ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಿಲೆ ಕರ್ಣಾಟಕ ಗ್ರಂಥಮಾಲೆ wwwamy ಮುಂದೆ ಓದಿದರೆ ಫಲಪುಷ್ಪಗಳು ದೊರೆತವೆ? ಆದುದರಿಂದ ಪ್ರಪಂಚದ ಲ್ಲಿ ಪ್ರಕೃತಿ ವಸ್ತುಗಳನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಿ ತಿಳಿದುಕೊಳ್ಳು ವುದೂ ಒಂದು ವಿಧವಾದ ವಿದ್ಯಾಭ್ಯಾಸವೇ ಸರಿ. - ವಿದ್ಯೆಯನ್ನು ಕಲಿಸುವ ಉಪಾಧ್ಯಾಯರ ಕೆಲಸವು ಬಹಳ ಜವಾ ಬ್ದಾರಿಯುಳ್ಳದು ಇದು ಬಹಳ ಕಷ್ಟವಾದುದರಿಂದ ಬೇಸರಪಡಿಸಿ ಸಾಕ ನ್ನಿಸುವುದು, ಮಕ್ಕಳ ಸಂಗಡ, ಆಡುವುದೇ ಸಂತೋಷಕರ. ಆದರೆ ಆವ ರಿಗೆ ಪಾಠಗಳನ್ನು ಮುಖ್ಯವಾಗಿ ಗಣಿತ ವ್ಯಾಕರಣ ಮೊದಲಾದುವುಗಳನ್ನು ಬೋಧಿಸುವಾಗ ಉತ್ತೇಜನಕೊಟ್ಟು ಕುತೂಹಲವನ್ನು ಹುಟ್ಟಿಸಿ ಕಲಸ ಮಹುತ್ತ ಬುದ್ದಿ ಸಂಸ್ಕಾರಮಾಡುವುದಾದರೂ ಎಂದಿಗೂ ಸುಲಭದಲ್ಲ. ವಿದ್ಯೆಯನ್ನು ಕಲಿಯುವುದರಲ್ಲಿ ನ್ಯಾಯವಾದಿ, ಉಪಾಧ್ಯಾಯ ಅಥವಾ ವೈದ್ಯ ಇಂಥವರಾಗಬೇಕೆಂಬ ಉದ್ದೇಶಗಳು ಮುಖ್ಯವಲ್ಲ. ಸ್ಪಂತವಾದ ಅಥವಾ ರಾಜಕೀಯವಾದ ಯಾವ ಕೆಲಸವನ್ನಾದರೂ ನ್ಯಾಯವಾಗಿಯ ಬುದ್ದಿವಂತಿಕೆಯಿಂದಲೂ ಧಾರಾಳವಾಗಿ ನಿರಹಿಸಬಲ್ಲ ಶಕ್ತಿಯುಂಟಾಗುವ ಮಟ್ಟಿಗೆ ವಿದ್ಯೆಯಿಂದ ಫಲವಾಗಬೇಕು, ಮತ್ತು ದೇಶಾಭಿಮಾನ, ರಾಜ ಭಕ್ತಿ, ಆತ್ಮಸಂಯಮನ, ಪರಿಶುದ್ದಿ ಇವೂ ಉಂಟಾಗಬೇಕು, ಮಕ್ಕಳಿಗೆ ಬರೀ ಪುಸ್ತಕವಂಥಗಳನ್ನೇ ಕಲಿಸದೆ ಮರ, ಗಿಡ, ಬೆಟ್ಟ, ಗುಡ್ಡ, ಹೊಳ, ಆಕಾಶ, ನಕ್ಷತ್ರ, ಮೋಡ, ಗಾಳಿ, ಮಳೆ, ಪ್ರಾಣಿಗಳು ಇಂಥವನ್ನು ಪ್ರತ್ಯ ಕ್ಷವಾಗಿ ಬೆನೀಧಿಸಬೇಕ .. ಬರೀ ಪುಸ್ತಕಪಾಠದಲ್ಲಿ ಪ್ರತ್ಯಕ್ಷಾನುಭವಕ್ಕೂ ತನ್ಮೂಲಕವಾಗಿ ಪರಾಮರ್ಶಕ ಅವಕಾಶವಿರುವುದಿಲ್ಲ, ಯಾವ ವಿಷಯ ನನ್ನ ಕಣ್ಣಿಂದ ನೋಡುವಷ್ಟು ಚೆನ್ನಾಗಿ ಪುಸ್ತಕಗಳಲ್ಲಿ ವರ್ಣಿಸಲಾಗುವು ದಿಲ್ಲ, ಪ್ರತ್ಯಕ್ಷವಾದ ಪ್ರಕೃತಿಪಾಠಕ್ಕ ಹಳ್ಳಿಯ ಪಂತ್ಯಗಳಲ್ಲಿ ಸೌಕಯ್ಯ ಹೆಚ್ಚು ಪ್ರಕೃತಿಪಾಠವನ್ನು ಸಾಕ್ಷಾತ್ಕಾಗಿ ಕಲಿಯುವ ಅಭ್ಯಾಸವನ್ನು ನಾವು ಪಡೆಯದಿರುವುದರಿಂದಲೇ ನಮ್ಮ ಪಾಠಶಾಲೆಯನ್ನು ಬಿಟ್ಟ ನಂತರ ವಿದ್ಯಾಭ್ಯಾಸವು ನಿಂತೇ ಹೋಗುವುದು, ವಿದ್ಯಾಭ್ಯಾಸದ ವಿಚಾರದಲ್ಲಿ ಪ್ರೊಫೆಸರ್ ಹಸ್ಸಿಯು ಹೀಗೆ ಹೇಳಿದ್ದಾನೆ. “ ಹುಡುಗರು ೧೫-+ ವಯ ಸ್ಸಿನೊಳಗೆ ಸೃಭಾಷೆಯನ್ನಾದರೂ ಚೆನ್ನಾಗಿ ಓದುವುದು, ಬರೆಯುವುದು, ಒಳ್ಳೆಯ ಕವಿಗಳ ಉದ್ಧಂಥಗಳನ್ನು ಗ್ರಹಿಸುವುದು, ಪ್ರದೇಶದ ಚರಿ