ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 235 ಶತಪುರಕ್ಕೆ ಬರುವಷ್ಟರಲ್ಲೇ ಆ ಹಿರಣ್ಯಕಶಿಪುವಿನ ಪತ್ನಿ ಯು ಕೋಟಿಸೂರ್ಯ ಹಕಾಶದಿಂದ ಕೂಡಿರುವ ಒಂದು ಗಂಡು ಮಗುವನ್ನು ಹೆರಲು ಆಗ ಲೋಕೋಪ ಕರಿಯ ಲೋಕಾನಂದಕರನೂ ಆದ ಹರಿಭಕಾಗ್ರೇಸರನು ಹುಟ್ಟಿದನೆಂದು ಬಹಳ ಸಂತೋಷದಿಂದ ಇಂದ್ರಾದಿದೇವತೆಗಳು ದೇವದುಂದುಭಿಯನ್ನು ಬಾರಿಸಿದರು. ಗಂಧ ರ್ವರು ಮನೋಹರವಾಗಿ ಗಾನವನ್ನು ಮಾಡಿದರು. ಅಪ್ಪರಸ್ತ್ರೀಯರು ನರ್ತನವನ್ನು ಮಾಡಿ ನಲಿದರು. ಸುರಮುನಿಗಳೂ ಬ್ರಹ್ಮರ್ಷಿಗಳೂ ತಮ್ಮ ತಮ್ಮ ಸತ್ಕರ್ಮಗಳಿಗೆ ನಿರ್ವಿಘ್ರತೆಯುಂಟಾಗುವುದೆಂದು ಆ ಶಿಶುವನ್ನು ಹರ್ಷದಿಂದ ಹರಸಿದರು. ನಂದನ ವನದಲ್ಲಿರುವ ಕಲ್ಪವೃಕ್ಷ ಪಾರಿಜಾತಾದಿ ವೃಕ್ಷಗಳು ಪೂಮಳೆಯನ್ನು ಕರೆದುವು. - ಅನಂತರದಲ್ಲಿ ಮಹೊಗ್ರಕೋಪಯುಕ್ತನಾಗಿ ನಿಜನಗರಕ್ಕೆ ಬರುತ್ತಿದ್ದ ಹಿರ ಣ್ಯಕಶಿಪುವು ಇದನ್ನೆಲ್ಲಾ ಕಂಡು ದೇವತೆಗಳಿಗೆ ಇಷ್ಟು ಸಂತೋಷವುಂಟಾಗುವದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತ ಇರುವಲ್ಲಿ ದೇವೇಂದ್ರನು ಅಷ್ಟ ದಿಕ್ಷಾ ಕರೊಡನೆ ಕೂಡಿ ಆತನೆದುರಿಗೆ ಬಂದು ದೇವಲೋಕದ ಉನ್ನ ತವಸ್ತುಗಳನ್ನು ಕೈಗಾ ಣಿಕೆಯಾಗಿ ಒಪ್ಪಿಸಿ ಕೈ ಮುಗಿದು ನಿಂತುಕೊಂಡು ಎಲೈ ಸರ್ವಲೋಕಾಧಿರಾಜನೇ ! ಮಹಾತ್ಮನಾದ ನಿನಗೆ ಮಹಾ ಪುತ್ರೋತ್ಸವವಾಯಿತೆಂದು ತಿಳಿದು ನಮಗೆ ಪೂರ್ಣ ಸಂತೋಷವುಂಟಾದುದರಿಂದ ಹೀಗೆ ನಡೆದುಕೊಂಡೆವು ಎಂದು ಬಿನ್ನವಿಸಿದರುಆಗ ಹಿರಣ್ಯಕಶಿಪುವು ಆ ಮಾತುಗಳನ್ನು ಕೇಳಿದುದರಿಂದ ದೇವತೆಗಳ ಮೇಲಿದ್ದ ಕೋಪ ವೆಲ್ಲಾ ಶಾಂತವಾಗಿ ಪುತ್ರೋತ್ಸವವಾಯಿತೆಂಬ ಸಂತೋಷದಿಂದ ಹಿಗ್ಗು , ಆ ಇಂದ್ರಾದಿ ದೇವತೆಗಳೊಡನೆ ಕೂಡಿ ನಗರವನ್ನು ಪ್ರವೇಶಿಸಿ ಕೂಡಲೆ ಅ೦ತಃ ಪ್ರರಕ್ಕೆ ಹೋಗಿ ದಿವ್ಯ ತೇಜಃಪುಂಜರಂಜಿತನಾದ ಮಗನನ್ನು ನೋಡಿ ಅತ್ಯಾಶ್ಚರ್ಯಾನಂದಭರಿ ತಾಂತರ೦ಗನಾಗಿ ತನ್ನ ಸೆರೆಮನೆಯಲ್ಲಿಟ್ಟಿದ್ದ ಸರ್ವಜನರನ್ನೂ ಬಿಡಿಸಿ ದೀನಾನಾಥಾದಿ ಗಳಿಗೆಲ್ಲಾ ಸಕಲವಿಧವಾದ ದಾನಧರ್ಮಗಳನ್ನು ಮಾಡಿ ತೃಪ್ತಿ ಪಡಿಸಿ ಕೂಡಲೆ ತಮ್ಮ ಕುಲಗುರುವಾದ ಶುಕ್ರಾಚಾರ್ಯನನ್ನು ಕರೆಸಿ ಶಿಶುವಿಗೆ ಜಾತಕರ್ಮಾದಿಗಳನ್ನು ಸಾಂಗವಾಗಿ ನೆರವೇರಿಸಿ ಆ ಮಗುವು ಸಕಲ ಲೋಕಾಪ್ಪಾದಕರನಾಗಿದ್ದುದರಿಂದ ಹನ್ನೆರಡನೆಯ ದಿವಸದಲ್ಲಿ ಶುಕ್ರಾಚಾರ್ಯರಿಂದ ಮಹಾ ಸಂಭ್ರಮದೊಡನೆ ಪ್ರಜ್ಞಾ ದನೆಂದು ನಾಮಕರಣವನ್ನು ಮಾಡಿಸಿದನು. ಆ ಪ್ರಹ್ಲಾದನು ಗರ್ಭ ದಲ್ಲಿರುವಾಗಲೇ ಹರಿಭಕ್ತಿರಸಮಯವಾದ ಶರೀರವುಳ್ಳ ವನಾದುದರಿಂದ ಭೂಮಿಯಲ್ಲಿ ಜನಿಸಿದಾಗ ಅಜ್ಞಾನವನ್ನು ಹೊಂದದೆ ಆ ಶಿಶು ದಲ್ಲಿಯ ಹರಿಧಾನಪರಾಯಣನಾಗಿ ನಿಜಮಾತೃವಿನ ಮೊಲೆಹಾಲನ್ನು ಹರಿಪಾದ ತೀರ್ಥವೆಂದೇ ಭಾವಿಸಿ ಪಾನಮಾಡುತ್ತ ಹರಿಗೆ ಈ ರೀತಿಯಾಗಿ ಅಡ್ಡ ಬೀಳಬೇಕೆಂದು ತೊಟ್ಟಲಿನಲ್ಲಿ ಮೊಗಚಿಕೊಳ್ಳುತ್ತ ಹರಿಗೆ ಅರ್ಪಿಸದೆ ಹಾಲು ತುಪ್ಪ ಸಕ್ಕರೆ ಮೊದಲಾ ದುವುಗಳನ್ನು ಬಲಾತ್ಕಾರದಿಂದ ಕೈಹಿಡಿದು ತಿನ್ನಿಸುತ್ತಿರುವರಲ್ಲಾ ಎಂಬ ದುಃಖಾತಿ ಶಯದಿಂದ ರೋದಿಸುತ್ತ ಹರಿಮಾಹಾತ್ಮವನ್ನು ಮನಸ್ಸಿನಲ್ಲಿ ನೆನೆನೆನದು 'ನಗುತ್ತ ಕಣ್ಮುಚ್ಚಿ ನಿದ್ದೆ ಹೋಗುವವನಂತೆ ತರೇಕಚಿತ್ತನಾಗಿ ಹರಿಯ ಧ್ಯಾನವನ್ನು ಮಾಡುತ್ತ