ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

236 ಕಥಾಸಂಗ್ರಹ-೫ ನೆಯ ಭಾಗ ಹರಿಯ ಮಂದಿರಕ್ಕೆ ಹೋಗಬೇಕೆಂದು ತಪ್ಪು ಹೆಜ್ಜೆಗಳನ್ನು ಹಾಕುತ್ತ ಹರಿನಾಮಗ ಳನ್ನು ಪಠಿಸುತ್ತಿರಬೇಕೆಂದು ತೊದಲ್ನುಡಿಗಳನ್ನಾಡುತ್ತ ಸರಿಹುಡುಗರೊಡನೆ ಆಡುವು ದಕ್ಕೆ ಹೋಗಿ ಚಂಡು ಬುಗುರಿ ಗಜುಗ ಹಿಳೆ ಮೊದಲಾದ ಆಟಗಳನ್ನು ಆಡದೆ ತುಲಸೀ ಗಿಡಗಳಿರುವೆಡೆಗೆ ಹೋಗಿ ಅವುಗಳ ಬುಡದಲ್ಲಿ ದಯೆಯಿಂದ ಕೆದಕಿ ಪಾತಿಕಟ್ಟಿ ನೀರನ್ನು ಹೊಯ್ತು ಭಕ್ತಿಯಿಂದ ಬಲಗೊಂಡು ನಮಸ್ಕರಿಸಿ ಅವುಗಳ ಮುಂಗಡೆಯಲ್ಲಿ ಸಂತೋಷದಿಂದ ಕುಣಿದಾಡುತ್ತ ಇನ್ನೂ ವಿವಿಧವಾದ ಹರಿಪ್ರಿಯ ಕೃತ್ಯಗಳನ್ನು ಮಾಡುತ್ತ ಅಹೋರಾತ್ರಿಗಳಲ್ಲೂ ಹರಿಧ್ಯಾನ ಹರಿಸ್ತುತಿ ಹರಿಕೀರ್ತನೆ ಹರಿವಂದನೆ ಹರಿದಾಸ್ಯ ಇತ್ಯಾದಿಗಳಿಂದ ಕೂಡಿ ಐದು ವರ್ಷಗಳ ವರೆಗೂ ಲೀಲೆಯಿಂದ ಬೆಳೆದನು. ತರುವಾಯ ಹಿರಣ್ಯಕಶಿಪುವು ಮಗನನ್ನು ನೋಡಿ ಸಂತೋಷದಿಂದ ಕೂಡಿದವ ನಾಗಿ ಬಾಚಿ ತಬ್ಬಿಕೊಂಡು ಮುದ್ದಿಸಿ-ಇವನಿಗೆ ಓದುಬರಹಗಳನ್ನು ಕಲಿಯುವ ಕಾಲವಾಯಿತೆಂದು ತಿಳಿದು ಕೂಡಲೆ ಕುಲಗುರುವಾದ ಶುಕ್ರಾಚಾರ್ಯನನ್ನು ಕರಿಸಿ ಶುಭದಿವಸ ಯುಕ್ತವಾದ ಸುಲಗ್ನ ದಲ್ಲಿ ಹಣ್ಣು ಕಾಯಿ ಕಜ್ಜಾಯ ಈ ಮೊದಲಾದು ವುಗಳ ರಾಶಿಯನ್ನು ಊರಗಲಕ್ಕೆ ಸುರಿಸಿ ಮಗನ ವಿದ್ಯಾಭ್ಯಾಸಕ್ಕೆ ನಿರ್ವಿಘ್ನ ತೆಯುಂ ಟಾಗುವುದಕ್ಕೋಸ್ಕರವಾಗಿ ಪ್ರಥಮದಲ್ಲಿ ವಿನಾಯಕನ ಪೂಜೆಯನ್ನು ಮಾಡಿಸಿ ಪ್ರಹ್ಲಾದನನ್ನು ಗುರುವಾದ ಶುಕ್ರಾಚಾರ್ಯನ ವಶಕ್ಕೊಪ್ಪಿಸಿ ಓದುವ ಮಠಕ್ಕೆ ಕಳು ಹಿಸಿಕೊಟ್ಟನು. ಆ ಮೇಲೆ ಶುಕ್ರಾಚಾರ್ಯನು ಪ್ರಹ್ಲಾದನನ್ನು ಕರೆದುಕೊಂಡು ಹೋಗಿ ಅವನಿಗೆ ನೆಲದ ಮೇಲೆ ಓಂ ನಮಶ್ನಿವಾಯ ಎಂಬ ಅಕ್ಷರಗಳನ್ನು ಬರೆದು ಅವನ ಕೈ ಹಿಡಿದುಕೊಂಡು ಹತ್ತೆಂಟುಸಾರಿ ತಿದ್ದಿಸಿ-ಎಲ್ಲಿ ? ನೋಡೋಣ ನಾನು ತೋರಿಸಿಕೊಟ್ಟ೦ತೆ ನೀನೇ ಬರೆ ಎಂದು ಹೇಳಲು ಆಗಲಾ ಪ್ರಹ್ಲಾದನುಸರಸಿ ಜಾಂಬಕ ಎಷ್ಟು ದಾಮೋದರ ಲಕ್ಷ್ಮೀಶ ಪೀತಾಂಬರ ಮುರಾರಿ ಶೌರಿ ಹರಿ ನಾರಾ ಯಣ ಅಸುರಾರಿ ಹೃಷೀಕೇಶ ಗರುಡವಾಹನ ಕೃಷ್ಣ ವಿಶ್ವಂಭರ ಜನಾರ್ದನ ಎಂದು ಬರೆದು ಸಂತೋಷದಿಂದ ಓದುತ್ತಿದ್ದನು. ಶುಕ್ರಾಚಾರ್ಯನು ಅದನ್ನು ಕಂಡು ಓಹೋ ! ಮೋಸವಾಯಿತು. ಇನ್ನೇನು ಗತಿ ? ಇವನ ತಂದೆಯಾದ ಹಿರಣ್ಯಕಶಿಪುವು ಇವನು ಹೀಗೆ ಬರೆಯುವುದನ್ನು ಕಂಡರೆ ಏನನ್ನೂ ಅರಿಯದ ಈ ಹುಡುಗನಿಗೆ ಮಾರಿ ಯಾದ ಗುರುವು ನನಗೆ ಮಹಾ ವಿರೋಧಿಯಾದ ವಿಷ್ಣುವಿನ ಹೆಸರುಗಳನ್ನು ಬರೆದು ಓದಿಸಿ ಕಲಿಸಿದನು ಎಂದು ತಿಳಿದುಕೊಂಡು ನನ್ನನ್ನು ಸುಮ್ಮನೆ ಬಿಡನು ಎಂದು ಯೋಚಿಸಿ ಭಯದಿಂದ ಕೂಡಿದವನಾಗಿ ಆ ಪ್ರಹ್ಲಾದನನ್ನು ಕುರಿತು ಅಪ್ಪಾ ಮಗುವೇ ! ಹೀಗೆ ಬರೆಯಬೇಡ, ನಾನು ಹೇಳಿದಂತೆ ಚೆನ್ನಾಗಿ ಬರೆ ಎಂದು ಗದರಿಸಿ ಹೇಳಲು ಪುನಃ ಪ್ರಹ್ಲಾದನು ಮರಳಿನ ಮೇಲೆ ಶಂಖಚಕ್ರಾದಿಧಾರಿಯಾದ ಹರಿಯ ಮೂರ್ತಿಯನ್ನು ಸ್ಪಷ್ಟವಾಗಿ ಬರೆದು ಭಕ್ತಿಯಿಂದ ನೋಡಿ ನಲಿಯುತ್ತ ವಂದಿಸುತ್ತ ಇರಲು ಆಗ ಶುಕ್ರಾಚಾರ್ಯನು-ಇದು ಬೇಡವೆಂದು ಹೇಳಿ ಮಗ್ಗಿಯನ್ನು ಬರೆದು ಇದನ್ನು ಕೂಡಿ ಕಳೆ ಎಂದು ಹೇಳಲು ಆಗ ಪ್ರಹ್ಲಾದನು ಎಷ್ಟು ವನ್ನು ಮನಸ್ಸಿನಲ್ಲಿ ಕೂಡಿ ಸಕಲ ಪಾಪಗಳನ್ನೂ ಕಳೆಯುತ್ತ ಅಂತರಂಗದಲ್ಲಿ ಹರಿಯನ್ನೇ ಧ್ಯಾನಿಸುತ ಹೊರಗಣ ವ್ಯಾಪಾರಗಳನ್ನು ತೊರೆದು ಸುಮ್ಮನಿದ್ದನು,