ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೨ಕಿ ಕೊಂಡಿರುವುದು ನಮ್ಮ ಕರ್ತವ್ಯವಲ್ಲ, ಕಷ್ಟ ಪಟ್ಟು ದುಡಿಯುವ ಒಬ್ಬನ ಸಂಪಾದನೆಯಿಂದ ಎಂಟು ಹತ್ತು ಜನ ಸೋಮಾರಿಗಳು ನಾಚಿಕೆಯಿಲ್ಲದೆ ಜೀವನ ಮಾಡುತ್ತಿರುವಂಥ ಕೆಟ್ಟ ನಡವಳಿಕೆಯು ನಮ್ಮಲ್ಲಿ ಬೇರೂರಿರು ವುದರಿಂದಲೇ ಅಷ್ಟೆಪ್ಪ ರೈ ಸಂಪನ್ನವಾದ ಭಾರತಭೂಮಿಯಲ್ಲೇ ಸಾವಿರಾರು ವರ್ಷಗಳಿಂದ ನೆಲೆಗೊಂಡು ಭಾರತೀಯರೆಂದೆನಿಸಿಕೊಳ್ಳುತ್ತಿದ್ದರೂ ನಮಗೆ ಇಂಥ ದರಿದ್ರಾವಸ್ಥೆಯು ಸುಪ್ತವಾಗಿರುವುದು, ಜೀವನಕ್ಕೋಸ್ಕರವೆಂದು ಕೂಡ ಅಯುಕ್ತವಾದ ಕಲಸವನ್ನು ಎಂದಿಗೂ ಮಾಡಬಾರದು, ನಾವುಮಾಡುವ ಕೆಲಸದಿಂದ ಇತರರಿಗೆ ಯಾವ ಕೆಡಕೂ ಆಗಕೂಡದಲ್ಲದೆ ಸಾಧ್ಯವಾದ ಮಟ್ಟಿಗೂ ಅವರಿಗೆ ಏನಾದರೊಂದು ಪ್ರತ್ಯಕ್ಷ ಫಲವು ತೋರಬೇಕು. (27) ಹೊತ್ತಿಗೆ ಸರಿಯಾಗಿ ಕೆಲಸಮಾಡಿಸುವುದು. ಪ್ರತಿಯೊಂದು ಕೆಲಸಕ್ಕೂ ಕ್ಲುಪ್ತವಾದ ಒಂದೊಂದು ಹೊತ್ತನ್ನು ಗೊತ್ತುಮಾಡಿಕೊಂಡು ಆಯಾ ಕಾಲಗಳಲ್ಲಿ ಅದದನ್ನು ತಪ್ಪದೆ ಮಾರ ಬೇಕು, ಹೀಗೆ ಮಾಡತಕ್ಕವರಿಗೆ ಆತ್ಮಗೌರವವು ಉಂಟಾಗುತ್ತದೆ, ಮತ್ತು ಹಿಡಿದ ಕಲಸವೂ ಚೆನ್ನಾಗಿ ನಡೆಯುತ್ತದೆ. ಆಗಾಗಿನ ಕೆಲಸಗಳನ್ನು ಆಗಾ ಗಲೆ ಮಾಡಿ ಮುಗಿಸದಿದ್ದರೆ ಮುಂದಕ್ಕೆ ಎಲ್ಲಾ ಕೆಲಸಗಳೂ ಒಟ್ಟುಗೂಡಿ ರಾಶಿಯಾಗುವುದರಿಂದ ಆಗ ಮಾಡುವುದಕ್ಕೆ ಬೇಸರವಾಗುವುದು, ಹಾಗಿಲ್ಲದೆ ಒಂದು ಕ್ರಮವಾದ ನಿಯಮವನ್ನು ಅನುಸರಿಸಿದರೆ ಕಾಲವೂ ವ್ಯರ್ಥವಾಗು ವುದಿಲ್ಲ, ಯಾವ ಸಣ್ಣಪುಟ್ಟ ಕೆಲಸಗಳೂ ಬಿಟ್ಟು ಹೋಗದೆ ಸರಿಯಾಗಿ ನೆರವೇರುತ್ತವೆ, ಹೊತ್ತಿಗೆ ಸರಿಯಾಗಿ ನಡೆಯುವವರನ್ನು ಎಲ್ಲರೂ ಮೆಚ್ಚುವರು. ದೇವರ ಸೃಷ್ಟಿಯಲ್ಲಿ ಸೂರಚಂದ್ರಾದಿಗಳ ಕೂಡ ತಪ್ಪದೆ ಕಾಲ ನಿಯ ಮಕ್ಕೆ ಬದ್ಧರಾಗಿ ನಡೆಯುತ್ತಾರೆ. ಉದಯಾಸ್ತ್ರಗಳು, ಹುಣ್ಣಿಮೆ ಅಮಾ 16.