ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8aw ಅರವತ್ತೆರಡನೇ ಅಧ್ಯಾಯ ಸ್ಕರವಲ್ಲದೆ ಮತ್ತೊಂದಲ್ಪಾ, ನಿನ್ನ ಮನಸ್ಸಿನಲ್ಲಿ ಚಿಂತೆಯಂಮಾಡಬೇಡ. ಹೀಗೆಂದು ಸರನಕುಸರಿಸಿ, ನಾಚಿಕೆಗಳಿಂದ ಶಿರವಾಗಿಸಿಕೊಂಡು ಭಯಸ್ಥರಾಗಿ ಇದ್ದ ಗಣಂಗಳಂ ಯೋಗಿನಿಯರು ನೋಡಿ, ಮೃದುವಾಕ್ಕೆ ದಿಂದ ಅವರ ಭಯವಂಬಿಡಿಸಿ, ಅಂಜಬೇಡ ಎಂದು ಅಭಯವಂಕೊಟ್ಟ ಮನ್ನಿಸಿದನು, ಅನಂತರದಲ್ಲಿ ತನ್ನ ಎಡದಲ್ಲಿ ಕನಕಸಿಂಹಾಸನದಲ್ಲಿ ಕು ಆತುಯಿಡ್ಡ ಶ್ರೀಮಹಾವಿಷ್ಣುವಂನೋಡಿ, ಮುಗುಳನಗೆಯಿಂ ನೋಡಲು ಗಾಂಭೀರವುಳೆ ವಿಷ್ಣುವೂ ತಲೆಬಾಗಿ ಒಂದು ಮಾತು ಆಡಿದವನಲ್ಲವಾಗಿ ಸುಮ್ಮನಿರಲು, ಪರಮೇಶ್ವರನು ವಿನಾಟಕ ಮಾಡಿದ ತಂತವೆಂ ವಿಸ್ಸು ಮಾಡಿದ ಕಾರ್ಯವು ಮೊದಲೇ ಗರುಡನಿಂ ತಿಳಿದವನಾದಕಾರಣ ಮನಸ್ಸಿನಲ್ಲಿ ಸಂತೋಷಪಟ್ಟು, ಪ್ರತ್ಯುತ್ತರಂಗಳಿಲ್ಲದೆ ಇರುತ್ತಿರಲು, ಸಕಲಲೋಕದವರೂ ಪರಮಶರನೋ ಕಾಶೀವಟ್ಟಣಕ್ಕೆ ಬಂದುದಂಕೇ ೪ ಸಕಲರೂ ಬಂದು ಸೇವಿಸಿ ಸಂತೋಷದಿಂದಿರುತ್ತಿರಲು, ಆ ಸಮಯ ದಲ್ಲಿ ಪರಮೇಶ್ವರನ ದರ್ಶನನಿಮಿತ್ತವಾಗಿ ಗೋಲೋಕದಿಂದ ಸುನಂದೆ, ಸುಮನ, ಸುಶೀಲೆ, ಸುರಭಿ, ಕಪಿಲೆಗಳೆಂಬ ಪಂಚಧೇನುಗಳು ಬಂದು ಅತಿವಾತ್ಸಲ್ಯದಿಂದ ಪರಮೇಶ್ವರನ ಶಿರಸ್ಸಿನಲ್ಲಿ ಜಡಿಮಳೆಕರದಂತೆ ತಮ್ಮ ಕೆಚ್ಚಲುಗಳೆಂಬ ಮೇಘದಿಂದ ಕ್ರೀರವರ್ಷವಂ ಕರೆಯಲು, ಎರಡನೇ ಕ್ಷೀರಸಮುದ್ರವೆಂಬಂತೆ ಅಲ್ಲಿ ಒಂದು ಹಾಲುಮಡುವಾಗಿತ್ತು, ಆಗ ಈಶ್ವರನು ಅವಕ್ಕೆ ಕಪಿಲತೀರ್ಥವೆಂದು ಹೆಸರಿಟ್ಟು ತಾನು ಸ್ಟಾನಂ ಗಳಂ ಮಾಡಲು, ಆಗ ಪರಮೇಶ್ವರನ ಆಜ್ಞೆಯಿಂದ ಬ್ರಹ್ಮ, ವಿಷ್ಣು ಮೊದಲಾದ ದೇವರ್ಕಳು, ಸಕಲ ಸಸಿಗಳು, ನೆರದು ನಾನಾಲೋಕದ ಜನಂಗಳು ಎಲ್ಲರೂ ಸ್ನಾನವಂ ಮಾಡಿದರು. ಆ ಸಮಯಲ್ಲಿ ಕಏಲಹು ದತೀರ್ಥದಿಂದ ಪಿತೃಗಳು ಹೊರಟುಬರಲು; ದೇವತೆಗಳು ಮುಖಗಳು ನೆರವು ಸಕಲ ದೇವರ್ಸಿ ಪಿತೃತರ್ಪಣಂಗಳಂ ಕಟ್ಟರು. ಆ ಏತ್ರಗಳ ಹೆಸರೇನೆನ~ ಅಗ್ನಿಪಾತರು, ಬರ್ಹಿದರು ಆದ್ಯಪರು, ಸೋಮ ವರು, ಇವರು ಮೊದಲಾದ ಪಿತೃಗಳ, ದೇವರ್ಕಳು ಕೊಟ್ಟ ತರ್ಪಣ ಗಳಿ೦ ತೃಪ್ತರಾಗಿ ಪರಮೇಶ್ವರಗೆ ಬಿನ್ನಿಸಿದರು. ಎಲೈ ದೇವರೇವ ಜಗ