ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ HRANAnanananana ಎದೆಗುಂದದೆ ಸದಾ ಸಂತೋಷಶೀಲರಾಗಿರಬೇಕು. ಇತರರು ತಮ್ಮ ಬಂಧುಗಳು ಮಿತ್ರರು ಮೊದಲಾದ ಯಾರಾದರೊಬ್ಬರ ಮರಣ ಅಥವಾ ವಾಧಿ ಮುಂತಾದ ಏನಾದರೊಂದನ್ನು ಕುರಿತು ತುಂಬ ವ್ಯಸನಪಡುತ್ತಿರು ವಾಗ ನಾವು ನಮ್ಮ ಸಂತೋಷದ ಸುದ್ದಿಗಳನ್ನೇ ಅವರ ಸಂಗಡ ಹೇಳುತ್ತ ಬಂದರೆ ಅವರ ಮನಸ್ಸಿಗೆ ಮತ್ತಷ್ಟು ವ್ಯಥೆಯಾದೀತು. ಆದುದರಿಂದ ಅಂತಹ ಸಂದರ್ಭಗಳಲ್ಲಿ ತಕ್ಕ ಸಮಾಧಾನೋಕ್ತಿಗಳಿಂದ ಅವರ ದುಃಖವನ್ನು ತಗಿ ಸಲು ಯತ್ನಿಸಬೇಕು. ಯಾರಾದರೂ ತಮ್ಮ ಇಷ್ಟಮಿತ್ರರ ಮರಣದಿಂದ ತುಂಬ ವ್ಯಥೆಪಟ್ಟು ಸ್ವಲ್ಪ ಕಾಲದ ಮೇಲೆ ತಾಂತರಾಗಿದ್ದಾಗ ಬಹುಕಾಲ ಕೊಂದುಸಲ ಅವರ ಯೋಗಕ್ಷೇಮವನ್ನು ವಿಚಾರಿಸುವುದಕ್ಕೆಂದು ಬಂದ ವರು ಗತಿಸಿಹೋದವರ ವಿಷಯವನ್ನೆಲ್ಲಾ ವರ್ಣಿಸುತ್ತ ಪುನಃ ಪುನಃ ಆಡು ತ್ಯ ಬರುವುದರಿಂದ ಅವರು ಮರೆತಿದ್ದ ದುಃಖವನ್ನು ಮತ್ತೆ ಜ್ಞಾಪಿಸಿ ತೊ೦ ದರೆಪಡಿಸಿದಂತಾಗುವುದರಿಂದ ಈ ವಿಷಯದಲ್ಲಿ ತುಂಬ ಜಾಗರೂಕತೆಯಿಂದಿ ರಬೇಕು, ಲೋಕದಲ್ಲಿ ಯಾರನ್ನೂ ಕೆಟ್ಟವರೆಂದು ಭಾವಿಸಬಾರದು. ನಮ್ಮ ಬಾಯಿಒಳ್ಳೆಯದಾದರೆ ಊರು ಒಳ್ಳೆಯದಾಗುವುದು. ಒಟ್ಟು ನೋಡಿದರೆ ನಮಗೆ ಯಾವುದು ಆಗಕೂಡದೆನ್ನು ತೇವೊ ಅದನ್ನು ನಾವು ಇತರರಿಗೂ ಮಾಡಬಾರದು. ಅಂತ: ನಮ್ಮ ವಂಶಕ್ಕೂ, ನಾವು ವಿದ್ಯೆ ಕ ಲಿತ ಪಾಠಶಾಲೆಗೂ ಕೀರ್ತಿಬರುವಂತೆ ನಡೆದುಕೊಳ್ಳಬೇಕು. ನಾವು ಅರೋr'ದೃಢಕಾಯರಾಗಿಯ ದೀರ್ಘಾಯುಷ್ಮಂತರಾ ಗಿಯ ಬಾಳ. ಇತರರಿಂದ ಗೌರವವನ್ನೂ ಪಡೆಯುತ್ತಿರಬೇಕಾದರೆ ನೈರಲ್ಯವು ನನಗೆ ಅತ್ಯಾವಶ್ಯಕ. ನೈರಲ್ಯವು ದೇಹ, ಉಡುಪು, ಮನೆ, ಮನೆಯಲ್ಲಿಯ ವಸ್ತು ಇತ್ಯಾದಿ ವಿಷಯಗಳಲ್ಲೆಲ್ಲಾ ಆಚರಣೀಯವಾದುದು. ಮೈಯ ಕೊಳೆಯು ಚರದಲ್ಲಿರುವ ರಂಧ್ರಗಳನ೪ಕ ಸರಾಗವಾಗಿ