ಪುಟ:ಕೆಳದಿನೃಪವಿಜಯಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xi ರಾಜೃಸಂಪಾದನೆ ಮಾಡಿ ಆನೆಗೊಂದಿಯಲ್ಲಿ [ಹಸ್ತಿಕೋಣ] ಆಳು ತಿದ್ದರು. ಒಂದುದಿನ ಇವರು ತುಂಗಭದ್ರಾನದಿಯನ್ನು ದಾಟಿ ಆಚೆಯ ದಡದಲ್ಲಿ ಬೇಟೆಯಾಡುತ್ತಿರುವಾಗ ತಾವು ಅಟ್ಟಿಸಿಕೊಂಡು ಹೋಗು ತಿದ್ದ ಮೊಲವು ಬೇಟೆಯ ನಾಯಿಗಳನ್ನು ಕಚ್ಚಿ ಅದೃಶ್ಯವಾಯಿತು. ಈ ಸ್ಥಳವು ರಾಜಧಾನಿಯನ್ನು ಕಟ್ಟುವುದಕ್ಕೆ ಸರ್ವೊತ್ತವವಾದು ದೆಂದು ತಿಳಿದು ವಿದ್ಯಾರಣ್ಯರು ಅಲ್ಲಿ ವಿಜಯನಗರವನ್ನು ಕಟ್ಟಿಸಿ ಹಕ್ಕ ನಿಗೆ ಪಟ್ಟಾಭಿಷೇಕ ಮೊಡಿದರು, ಇದು ಶಾ, ಶಕ ೧೦v-ರಲ್ಲಿ ಎಂದರೆ ಕ್ರಿ. ಶ. ೧೩೩೬ರಲ್ಲಿ ನಡೆಯಿತು. ಇಲ್ಲಿ - ಹ ಬ ಹೋ ವಿ ಬ ದೇ ರಾ ವಿ ದೇ ವಿ ಮಾ ರಾ ವಿ ! ಎಂಬ ಹದಿಮೂರುಜನ ರಾಜರು ಆYವರು 1 ; ಇವರಲ್ಲಿ ಒಂಬತ್ತನೆ ಯವನು ಆಳಿದ ಮೇಲೆ ರಾಷ್ಟ್ರ ಕೋವಾದಿಗಳು ಬಹಳವಾಗುವುವು. ಕೊನೆಯವನು ದೇಶಭ್ರಷ್ಟನಾಗಿ ಶತ್ರುದೇಶದಲ್ಲಿ ಮೃತಿಯನ್ನೆ ದು ವನು, ನೂರೈವತ್ತು ವರ್ಷಗಳಲ್ಲಿ ಈ ವಂಶವು ಕೊನೆಗಾಣುತ್ತದೆ. ಇತ್ಯಾದಿ. ವಿಜಯನಗರರಾಜ್ಯ ಸ್ಥಾಪನೆಯಾದ ಸಂದರ್ಭವನ್ನು ನ್ಯೂನಿಸ ಎಂಬ ಪೋರ್ಚುಗೀಸ ಚರಿತ್ರಕಾರನೂ ಸ್ವಲ್ಪ ಹೆಚ್ಚು ಕಡಿಮೆ ಇದೇ ರೀತಿಯಲ್ಲಿ ಹೇಳಿದ್ದಾನೆ. ಇದು ನಿಜವೆಂದು ಕೆಲವರು ಒಪ್ಪುತ್ತಾರೆ ಕೆಲವರು ಒಪ್ಪುವುದಿಲ್ಲ; ಇದರಲ್ಲಿ ಕೆಲವುಭಾಗ ನಿಜವೆಂದು ಸೂಚಿ ಸಾಹೇಬರ ಅಭಿಪ್ರಾಯವಿರುವಂತೆ ಕಾಣುತ್ತದೆ, ಕ್ರಿ. ಶ. ೧೩೩೬ ರಲ್ಲಿ ವಿಜಯನಗರವು ಸ್ಥಾಪನೆಯಾಯಿತೆಂದು ಇದುವರೆಗಿನ ಚರಿತ್ರಲೇಖಕ ರೆಲ್ಲರೂ ಒಪ್ಪಿಕೊಂಡಿದ್ದಾರೆ. ಇಲ್ಲಿಂದ ನೂರೈವತ್ತು ವರ್ಷಗಳಿಗೆ ಸರಿ ಯಾಗಿ “ ವಂಶಪೂರ್ತಿ ” ಯಾಯಿತೆಂದೂ ಹೇಳಬಹುದು, ಏಕೆಂದರೆ ಎರಡನೆಯ ವಂಶವು ಆರಂಭವಾದದ್ದು ಸಾಳ್ವನರಸಿಂಗನಿಂದ, ಈತನು ೧೫y೭ ರಲ್ಲಿ ಪಟ್ಟಕ್ಕೆ ಬಂದನು, ಆದರೆ ಹಬುಹೋವಿಬುದೇ.......? ಎಂಬ ಶ್ಲೋಕಗಳಲ್ಲಿ ಹೇಳಿರುವ ರಾಜಪರಂಪರೆಯ ಆಳಿಕೆಯ 1 ಈ ಗ್ರಂಥವು “ ಕಾಲಜ್ಞಾನ ” ವಾದುದರಿಂದ ಭವಿಷ್ಯ ದಾಸವು ಉದ ಯೋಗಿಸಲ್ಪಟ್ಟಿದೆ.