ಪುಟ:ಕುರುಕ್ಷೇತ್ರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లేఖ్యట్విధినీ 68 ಶ್ರೀಮನಿ ಮಹಿಸೂರು ಸೀಮೆಯ ದಿವಾನಸಾಹೇಬರವರು ಸಕ ಪಿ ಎನೆ ಕೃಪ ಮೂರ್ತಿ, ಕೆ. ಸ, ಐ, ಇ, ಯವರ ಜನಾಬಿಗೆ. ೧v೯೪ನೇ ಇಸವಿ ಜನವರಿ vನೇ ತಾರೀಖಿನಲ್ಲಿ ತರೀಕೆರೆ ತಾ| ತರೀಕೆರೆ ಹೋಬಳಿ ವೆಂಕಟಾಪುರದಲ್ಲಿರುವ ವೆಂಕಟ್ ಗೌಡನ ಮಗ ರಾಮೇ ಗೌಡನು ಬರೆದುಕೊಂಡ ಅರ್ಜಿ; ನಮ್ಮ ಗ್ರಾಮದ ಗೋಮಾಳದ ಪೈಕಿ ೨೫ ಎಕರೆ ಜಮೀನನ್ನು ತಾಲ್ಲೂಕು ಅಮಲಾ ರವರ ಶಿಫಾರಸಿನ ಮೇಲೆ ಡೆಪು ತಿ ಕಮಿಾಷನರಿ ಸಾಹೇಬರವರು ನೆರೆಯ ಗ್ರಾಮದವನಾದ ಲಿಂಗಾಂಬುದಿಯ ಮಾದೇ ಗೌಡನ ಮಗ ರಾಮೇ ಗೌಡನಿಗೆ ಬಾಗಾಯತು ಸಾಗುವಳಿಗೆ ಕೊಡಿಸಿ ಬಿಟ್ಟಿದಾರೆ. ನಮ್ಮ ಗ್ರಾಮದಲ್ಲಿ ೨೦೦ ದನಗಳಿಗಿಂತ ಹೆಚ್ಚಾಗಿವೆ ಎಂಬುದು ಗ್ರಾಮದ ಖಾನೇಷುಮಾರಿ ಲೆಕ್ಕದಿಂದ ವೇದ್ಯವಾಗುತ್ತದೆ. ಈ ಮಲೆ ನಾಡು ಪ್ರಾಂತ್ಯದಲ್ಲಿ ಇಷ್ಟು ದನಗಳಿಗೆ ಇದುವರೆಗೆ ಇದ್ದ ೧೫೦ ಎಕರೆ ಕಾಡಿನ ಪ್ರದೇಶವು ಸಾಕಾಗಿರಲಿಲ್ಲ. ಅದರಲ್ಲಿಯ ೧೫ ಎಕರೆ ಯನ್ನು ಕಮ್ಮಿ ಮಾಡಿ ಬಿಟ್ಟರೆ ನಮ್ಮಗಳಿಗೆ ಬಹಳ ದುಸ್ತರವಾಗುತ್ತದೆ ಒ ಸ್ವಾಮಿ

  • ನಾವು ಡೆಪ್ಯುಟಿ ಕಮಿಷನರವರಲ್ಲಿ ನಮ್ಮ ತಕರಾರನ್ನು ಹೇಳಿ ಕೊಳ್ಳಲು, ಅವರು ಅದನ್ನು ತಿರಸ್ಕರಿಸಿ ಕೊಟ್ಟಿರುವ ಹುಕುಮನ್ನು ಇದರೊಡನೆ ಕಳುಹಿಸಿದ್ದೇನೆ.

ಇದನ್ನೆಲ್ಲಾ ಖಾವಂದರು ಪರಾಮರಿಸಿ, ಡೆಪ್ಯುಟಿ ಕಮಿಷನರಿ ಸಾಹೇಬರವರ ಹುಕುಮನ್ನು ರದ್ದು ಮಾಡಿ, ನನ್ನಂತಾ ಬಡರೈತರನ್ನು ಉದ್ದಾರ ಮಾಡಬೇಕೆಂದು ಅತಿ ವಿನಯವಾಗಿ ಬೇಡಿಕೊಳ್ಳುತೇನೆ, స్వామి (ರುಜ್) ರಾಮೇಗೌಡ,