ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧೨೩ ವನ್ನು ಗೊತ್ತು ಮಾಡಿಕೊಂಡು ನಡೆಯಬೇಕು. ಕಾಲ ಕ್ಲುಪ್ತವಿಲ್ಲದೆ ಸ್ನೇಚ್ಛೆಯಾಗಿ ಮಾಡಿದ ಕೆಲಸವು ಕೆಟ್ಟು ಹೋಗುವುದಲ್ಲದೆ ಹಾಗೆ ಮಾಡ ತಕ್ಕವರು ಅಪಹಾಸಕ್ಕೂ ಈಡಾಗುವರು. (28) ಕರ್ತವ್ಯ. ನಾವು ಯಾವುದನ್ನು ತಪ್ಪದೆ ಮಾಡಲೇ ಬೇಕಾಗಿರುವುದೋ ಅದಕ್ಕೆ ಕರ್ತವ್ಯವೆಂದು ಹೆಸರು. ನಾವು ನಮ್ಮ ಕರ್ತವ್ಯವನ್ನು ಇತರ ಕಾರಗಳ ಗಿಂತ ಮೊದಲು ಮಾಡಬೇಕು. ನಮ್ಮ ಕರ್ತವ್ಯವನ್ನು ನಾವು ಮಾಡುವುದ ರಿಂದ ಇತರರು ನನ್ನನ್ನು ಹೊಗಳಲಿ ಅಥವಾ ಇನ್ನು ಯಾವುದಾದರೊಂದು ವಿಧದಲ್ಲಿ ಸಹಾಯಮಾಡಲಿ ಎಂಬಂಥ ಉದ್ದೇಶಗಳಿರಕೂಡದು, ಕರ್ತವ್ಯ ವನ್ನು ಶ್ರದ್ದೆಯಿಂದ ಚೆನ್ನಾಗಿ ಮಾಡಬೇಕು. * ನಮ್ಮಂತೆ ಇರತಕ್ಕೆ ಆತ ರರು ಮಾಡಲಿಲ್ಲವಲ್ಲಾ ನಾವೇಕೆಮಾಡಬೇಕು ? ಎಂದು ಪೇಚಾಡುತ್ತ ನಾವು ನಮ್ಮ ಕರ್ತವ್ಯವನ್ನು ನಡೆಯಿಸುವುದರಲ್ಲಿ ಹಿಂದೆಗೆಯಬಾರದು. ಕರ್ತವ್ಯದ ವಿಷಯವಾಗಿ ಸರಿಯಾದ ನಿದರ್ಶನಗಳು ದೊರೆಯುವುವು. ಕರ್ತವ್ಯವನ್ನು ಮಾಡುವುದರಲ್ಲಿ ತಮಗೆ ಹೀಗೆ ತೋರುವುದೆಂದಾಗಲಿ ಇದನ್ನು ಹೀಗೆ ಮಾಡಬಹುದೆ ಎಂದು ಸಂಶಯಪಡುವುದಾಗಿಯಾಗಲಿ ಯಾವುದನ್ನು ಹೇಳುವುದಕ್ಕೂ ಅಧಿಕಾರವಿಲ್ಲ. ಪರಸ್ಪರ ಹಕ್ಕುಬಾಧ್ಯತೆಗಳಿಗೆ ಲೋಪವಿಲ್ಲದಂತೆ ಜನಗಳು ನಡೆದು ತಕ್ಕೆ ಧಕ್ಕವೇ ಕರ್ತವ್ಯವೆಂದೂ ಇದರಿಂದ ದೇವರ ವಿಷಯದಲ್ಲಿ ನಾವು ಆಚರಿಸಬೇಕಾದ ಕರ್ತವ್ಯವೂ ನೆರವೇರುವುದೆಂದೂ ತತ್ವಜ್ಞಾನಿಗಳಾದ ಇವರು ಹೇಳುವರು. * ನಾನು ಯಾವದಕ್ಕೂ ಜವಾಬ್ದಾರನಲ್ಲ, ನನಗೆ ಯಾವ ಕರ್ತವ್ಯವೂ ಇಲ್ಲ' ಎಂದು ಯಾವ ಮನುಷ್ಯನೂ ಹೇಳಲಾರನು. ಯಾಕೆಂದರೆ ಲೋಕದಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಕರ್ತಜ್ಞ ಗಳು ಇದ್ದೇ ಇರುವುವು. ಅಂದರೆ ನಮ್ಮ ಸ್ವಂತ ವಿಷಯದಲ್ಲಿಯೂ ಇd