ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥಮಾಲೆ ಮಾಡಬೇಕಾಗಿದ್ದುದನ್ನು ಮಾಡಿದುದಕ್ಕೆ ಬಹುಮಾನವನ್ನು ಕೊಡಬೇಕು ದುದೇತಕ್ಕೆ ? ಆದರೆ ತಾನು ಮಾಡಬೇಕಾದಷ್ಟಕ್ಕೂ ಮೀರಿ ಇನ್ನೇನು ದರೂ ಅಸಾಧಾರಣವಾದ ಸಾಹಸವನ್ನು ಮಾಡಿದ್ದರೆ ಒಂದು ವೇಳ ದೊಡ್ಡ ಪರ ಮನಸ್ಸಿನಲ್ಲಿ ತಾನಾಗಿ ಹುಟ್ಟಿದ ಮಮತೆಯಿಂದ ಬಹುಮಾನಕ್ಕೆ ಪಾತ್ರನಾಗುವ ಸಂಭವವೂ ಉಂಟು. ನ್ಯಾಯವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಬೇಕಾದಲ್ಲಿ ಬಲು ಮಟ್ಟಿಗೂ ಜಾಗರೂಕತೆಯು ಆವಶ್ಯಕ. ಏಕಂದರೆ-ಯಾವ ಕಲಸದಲ್ಲಿಯೇ ಆಗಲಿ ಮಾಡಿದವರ ಉದ್ದೇಶ, ಕಕಿ ಪ್ರತಿ ಕಕ್ಷಿಗಳ ಸ್ವಭಾವ, ಯೋಗ್ಯತೆ, ಇಂಥವುಗಳನ್ನೆಲ್ಲಾ ತಿಳದ ಹೊರತು ಮೊಕದ್ದಮೆಯು ತೀರಾನವನ್ನು ಹೇಳಲಾಗುವುದಿಲ್ಲ. ಹೇಗೆಂದರೆ-ನೀರಿನ ಮೇಲ್ಗಡೆ ಒಂದೇಸಮವಾದ ಎತ್ತರವುಳ್ಳುದಾಗಿ ತೋರುವ ಗಿಡಗಳನ್ನು ನೋಡಿ ಅವೆಲ್ಲಾ ಒಂದೇ ಸವು ವಾದ ಎತ್ತರವುಳ್ಳವುಗಳು ಎನ್ನಲಾಗದು. ಏಕೆಂದರೆ-ಅವುಗಳಲ್ಲಿ ಕೆಲವು ನೀರಿನೊಳಗೆ ಕೇವಲ ಹಳ್ಳದ ಪ್ರದೇಶಗಳಲ್ಲಿ ಹುಟ್ಟಿ ಬಬಹುದು. ಮತ್ತೆ ಕೆಲವು ನೀರಿನೊಳಗೆ ದಿಣ್ಣೆಯ ಪ್ರದೇಶಗಳಲ್ಲಿ ಹುಟ್ಟಿರಬಹುದು. ಆದುದ ರಿಂದ ನೀರಿನ ಮೇಲಡೆಯ ಸ್ಥಿತಿಯನ್ನು ನೋಡಿದ ಮಾತ್ರಕ್ಕೆ ಆ ಗಿಡಗಳ ನಿಜವಾದ ಎತ್ತರದ ಪ್ರಮಾಣವು ಗೊತ್ತಾಗಲಾರದು ಪ್ರಬಲರಿಂದ ದುರ್ಬಲರಿಗೆ ಬಾಧೆಯಾಗುತ್ತಿರುವುದನ್ನು ಕಣ್ಣಾರ ನೋಡುತ್ತಿದ್ದರೂ ತಟಸ್ಥರಾಗಿರತಕ್ಕವರೂ ಅಥವಾ ತಾವೇ ಪ್ರಬಲರಾಗಿದ್ದು ದುರ್ಬಲರನ್ನು ಬಾಧಿಸತಕ್ಕವರ. ಎಂದಿಗೂ ನ್ಯಾಯಪರರಲ್ಲ. ಇವರು ಅನ್ಯಾಯಪ್ರವರ್ತಕರು. ಇತರರಿಗೆ ಕೈಲಾದ ಮಟ್ಟಿಗೂ ಸಹಾಯ ಮಾಡ ಬೇಕಂಬ ಸಂಕಲ್ಪದಿಂದ ದೇವರು ನಮಗೆ ಶಕ್ತಿಯನ್ನೂ ತಿಳಿವಳಿಕೆಯನ್ನೂ ಇಟ್ಟರುವನೇ ಹೊರತು ಅವರನ್ನು ತೊಂದರೆಪಡಿಸುವುದಕ್ಕಲ್ಲ. ಧನಿಕರು ಟಡವರನ್ನೂ ಗಟ್ಟಿಗರು ಕೈಲಾಗದವರನ್ನೂ, ದೊಡ್ಡವರು ಚಿಕ್ಕವರನ್ನೂ ಪುರುಷರು ಸ್ತ್ರೀಯರನ್ನೂ, ತುಂಟರು ಸಭ್ಯರನ್ನೂ, ಮನುಷ್ಯರು ತಿಕ್ಕ ಗೃತುಗಳನ್ನೂ ಬಾಧೆಪಡಿಸದಂತೆ ನೋಡಿಕೊಳ್ಳತಕ್ಕುದು ನ್ಯಾಯಪರನಾದ ಪ್ರತಿಯೊಬ್ಬ ಮನುಷ್ಯನಿಗೂ ಕರ್ತವ್ಯ. ಇಂಥ ಅನ್ಯಾಯಗಳನ್ನು ಕಟ್ಟಿ ಕುವುದು ಒಂದು ವೇಳೆ ತನಗೆ ಅಸಾಧ್ಯವಾದರೆ ಮಾತುಗಳಿಂದಲಾದರೂ