ಪುಟ:ಕಥಾಸಂಗ್ರಹ ಸಂಪುಟ ೨.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 35 ವೃದ್ಧಿ ಪಡಿಸುವುದಕ್ಕೂ ಈತನೇ ಅರ್ಹನೆಂದು ನಿಶ್ಚಯಿಸಿ ಒಂದು ದಿನ ಮಂತ್ರಿ ಸೇನಾ ಪತಿ ಪುರಜನ ವಯೋವೃದ್ದರು ಜ್ಞಾನವೃದ್ದರು ಪರೋಹಿತವಸಿಷ್ಠ ಇವರೇ ಮೊದಲಾ ದವರನ್ನೆಲ್ಲಾ ಕರಿಸಿಕೊಂಡು ಯಥೋಚಿತವಾಗಿ ಸಭಾಮಂದಿರದಲ್ಲಿ ಕುಳ್ಳಿರಿಸಿ ಆದ ರಿಸಿ ಅವರೆಲ್ಲರನ್ನೂ ಕುರಿತು--ಅಯ್ಯಾ ಪರಿಷಜನರೇ ! ಈವರೆಗೂ ನಿಮ್ಮೆಲ್ಲರ ಪ್ರೀತಿಗೂ ಪಾತ್ರನಾಗಿ ರಾಜ್ಯಭಾರವನ್ನು ವಹಿಸಿಕೊಂಡಿದ್ದ ನಾನು ಈಗ ಮುದುಕ ನಾದೆನು, ಇನ್ನು ಮೇಲೆ ನಾನು ದೇವೆಂದ್ರನ ಓಲಗದ ಚಾವಡಿಯನ್ನು ಏರತಕ್ಕೆ ವನು. ಅದು ಕಾರಣ ನನ್ನ ನಾಲ್ಕು ಮಂದಿ ಮಕ್ಕಳಲ್ಲಿ ಶೂರನಾಗಿಯ ಸುಗುಣಗೆ ಳುಳ್ಳವನಾಗಿಯ ಇರುವ ಹಿರಿಯವನಾದ ರಾಮನೇ ನನ್ನ ಈ ಸಾಮ್ರಾಜ್ಯಕ್ಕೆ ಒಡೆ ಯನಾಗತಕ್ಕವನು. ಈ ಭಾಗದಲ್ಲಿ ಗುಣದೋಷವಿಚಾರಶೀಲರಾದ ನೀವೆಲ್ಲರೂ ಒಪ್ಪಿದರೆ ಶುಭಲಗ್ನ ದಲ್ಲಿ ಈ ರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದು ಉತ್ತ ಮವು ಎಂದು ಹೇಳಿದನು. ಆಗ ಈ ಮಾತುಗಳನ್ನು ಕೇಳಿದ ಅವರೆಲ್ಲರೂ ಬಹಳ ವಾಗಿ ಸಂತೋಷಪಟ್ಟು ದಶರಥರಾಜನನ್ನು ಕುರಿತು ಎಲೈ ಮಹಾರಾಜನೇ! ನೀನು ಹೇಳಿದಮಾತು ಬಹು ಶ್ರೇಷ್ಠವಾದುದು. ಈ ರಾಮಚಂದ್ರನ ಬೆಳೊಡೆಯ ನೆಳಲು ಈ ದೇಶದ ಪ್ರಜೆಗಳಾದ ನಮ್ಮೆಲ್ಲರಿಗೂ ಶೀತಲವಾದ ಕಲ್ಪವೃಕ್ಷದ ನೆರಳಾಗಿ ಪರಿಣ ಮಿಸಲಿ, ಮನು ದಿಲೀಪ ಮಾಂಧಾತ ಪುರೂರವಸ್ಸು ಕಾರ್ತವೀರ್ಯಾರ್ಜುನ ಸಗರ ಭಗೀರಥ ನಳ ನಹುಷ ಇವರೇ ಮೊದಲಾದ ಚಕ್ರವರ್ತಿಗಳ ನೆನಪನ್ನು ಈ ರಾಮಚ೦ ದ್ರನು ತನ್ನ ಧರ್ಮಪ್ರವರ್ತಕವಾದ ನಡತೆಗಳಿಂದ ಮರೆಯಿಸುವನು. ಈ ಭೂವನಿ ತೆಯ ಈ ರಾಮನನ್ನು ನಿಜಪತಿಯನ್ನಾಗಿ ವರಿಸುವಳು. ಭಗವಸೆಯಿ೦ದ ಈತನು ಅರಸಾದರೆ ನಾವೆಲ್ಲರೂ ನಿಶ್ಚಿಂತರಾಗಿ ಸುಖದಿಂದಿರುವೆವೆಂದು ಹೇಳಿದರು. ಆ ಮಾತನ್ನು ಕೇಳಿ ದಶರಥ ಮಹಾರಾಜನು ಕೂಡಲೇ ಜೋಯಿಸರನ್ನು ಕರಿಸಿ ವೈಶಾಖ ಶುದ್ಧ ಪಂಚಮಿಯ ದಿವಸದಲ್ಲಿ ಪ್ರಶಸ್ತವಾದ ಅಭಿಜಿನ್ನು ಹೂರ್ತದಲ್ಲಿ ರಾಮನಿಗೆ | ಪಟ್ಟಾಭಿಷೇಕೋಚಿತವಾದ ಅಗ್ನವನ್ನು ನಿರ್ಣಯಿಸಿ ಆ ಪಟ್ಟಣವನ್ನೆಲ್ಲಾ ಶೃಂಗರಿಸು ವಂತೆಯ ದೇವಸ್ಥಾನಗಳಲ್ಲಿ ಉತ್ವವಾರಾಧನೆಗಳು ನಡೆಯುವಂತೆಯ ವಸಿಷ್ಠ ಮಹರ್ಷಿಗಳು ಹೇಳಿದಂತೆ ಪಟ್ಟಾಭಿಷೇಕದ ಸಾಮಾನುಗಳನ್ನು ಸಿದ್ಧ ಪಡಿಸುವಂತೆಯ ಮಂತ್ರಿಗಳಿಗೆ ಅಪ್ಪಣೆಯನ್ನಿತ್ತು ಆಮೇಲೆ ರಾಮನನ್ನು ಕರೆಯಕಳುಹಿಸಿ ನಾಳಿನ ಮಧ್ಯಾಹ್ನ ದಲ್ಲಿ ಸಂಪ್ರಾಪ್ತವಾಗುವ ಸುಲಗ್ನದಲ್ಲಿ ಈ ಕೋಸಲರಾಜ್ಯಾಧಿಪತ್ಯಾರ್ಥ ವಾಗಿ ನಿನಗೆ ಪಟ್ಟಾಭಿಷೇಕವನ್ನು ಮಾಡುವೆನೆಂದು ಹೇಳಿ ಮನೆಗೆ ಹೋಗುವುದಕ್ಕೆ ಅಪ್ಪಣೆಯನ್ನೀಯಲು ರಾಮನು ತಂದೆಗೆ ನಮಸ್ಕಾರವನ್ನು ಮಾಡಿ ಅಲ್ಲಿಂದ ಹೊರಟು ತನ್ನ ತಾಯಿಯಾದ ಕೌಸಲ್ಯಾದೇವಿಯ ಮನೆಗೆ ಬಂದು ಆಕೆಗೆ ಅಭಿವಂ ದಿಸಿ ತಂದೆಯು ಹೇಳಿದ ಮಾತುಗಳನ್ನು ಹೇಳಿ ಲಕ್ಷ್ಮಣಾದಿಗಳಿಗೂ ತಿಳಿಸಿ ತನ್ನರಮನೆ ಗೈತಂದನು. ಆ ಮೇಲೆ ದಶರಥನು ಪುರೋಹಿತರಾದ ವಸಿಷ್ಠರನ್ನು ಕರಿಸಿ.ಸ್ವಾಮಿ ಪುರೋಹಿತರೇ ! ನೀವು ಹೋಗಿ ನಾಳೆ ನಡಿಯುವ ಪಟ್ಟಾಭಿಷೇಕ ಮಹೋತ್ಸವಾಂಗ ಭೂತವಾಗಿ ವಿಧ್ಯುಕ್ತದಂತೆ ರಾಮನಿಗೂ ಸೀತೆಗೂ ಕಂಕಣಧಾರಣೆಯನ್ನು ಮಾಡಿ