ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ a nnnnnnnnnnn ಕಾಲುವೆ, ಕಟ್ಟಡಗಳು ಮುಂತಾದುವುಗಳ ಹೆಸರುಗಳನ್ನು ಕೇಳುವುದರಿಂ ದಲೂ ಅವುಗಳನ್ನು ಸ್ಥಾಪಿಸಿದಜನಗಳು ಎಷ್ಟು ಒಳ್ಳೆಯವರಾಗಿಯ ಜನ ಮೆಚ್ಚಿಕೆಯುಳ್ಳವರಾಗಿಯಇದ್ದರೆಂಬುದು ವ್ಯಕ್ತಪಡುವುದು, ಅಹಮದಾ ಬಾದ್ ಬೌರಿಂಗ್‌ಪೇಟೆ ಶೇಷಾದ್ರಿಪುರ, ಸೂಳೆಯಕೆಸೆ, ಬಂಗಾರದೊಡ್ಡಿ ನಾಲೆ, ರಂಗಚಾದ್ಯರ ಮೆಮೋರಿಯಲ್ ಹಾಲ್ ಮೊದಲಾದುವು ಇವಕ್ಕೆ ನಿದರ್ಶನವಾಗಿವೆ. ಶಿಬಿ, ಸಿ ಮೊದಲಾದವರು ಅನ್ಯಾದೃಶವಾದ ತಮ್ಮ ದಯಾಸದಿಂದ ಸುಪ್ರಸಿದ್ದರಾಗಿದ್ದಾರೆ. ' ಎಷ್ಟೇ ನಿಗಾತಾಂಕ್ಷೆಯಿಂದ ಸತ್ಕಾರಗಳನ್ನು ಮಾಡಿದರೂ ಕೀರ್ತಿ ಯೇನೊ ಅಪಾರ್ಥಿತವಾಗಿ ಬಂದು ಸೇವಿಸುವುದೆಂದು ಮೊದಲೇ ಹೇಳಿ ಟ್ಟಿದೆಯಷ್ಟೆ. ಒಬ್ಬಾನೊಬ್ಬ ಮಹಾತ್ಮನು ತಾನು ದೇವರನ್ನು ಪ್ರಾರ್ಥಿಸುವು ದಲ್ಲಿ-ಸಾಮಿ ನನಗೆ ಏನಬೇಕಿಲ್ಲ, ನಾನು ನಿನಗೊಬ್ಬನಿಗೆ ಮಾತ್ರ ಗೋಚರನಾಗಿದ್ದರೆ ಸಾಕು ಎಂದು ಭಾವಿಸಿ ಈ ಅರಣ್ಯಕ್ಕೆ ಬಂದರೂ ಸಂತ ಹರಡಿ ಹೋಗಿರುವ ಆ ಹಾಳು ಕೀರ್ತಿಯು ಇನ್ಸಿಯ ನನ್ನ ಬಳಿಗೆ ಜನಗಳನ್ನು ಕಳುಹಿಸುತ್ತ ನನ್ನ ಬೆತ್ತ ಶಾಂತಿಗೆ ಭಂಗವನ್ನುಂಟು ಮಾಡುತ್ತಿದೆಯಲ್ಲಾ ಅದನ್ನು ತಡೆಯುವ ಬಗೆ ಹೇಗೆ? ಎಂದು ಬೇಡಿಕೊಂಡ ನಂತೆ ! (21) ಧೈರ್ಯ , ಎಂಥ ಅಪಾಯಗಳು ಎದೆಗುಂದದೆ ನಿರ್ಭಯದಿಂದ ಅವುಗ ಳನ್ನು ಪ್ರತಿಭಟಿಸಿ ಸಹಸವಾಡತಕ್ಕದೇ ಧೈತ್ಯವೆನಿಸುವುದು. ಇದು ಸ್ವಾಭಾವಿಕವಾದ ಶಕ್ತಿಯು ಮತ್ತು ಭಯಕ್ಕೆ ವ್ಯತಿರಿಕ್ತ ವಾದಗುಣವು, ತಿಳ ವಳಿಕೆ ಸಾಲದವರನೇಕರು ಬಾಲ್ಯದಲ್ಲಿ ತಮಗೆ ಹೇಳಿದ್ದ ಭೂತ, ದೆವ್ವ, ಪೀಡೆ, ಪಿಶಾಚಿ, ಮೊದಲಾದುವನ್ನು ಕೇಳಿಕೇವಲ ಅಂಯುಪುರಕರಾಗಿರತಕ್ಕೆ ಜನಗಳು) ಎಷ್ಟೊಉಂಟು, ಅಂಥವರು ವಿಷಯಗಳನ್ನು ಚೆನ್ನಾಗಿ ತಿಳಿದು ಕೊಳ್ಳುತ ಬಂದಂತೆಲ್ಲಾ ಧೈಯ್ಯಶಾಲಿಗಳಾಗುವ ಸಂಭವವುಂಟು.