹಾ ಪತಿವ್ರತೆಯ ಆದ ಮಂಡೋದರಿಯನ್ನು ಮೃದುಮಧುರ ವಚನಗ ಳಿಂದ ಸಮಾಧಾನಪಡಿಸಿ ನಿನ್ನಣ್ಣನಾದ ರಾವಣನೇ ಮೊದಲಾದವರಿಗೆ ಉತ್ತರ ಕ್ರಿಯಾ ದಿಗಳನ್ನು ನೆರವೇರಿಸು ಎಂದು ಅಪ್ಪಣೆಯನ್ನು ಕೊಡಲು ಆಗ ವಿಭೀಷಣನು ಶ್ರೀ ರಾಮನನ್ನು ಕುರಿತು-ಜೀಯಾ, ಜಗತ್ತೂ ಜನೇ ! ನನ್ನ ಬಿನ್ನ ಪವನ್ನು ಪಾಲಿಸಬೇಕು. ಮೊದಲು ಕುಬೇರನು ಈ ರಾವಣನನ್ನು ಕುರಿತು--ನೀನು ಬ್ರಹ್ಮ ವಂಶಸಂಭೂತನಾಗಿ ರುವುದರಿಂದ ದುರ್ಮಾರ್ಗಿಯಾಗಿರದೆ ಸುಮಾರ್ಗಗಲ್ಲಿ ನಡೆ ಎಂದು ಹಿತವಾದವನ್ನು ತಿಳಿಸಿದುದಕ್ಕೆ ಆಗ್ರಹೋದಗ್ರನಾಗಿ ಹೋಗಿ ತನಗಣ್ಣನಾದ ಕುಬೇರನೊಡನೆ ಕಠಿಣ ವಾಗಿ ಯುದ್ಧ ಮಾಡಿ ಆತನ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಭಾತೃದ್ರೋಹ ವನ್ನು ಸಂಪಾದಿಸಿಕೊಂಡನು. ಅದಲ್ಲದೆ ಇಂದ್ರಾದಿ ದೇವತೆಗಳಿಗೆ ನಿಷ್ಕಾರಣವಾಗಿ ನಾನಾವಿಧವಾದ ಹಿಂಸೆಗಳನ್ನು ೦ಟುಮಾಡಿ ದೇವದ್ರೋಹಿಯಾದನು, ಮತ್ತು ಜ್ಞಾನ ನಿಷ್ಠರಾಗಿ ತಪೋವನದಲ್ಲಿ ಇತರರಿಗೆ ತೊಂದರೆಯಿಲ್ಲದಂತೆ ತಪಸ್ಸು ಮಾಡಿಕೊಂಡಿದ್ದ ಮುನಿಗಳ ಯಜ್ಞಾದಿ ಸತ್ಕರ್ಮಗಳನ್ನು ಭಂಗಪಡಿಸಿ ಬ್ರಹ್ಮದ್ರೋಹಕ್ಕೆ ಪಾತ್ರನಾದನು. ಜಗದೇಕವೀರನಾದ ರಾಜನೂ ಧರ್ಮಸಂಸ್ಥಾಪಕನೂ ಆದ ನಿನ್ನಡಿದಾವರೆಗಳಿಗೆ ಅಪ ರಾಧವನ್ನು ಮಾಡಿ ರಾಜದ್ರೋಹಕ್ಕೆ ಗುರಿಯಾದನು, ಮತ್ತು ನಾನು ಅವನನ್ನು ಕುರಿತು. ಇಂಥ ದುರಾಲೋಚನೆಗಳನ್ನೂ ದುಷ್ಕೃತ್ಯಗಳನ್ನೂ ಮಾಡಿ ಕೆಡಬೇಡ ವೆಂದು ಹಿತವಚನಗಳನ್ನು ಹೇಳಿದುದಕ್ಕೆ ನಿರಪರಾಧಿಯಾದ ನನ್ನನ್ನು ಅವಾಚ್ಯ ವಚನ ಗಳಿಂದ ಬೈಯುದಲ್ಲದೆ ಚಾವಡಿಯಿಂದ ನೂಕಿಸಿಬಿಟ್ಟನು. ಇಂಥ ಪತಿತನು ನನಗೆ ಅಣ್ಣನೂ ಅಲ್ಲ. ನಾನು ಆತನಿಗೆ ತಮ್ಮ ನೂ ಅಲ್ಲ, ಗರ್ವಾಂಧನಾದವನು ಗುರುವಾ ಆ