ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 245 ಅಮರಾವತಿಗೆ ಬಂದು ಮೊದಲು ಬೃಹಸ್ಪತ್ಯಾಚಾರ್ಯರನ್ನು ರಹಸ್ಯದಲ್ಲಿ ಕಂಡು ಅವ ರಿಂದ ಪೂಜಿತನಾಗಿ ಬಲಿಯು ಹೇಳಿದ ಮಾತುಗಳಲ್ಲಿ ಸ್ವಲ್ಪವೂ ತಪ್ಪದಂತೆ ಅವರೊಡನೆ ಹೇಳಿದರು. ಬೃಹಸ್ಪತ್ಯಾಚಾರ್ಯರು ಆ ಮಾತುಗಳನ್ನೆಲ್ಲಾ ಕೇಳಿ ತಮ್ಮ ಮನಸ್ಸಿನಲ್ಲಿ ಚೆನ್ನಾಗಿ ಪರಿಭಾವಿಸಿ ನೋಡಿ ಶುಕ್ರಾಚಾರ್ಯರನ್ನು ಭೋಜನಾದಿಗಳಿಂದ ಸತ್ಕರಿಸುವ ಹಾಗೆ ತಮ್ಮ ಮನೆಯ ಜನಗಳಿಗೆ ನೇಮಿಸಿ ತಾವು ದೇವೇಂದ್ರನ ಬಳಿಗೆ ಬಂದು ಏಕಾಂತದಲ್ಲಿ ಕುಳಿತು ಬಲಿಯು ಶುಕ್ರಾಚಾರ್ಯರೊಡನೆ ಹೇಳಿಕಳುಹಿಸಿರುವ ಮಾತು ಗಳನ್ನೆಲ್ಲಾ ಆತನೊಡನೆ ಹೇಳಿದರು. ದೇವರಾಜನು ಆ ಮಾತುಗಳನ್ನೆಲ್ಲಾ ಕೇಳಿ ಬಹಳ ವ್ಯಸನಾಕ್ರಾಂತನಾಗಿ ಬೃಹಸ್ಪತಾಚಾರ್ಯರನ್ನು ಕುರಿತು-ಎಲೈ ಆಚಾ ರ್ಯರೇ ! ಬಲಿಯು ವರಬಲದಿಂದ ಅಜೇಯನಾದ ಬಲಿಷ್ಠನಾಗಿದ್ದಾನೆ. ಈ ವಿಷಯ ದಲ್ಲಿ ಏನು ಯೋಚನೆಯನ್ನು ಮಾಡಬೇಕೋ ನನಗೆ ಸ್ವಲ್ಪವೂ ತೋಚುವುದಿಲ್ಲ. ಅದು ಕಾರಣ ಹೀಗೆ ನಡೆಯೆಂದು ತಾವು ಅಪ್ಪಣೆಯನ್ನು ಕೊಟ್ಟ ಮೇರೆಗೆ ನಾನು ನಡೆದುಕೊಳ್ಳುವೆನು ಎಂದು ಹೇಳಿದನು. ಅದಕ್ಕೆ ಬೃಹಸ್ಪತ್ಯಾಚಾರ್ಯರು ಇಂದ್ರ ನನ್ನು ಕುರಿತು-ಎಲೈ ದೇವೇಂದ್ರನೇ ! ಬುದ್ದಿಶಾಲಿಯು ಆಲೋಚಿಸಿ ಯಾವ ಕಾರ್ಯವನ್ನಾದರೂ ಮಾಡಬೇಕೇ ಹೊರತು ಅವಿಚಾರದಿಂದ ದುಡುಕಬಾರದು. ತತ್ರಾಪಿ ಅಶುಭವಾದ ಕಾರ್ಯಗಳಿಗೆ ಕಾಲಹರಣವನ್ನು ಮಾಡಿ ನೋಡಬೇಕೆಂದು ನೀತಿಶಾಸ್ತ್ರವಚನವಿರುವುದು. ಅದು ಕಾರಣ ಇನ್ನೊಂದು ತಿಂಗಳಲ್ಲಿ ದೈತ್ಯರಾಜನಾದ ಬಲಿಯ ಮಾತುಗಳಿಗೆ ಪ್ರತ್ಯುತ್ತರವನ್ನು ಹೇಳಿಕಳುಹಿಸುವೆನೆಂದು ಈಗ ಶುಕ್ರಾಚಾರ್ಯ ರಿಗೆ ಹೇಳಿಕಳುಹಿಸಿಬಿಟ್ಟು ತಿರುಗಿ ಬರುವೆನು. ಆ ಮೇಲೆ ಮುಂದೆ ನಡೆಯತಕ್ಕ ಕಾರ್ಯ ಕೈ ತಕ್ಕ ಯೋಚನೆಯನ್ನು ಮಾಡಿ ನೋಡೋಣ ಎಂದು ಹೇಳಿ ಅಲ್ಲಿಂದ ತಿರುಗಿ ಮನೆ ಗೆ ಬಂದು ಭೋಜನಾದ್ಯುಪಚಾರಗಳಿಂದ ಸತ್ಕೃತರಾಗಿ ದಿವ್ಯ ಪೀಠದಲ್ಲಿ ಕುಳಿತಿರುವ ಶುಕ್ರಾಚಾರ್ಯರನ್ನು ಕಂಡು ಬಲಿರಾಜನು ತಮ್ಮೊಡನೆ ಹೇಳಿಕಳುಹಿಸಿದ ಮಾತಿಗೆ ಇನ್ನೊಂದು ತಿಂಗಳಲ್ಲಿ ಪ್ರತ್ಯುತ್ತರವನ್ನು ಹೇಳುವೆನು ಎಂದು ಇಂದ್ರನು ಹೇಳಿದ ನೆನಲು ಶುಕ್ರಾಚಾರ್ಯರು ಅಲ್ಲಿಂದ ಹೊರಟು ಬಲಿಯ ಬಳಿಗೆ ಬಂದು ಬೃಹಸ್ಪ ತ್ಯಾಚಾರ್ಯರು ಹೇಳಿದ ಮಾತನ್ನು ಆತನಿಗೆ ತಿಳಿಸಲು ಆತನು ಬಹಳ ವಿಚಾರಪರನೂ ಸತ್ಯಸಂಧನೂ ಆದುದರಿಂದ ಹಾಗೇ ಆಗಲಿ ಎಂದು ಒಡಂಬಟ್ಟು ಸಮಾಧಾನ ದಿಂದಿದ್ದನು. ಅತ್ತಲಾ ಬೃಹಸ್ಪತ್ಯಾಚಾರ್ಯರು ಇಂದ್ರನನ್ನು ಕರೆದು ಕೊಂಡು ಸತ್ಯಲೋ ಕಕ್ಕೆ ಹೋಗಿ ಬ್ರಹ್ಮ ದೇವರನ್ನು ವಂದಿಸಿ-ಸ್ವಾಮಿಾ, ಚತುರ್ಮುಖನೇ ! ಒಂದು ಮನ್ವಂತರದ ವರೆಗೂ ಈ ಇಂದ್ರನು ತ್ರಿಲೋಕಾಧಿಪತ್ಯವನ್ನು ಮಾಡಿಕೊಂಡಿರತಕ್ಕು ದೆಂದು ಮೊದಲು ನೀನೇ ಕಟ್ಟು ಮಾಡಿ ನೇಮಿಸಿದೆ. ಈಗ ಮಧ್ಯ ಕಾಲದಲ್ಲಿ 'ವರಬಲ ಗರ್ವಿತನಾದ ಬಲಿಯು ಇವನ ಸ್ವರ್ಗಪದವಿಯನ್ನು ಕಿತ್ತು ಕೊಂಡು ತಾನು ಅನು ಭವಿಸಬೇಕೆಂದು ಹೇಳಿ ಕಳುಹಿಸಿದ್ದಾನೆ. ಮಹೋನ್ನತ ತೇಜೋವಿರಾಜಮಾನನಾದ ನಿನ್ನ ಕಣ್ಣುಗಳ ಮುಂದೆಯೇ ನಿನ್ನ ಆಜ್ಞೆಗೆ ಭಂಗವುಂಟಾದರೆ ಅದರಿಂದುಂಟಾಗುವ