ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ಆಳ ಮೊಣಕೈಯಾಡಿದರೆ ಮುಂಗೈಯಾಡುವುದು ಎಂಬಂತೆ ನಾವು ಇತರಕ ಏಷಯದಲ್ಲಿ ಹೇಗೆ ನಡೆಯುತ್ತೇವೋ ಅವರೂ ನಮ್ಮ ವಿಷಯದಲ್ಲಿ ಹುಗೆ ಯೇ ನಡೆಯುತ್ತಾರೆ, ನಾಲ್ಕು ಜನ ಸೇರಿದಾಗ ಒಂದು ಮಾತನ್ನೂ ಆಡದೆ ಕೆಲವರು ಬಾಯಿಗೆ ಬೀಗಮುದ್ರೆಯನ್ನು ಧರಿಸಿದವರಂತೆ ಸುಮ್ಮನಿರು ತಾರೆ, ಅಪ್ರಯೋಜಕವಾದ ಮಾತುಗಳನ್ನಾಡುವುದೇನೋ ನಿಸಿದ್ದ ವಾ ದರೂ ಯಾವಕೆಡುಕೂ ಇಲ್ಲದ ಸರಸಮ್ಮತವಾದ ಮಾತುಗಳನ್ನಾಡುವು ದಕ್ಕೆ ಏನೂ ಅಡ್ಡಿ ಇಲ್ಲವಷ್ಟೆ, ಇಂಥವರೊಬ್ಬರು ಸುಮ್ಮನೆ ಕುಳಿತಿದ್ದ ರಾ ಜತೆಯಲ್ಲಿದ್ದವರಲ್ಲಿ ಕೆಲವರು ವಾಗ್ರಸವಾಗಿ ಪ್ರಶ್ನಿಸಿಯಾದರೂ ಆಥವಾ ನೋಟದ ಮೂಲಕ ಪ್ರಶ್ನೆಯನ್ನು ಸೂಚಿಸಿಯಾದರೂ ಇವರ ಅಭಿಪ್ರಾಯ ವನ್ನು ಕೇಳಿ ಯಾರು ಆದ್ರೂ ಮಾತಾಡದೆ ಶ್ರೀಮದ್ಗಾ೦ಭೀರವನ್ನು ಧರಿಸಿಕೊಂ ಡಿರುವುದು ಒರಟುತನ, ಅಥವಾ ಸ್ವಪ್ರಯತ್ನದಿಂದ ಬಲಾತ್ಕಾರವಾಗಿ ಪಡೆದು ಕೊಳ್ಳಬೇಕೆಂದಿರುವ ದೊಡ್ಡಮನ ಪ್ಯತನ, ಮಾತಾಡಿದರೆ ಮುತ್ತು ಸುರಿದು ಹೋಗುವುದೋ ಏನೋ ಎಂದು ತಿಳಿದುಕೊಂಡಿರುವ ಜನಗಳು ಮಾತಿ ನಲ್ಲಿ ಕೂಡ ಇಷ್ಟು ಜಿಪುಣರಾಗಿರುವಲ್ಲಿ ಇತರ ವಿಷಯಗಳಲ್ಲಿ ಧಾರಾಳ ವಾದ ಮನಸ್ಸುಳ್ಳವರೆಂದು ಇವರನ್ನು ನಂಬುವ ಬಗೆ ಹೇಗೆ ? ದೊಡ್ಡ ದೆಚ್ಚ ಪದವಿಗಳಲ್ಲಿರತಕ್ಕ ಭಾಗ್ಯಶಾಲಿಗಳೆಲ್ಲರೂ ಈ ವ.ನರೋಗವನ್ನು ಹಾಳದೆ ಬಡಬಗ್ಗರು ಬಂದು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳು ವುದಕ್ಕೆ ಅವಕಾಶವನ್ನು ಕೊಟ್ಟು ಕಡೆಗೆ ದಯಾಮಯಗಳಾದ ಒಂದೆರಡು ನುಡಿಗಳಿಂದಲಾದರೂ ಆದರಿಸಬೇಕೇ ಹೊರತು ಅವನ್ನು ತಳ್ಳಿಸಿಬಿಡುವು ದಕ್ಕೆ ಯತ್ನಿಸಬಾರದು. ಬೀದಿಯಲ್ಲಿ ಹೋಗುತ್ತಿರುವಾಗ ಪರಸ್ಥಳಿದವರು ದಾರಿಯನ್ನೂ ಅಥವಾ ಅವರಿಗೆ ಆವಶ್ಯಕವಾದ ಇನ್ನೇನಾದರೂ ಸಂಗತಿಯನ್ನೋ ಕೇಳಿ ದರೆ, ಓದು ಬರದವರು ದಯವಿಟ್ಟು ಒಂದು ಕಾಗದವನ್ನು ಓದಿ ಹೇಳಬೇ G