ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 251

  • ುಗಿ ಆತನಿಂದ ತೆಗೆದು ನಿನ್ನ ಪ್ರಿಯ ಸಹೋದರನಾದ ಇಂದ್ರನಿಗೆ ಕೊಟ್ಟು ನಿನ್ನ ಅಪ್ಪ

ಯು ನೆಲೆಯಾಗಿ ನಿಲ್ಲುವ ಹಾಗೆ ಮಾಡಿಕೊಳ್ಳುವವನಾಗು ಎಂದು ನಾನು ವಿಶೇಷ ವಾಗಿ ಹೇಳಿಕೊಳ್ಳಬೇಕೇ ? ಈ ಕಾರ್ಯವು ನಿನ್ನ ದಲ್ಲವೇ ಎಂದು ಬಹುತರವಾಗಿ ಬೇಡಿ Kಂಡನು. ಆಗ ಮಹಾ ವಿಷ್ಣು ವು ಆತನಿಗೆ ಒಳ್ಳೆಯದೆಂದು ಅಭಯವನ್ನು ಕೊಟ್ಟು ಅಂತರ್ಧಾನನಾಗಿ ಕೂಡಲೆ ಅದಿತಿದೇವಿಯ ಗರ್ಭವನ್ನು ಹೊಕ್ಕನು. ಆನಂತರದಲ್ಲಿ ಅವನು ವಾಮನನಾಗಿ ಹುಟ್ಟಲು ಕಶ್ಯಪನು ಮಹಾಸಂತೋಷದಿಂದ ಕೂಡಿದವನಾಗಿ ಅವನಿಗೆ ಶಾಸ್ಪೋಕ್ತ ವಿದ್ಯಾನುಸಾರವಾಗಿ ಕ್ರಮದಿಂದ ಜಾತಕರ್ಮ ನಾಮಕರಣ ಉಪನಯನಾದಿಗಳನ್ನು ಮಾಡಿ ಆ ಮೇಲೆ ಅವನನ್ನು ಕುರಿತು-ಎಲೈ ಪುತ್ರನೇ ! ನೀನು ಇನ್ನು ಮೇಲೆ ಮಾಡಬೇಕಾದ ಕಾರ್ಯವನ್ನು ನೆರವೇರಿಸು ಎಂದು ಹೇಳಲು ಆಗ ವಾಮನನು ಮಂಜೆಯ ಉಡಿದಾರವನ್ನೂ ದಂಡಕೃಷ್ಣಾಜಿನಗಳನ್ನೂ ಧರಿಸಿ ಶ್ವೇತವ ಸೃದಯವನ್ನು ತೆಗೆದು ಕೊಂಡು ಒಂದನ್ನುಟ್ಟು ಇನ್ನೊಂದನ್ನು ಹೊಡೆದುಕೊಂಡು ಒಂದು ಚಿಕ್ಕಗಿಂಡಿಯನ್ನು ಕೈಯಲ್ಲಿ ಹಿಡಿದು ಕೊಂಡು ಒಂದು ಗಜದ ಪ್ರಮಾಣವಾದ ಎತ್ತರವುಳ್ಳ ದೇಹವುಳ್ಳವನಾಗಿ ತಂದೆ ತಾಯಿಗಳಿಗೆ ನಮಸ್ಕರಿಸಿ ಅಲ್ಲಿಂದ ಬಲೀಂದ್ರನ ಬಳಿಗೆ ಹೋಗುವುದಕ್ಕೆ ಹೊರಟನು. ಅಷ್ಟರಲ್ಲಿ ಬಲಿಚಕ್ರವರ್ತಿಯು ತನ್ನ ಗುರುಗಳಾದ ಶುಕ್ರಾಚಾರ್ಯರನ್ನು ವರಿಸಿ ವೈಷ್ಠ ವಯಾಗವನ್ನು ಮಾಡುತ್ತ ಹೋಮಾದಿನಿತ್ಯ ಕರ್ಮವನ್ನು ನೆರವೇರಿಸಿ ಯಜ್ಞಶಾಲೆಯಲ್ಲಿ ಮಹಾಮುನಿಗಳೊಡನೆ ಕುಳಿತು ವಿಷ್ಣು ಚರಿತ್ರೆಗಳನ್ನು ಕೇಳುತ್ತಾ ಭಯಭಕ್ತಿಯಿಂದ ಕೂಡಿದ ಹೃದಯದಲ್ಲಿ ವಿಷ್ಣುವನ್ನು ಪರಿಭಾವಿಸುತ್ತ ಸತ್ಕಾಲಕ್ಷೇ ಪವನ್ನು ಮಾಡುತ್ತಿದ್ದನು. ಆ ಸಮಯದಲ್ಲಿ ಈ ವಾಮನನು ಅಲ್ಲಿಗೆ ಹೋಗಲು ಬಲೀಂದ್ರನು ಆತನ ಅಮಾನುಷತೇಜಸ್ಸನ್ನು ನೋಡಿ ಭಯದಿಂದ ಝಗ್ಗನೆದ್ದು ಬಂದು ಸಾಷ್ಟಾಂಗನಮಸ್ಕಾರವನ್ನು ಮಾಡಿ ಕರೆದುಕೊಂಡು ಬಂದು ಒಂದು ಮಣೆಯ ಮೇಲೆ ಕುಳ್ಳಿರಿಸಿ ವಿಧಿವತ್ತಾಗಿ ಸತ್ಕಾರವನ್ನು ಮಾಡಿ ಕೈ ಮುಗಿದು ನಿಂತು ಕೊಂಡು ಎಲೈ ಮಹಾತ್ಮನೇ! ನಿನ್ನ ಬರುವಿಕೆಯು ಅಪೂರ್ವವು. ಮಹನೀಯನಾದ ನಿನ್ನ ಸಂದ ರ್ಶನದಿಂದ ನನ್ನ ಜನ್ಮವು ಸಾರ್ಥಕವಾಯಿತು. ಈ ನನ್ನ ಯಾಗವು ನಿರ್ವಿಘ್ರ ತೆಯಿಂದ ಸಂಪೂರ್ಣವಾಗಿ ಮುಗಿಯಿತು. ನಾನು ಕೃತಕೃತ್ಯನಾದೆನು ಎಂದು ಅನೇಕ ವಿಧ ವಾಗಿ ಸ್ತುತಿಸುತ್ತಿರಲು ಆಗ ಶುಕ್ರಾಚಾರ್ಯನು ಬಂದು ಬಲೀಂದ್ರನ ಕಿವಿಯಲ್ಲಿ ಈತನು ಮಹಾಮಾಯಿಯಾದ ಎಷ್ಟವು. ಈ ವಾಮನರೂಪವನ್ನು ಧರಿಸಿ ಕಾರ್ಯಾ೦ ತರಾಪೇಕೈ ಯಿ೦ದ ನಿನ್ನ ಬಳಿಗೆ ಬಂದಿದ್ದಾನೆ. ಅಂದರೆ, ಈತನು ನಿನ್ನಿಂದ ಈ ತ್ರಿಲೋಕಾಧಿಪತ್ಯವನ್ನು ತೆಗೆದು ತಿರಿಗಿ ಅದನ್ನು ಇಂದ್ರನಿಗೆ ಕೊಡಬೇಕೆಂಬ ಉದ್ದೇಶದಿಂದ ಬಂದಿದ್ದಾನೆ. ಅದು ಕಾರಣ ಇವನೇನನ್ನಾದರೂ ಕೇಳಿದರೆ ಕೊಡು ತೇನೆಂದು ಹೇಳಬೇಡ ಎನಲು ಆಗ ಬಲೀಂದ್ರನು ಆತನನ್ನು ಕುರಿತು ನೀವು ಅಹೋರಾತ್ರಿಗಳಲ್ಲೂ ನನಗೆ ಶ್ರೇಯಶ್ಚಿಂತಕರಾದ ಗುರುಗಳಾಗಿದ್ದು ಕೊಂಡು ಈ ಸಮಯದಲ್ಲಿ ನನಗೆ ಇಂಥ ಮಾತುಗಳನ್ನು ಹೇಳಬಹುದೇ ? ನನ್ನೊಡೆಯನಾದ