ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೨ ಕರ್ಣಾಟಕ ಗ್ರಂಥಮಾಲೆ ಮೆರವಣಿಗೆ, ಮೇಳ, ಮುಲ್ಕಿ, ಮೊದಲಾದುವುಗಳಲ್ಲಿ ಯ, ಸ್ನೇಹಿತರಿಗೆ ಅಥವಾ ನೆಂಟರಿಷ್ಟರಿಗೆ ನಡೆಯಿಸುವ ಔತಣ ಉಪಚಾರಗಳಲ್ಲಿಯ, ಮೃತ ರಾದವರ ಉತ್ತರಕ್ರಿಯಾದಿಗಳಲ್ಲಿ ದಾನಧರಗಳ ರೂಪದಲ್ಲಿಯೂ, ಉಡಿಗೆ, ತೊಡುಗೆ, ವಾಹನ, ಸೇವಕರು ಇತ್ಯಾದಿಗಳಲ್ಲಿಯ ಮಿತಿಮೀರಿ ದ್ರವ್ಯ ವನ್ನು ದುರುಪಯೋಗಪಡಿಸುವರು, ಸತ್ಕಾರದವರು ತನ್ನ ಔದಾರ್ಯಕ್ಕೆ ಮಜ್ಜ ಏನಾದರೂ ಬಿರುದುಗಳನ್ನು ಕೊಡುವರೆಂಬ ಹಾರಯಿಕೆಯಿಂದಲೂ ಹಲವರು ದುಂದುಗಾರರಾಗುವದುಂಟು. ಒಬ್ಬ ದಕ್ಷನು ತನಗೆ ಸಾರ ದಿಂದ ಏನೋ ಒಂದು ದೊಡ್ಡ ಬಿರುದು ಬರಬಹುದೆಂದು ನಂಬಿಕೊಂಡು ಇದ್ದ ಆಸ್ತಿಯನ್ನೆಲ್ಲಾ ಮಾರಿ ಯಾವುದೋ ಒಂದು ಧರ್ಮದಫಂಡಿಗೆಂದು ಕೊಟ್ಟು ಬಿರುದು ಇಂದು ಬಂದೀತು, ನಾಳೆ ಬರಬಹುದು ಎಂದು ನಿತ್ಯ ಗಟ್ಟೆ ಟಪಾಲನ್ನು ನಿರೀಕ್ಷಿಸುತ್ತ ಎಷ್ಟೋ ತಿಂಗಳುಗಳನ್ನು ಕಳೆದನು. ಆದರೆ ಸತ್ಕಾರದವರು ನಿಜವಾದ ಯೋಗ್ಯತೆಯುಳ್ಳವರನ್ನು ಮಾತ್ರ ಮುಚ್ಚು ವರೆಂಬುದನ್ನು ತಿಳಿಯಲಾರದವನಾಗಿದ್ದನು. ಅಂತು ಅವನಿಗೆ ಯಾವಬಿರುದೂ ಬರಲಿಲ್ಲ. ಹಣವು ತಲಪಿದುದಕ್ಕೆ ವಂದನಾ ಪತ್ರಿಕ ಬಂದಿತು. ಇಷ್ಟಕ್ಕೇ ತೃಪ್ತನಾಗದೆ ಅವನು ಪುನಃ-ನನ್ನ ಧರ್ಮವು ಪ್ರಭುಗಳ ಕಟಾಕ್ಷಕ್ಕೆ ಪಾತ್ರವಾದಂತಿಲ್ಲವೆಂದು ಅರಿಕಮಾಡಿಕೊಂಡನು. ಆಗ ಮತ್ತೆ ಸತ್ಕಾರದವರು- ಈ ವಿಷಯವಾಗಿ ಹಿಂದೆಯೇ ನಿಮಗೆ ವಂದನಾ ಪತ್ರಿಕೆಯನ್ನು ಕಳುಹಿಸಿದ್ದೇವೆ ಅದು ತಲಪದಿದ್ದಲ್ಲಿ ಪುನಃ ನಿಮ್ಮನ್ನು ವಂದಿಸುತ್ತೇವೆ ಎಂದು ಉತ್ತರವನ್ನು ಕೊಟ್ಟರಂತೆ ! ಅಂಥ ಬೆಚ್ಚುತನಕ್ಕೆ ಗುರಿಯಾದ ದುಂದುಗಾರನ ಪಾಡನ್ನು ಏನೆಂದು ಹೇಳೋಣ ! ಅಯ್ಯೋ ಪಾಪ ! ತಿನ್ನುವುದಕ್ಕೆ ಕೂಡ ಗತಿಯಿಲ್ಲದಂತಾಯಿತು, ಇನ್ನೊಬ್ಬ ಮರುಳನು ಮನೆಯಲ್ಲಿ ಶ್ರೀಗಂಧದ ಎಣ್ಣೆಯನ್ನುರಿಸಿ ನಿರ್ಗ ತಿಕನಾದನಂತ 1 ಮತ್ತೊಬ್ಬ ಉದಾರಿಯು ತಮ್ಮ ಶ್ರೀಮನ್ಮಹಾರಾಣಿಯ ವರಿಗೆ ಕಾಫಿ ಟೀ ಗಳನ್ನು ಕಾಯಿಸುವುದಕ್ಕೋಸ್ಕರ ಲಕ್ಷಾಂತರ ರೂಪ ಯಿಗಳ ಬೆಲೆಯ ನೋಟುಗಳನ್ನು ಒಳಗಿಟ್ಟು ಉರಿಸಿದನಂತೆ. ಮಿತವ್ಯದಿಂದ ದ್ರವ್ಯವನ್ನು ಶೇಖರಿಸುವುದನ್ನು ಚಿಕ್ಕಂದಿನಿಂದಲೂ ಬಭ್ಯಾಸಮಾಡಿಸಬೇಕು. ಮಿತವ್ಯದ ವಿಚಾರದಲ್ಲಿ ಪುರುಷರು ಮತ್ತು