ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 ಕಥಾಸಂಗ್ರಹ-೪ ನೆಯ ಭಾಗ | V ಯೋಚಿಸುತ್ತಿರುವುದೋ ಎಂಬಂತಿದ್ದಿತು. ಕೂಡಲೆ ಧರ್ಮಾತ್ಮನಾದ ಶ್ರೀರಾಮನ ಕೀರ್ತಿಯು ಮೊದಲು ಅಂಕುರರೂಪದಿಂದ ಸರ್ವಮಂದಿರಾಂತಃಪ್ರದೇಶಗಳನ್ನು ಪ್ರವೇಶಿಸಿತೋ ಎಂಬಂತೆ ಸಂಧ್ಯಾದೀಪಗಳು ಶೋಭಿಸಿದುವು. ನಿಜಕಾಂತನಾದ ದಿವಾ ಕರನು ಹೊರಟು ಹೋಗಲು ಪರಪುರುಷನಾದ ಚಂದ್ರನನ್ನು ನೇತ್ರಗಳಿಂದಲೂ ನೋಡ ಬಾರದೆಂದು ಪರಿಶುದ್ದ ಭಾವದಿಂದ ಕೂಡಿದ ಕಮಲಿನೀನಾರಿಯರು ಕಣ್ಣು ಚು ತಿರು ವರೋ ಎಂಬಂತೆ ಸರೋವರಗಳಲ್ಲಿ ಕಮಲಗಳೆಲ್ಲಾ ಮುಗಿಯುತ್ತಿದ್ದುವು. ಕೂಡಲೆ ರಾತ್ರಿಯೆಂಬ ರಮಣಿಯು ನಿಜಕಾಂತನಾದ ಚಂದ್ರನನ್ನು ಕೊಡುವುದಕ್ಕೋಸ್ಕರ ರಮಣೀಯವಾದ ಕುಸುಂಬೆಯ ಬಣ್ಣದ ಸೀರೆಯನ್ನುಟ್ಟು ಸಂಜೆಗೆಂಪೆಂಬ ಕುಪ್ಪಸ. ವನ್ನು ತೊಟ್ಟು ಮಲ್ಲಿಗೆಯ ಹೂವುಗಳನ್ನು ಧರಿಸಿ ಬರುತ್ತಿರುವಳೋ ಎಂಬ ಹಾಗೆ ವಿವಿಧವರ್ಣದಿಂದ ಕೂಡಿ ನಕ್ಷತ್ರಗಳಿಂದ ಒಪ್ಪುತ್ತಿರುವ ಸಾಯಂಸಂಧ್ಯಾಸಮಯವು ವರ್ಣನಾತೀತವಾಗಿದ್ದಿತು. ಕೂಡಲೆ ಅಂಧಕಾರವು ಭೂಲೋಕವನ್ನು ವ್ಯಾಪಿಸಿ ಕೊಂಡು ಈ ಶ್ರೀರಾಮನು ನನ್ನ ಅಶ್ರಯದಿಂದ ಜೀವಿಸುತ್ತಿದ್ದ ನಿಶಾಚರ ಚಕ್ರ ಶ್ವರನಾದ ರಾವಣನನ್ನು ಅವನ ಪರಿವಾರಸಮೇತವಾಗಿ ಸಂಹರಿಸಿದನು. ಅದು ಕಾರಣ ಇವನ ದೇಶವನ್ನು ಕವಿದು ಕಣ್ಣಾ ಣದಂತೆ ಮಾಡುವೆನು ಎಂಬಂತೆ ತಮಃಪಟಲವು ಒಪ್ಪುತ್ತಿದ್ದಿತು. ಮಹಾತ್ಮನಾದ ರಾಮನ ಕೀರ್ತಿಯು ನನಗಿಂತಲೂ ಅತಿನಿರ್ಮಲವೂ ಅಪಾರವೂ ಉಳ್ಳದಾಗಿದೆ ಎಂಬುದಾಗಿ ಹೇಳುತ್ತಾರೆ. ಈ ಸಂಗತಿಯನ್ನು ನಾನೇ ಹೋಗಿ ಪ್ರತ್ಯಕ್ಷವಾಗಿ ನೋಡಿಬರಬೇಕೆಂಬ ಉದ್ದೇಶದಿಂದ ಚಂದ್ರನೇ ಬರುತ್ತಿರುವನೋ ಎಂಬಂತೆ ಉದಯಶಿಖರಿಯ ಶಿಖರಪ್ರಾಂತದಲ್ಲಿ ಚಂದ್ರೋದಯಸೂಚಕವಾದ ಬೆಳಕು ಹೊಳೆಯುತ್ತಿದ್ದಿತು. ಪೂರ್ವಾಶಾಗಣಿಕೆಯು ತನ್ನ ರೂಪವು ಲೋಕರಂಜಕರಾದ ಮಹಾಪ್ರರುಷರ ಮನಸ್ಸಿಗೆ ಸಾಕಾಗಿರವುದೋ ಎಂದು ಅತ್ಯುತ್ತಮ ದರ್ಪಣ ವನ್ನು ಹಿಡಿದು ನೋಡುತ್ತಿರುವಳೋ ಎಂಬಂತೆ ಉದಯಿಸಿ ಬರುತ್ತಿರುವ ಚಂದ್ರಮಂ ಡಲವು ಮ೦ಗಳಕರವಾಗಿದ್ದಿತು. ಇದು ಚಂದ್ರಬಿಂಬವಲ್ಲವು. ಪೂರ್ವಾಶಾನಾರಿಯ ಮುಖಮಂಡಲವು ಮೊಳೆತು ಹಬ್ಬುತ್ತಿರುವುದು. ಚಂದ್ರಿಕೆಯಲ್ಲ ವು, ಹರಿದಿಗಂಗನೆಯ ಲೋಕಮೋಹನಕರವಾದ ಮುಗುಳಗೆಯ ಕಾಂತಿಯು, ಮೇಲೆ ಕಾಣುವುವು ನಕ್ಷ ತ್ರಸಂಕುಲಗಳಲ್ಲಿ ವು. ಶ್ರೀರಾಮನ ವಿಜಯವಾರ್ತೆಯನ್ನು ಕೇಳಿದುದರಿಂದ ಮಿತಿ ಮಿರಿ ನರ್ತಿಸಿದ ಸುರಗಣಿಕೆಯರ ಕಿತ್ತು ಹೋದ ಕಂಠಮಾಲಿಕೆಗಳಲ್ಲಿದ್ದ ಮುತ್ತಿನ ಮಣಿಗಳ ಸಂಕುಲವು ಎಂಬಂತೆ ಆ ನಿಶಾಸಮಯವು ಚಂದ್ರ ನಕ್ಷತ್ರಗಳೊಡನೆ ಕೂಡಿ ಕಂಗೊಳಿಸುತ್ತಿದ್ದಿತು. ಇದು ಚಂದ್ರಮಂಡಲವೋ ಕಾಲನು ತಂದಿಕ್ಕಿದ ಪೂರ್ವದಿಗ ರಣ್ಯದ ಮಹಾಗ್ನಿ ಪಿಂಡವೋ ಎಂಬಂತೆ ಲೋಕಾಹ್ವಾದಕರವಾದ ಚಂದ್ರೋದಯವು ಪರಿಶೋಭಿಸುತ್ತಿದ್ದಿತು. ಈ ಪೂರ್ವದಿಶೆಯೆಂಬ ಸ್ತ್ರೀಯು ಮೊದಲು ತನ್ನ ಬಳಿಗೆ ಸೂರ್ಯನೆಂಬ ಪುರುಷನು ಬರಲು ಅವನಿಗೆ ಸ್ಥಳವನ್ನು ಕೊಟ್ಟು ಉಪಚರಿಸಿ ಅವನ ನುಮತಿಯಂತೆ ಅಭೇದವಾಗಿದ್ದು ಅವನನ್ನು ಕಳುಹಿಸಿಕೊಟ್ಟಳು ಈಗ ಈ ಚಂದ್ರನು ಬರಲು ಅವನಿಗೂ ಯಥಾವತ್ತಾಗಿ ಸತ್ಕರಿಸುತ್ತಿರುವಳು. ಲೋಕದಲ್ಲಿ ಗಣಿಕೆಯ