ಪುಟ:ಕೆಳದಿನೃಪವಿಜಯಂ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾ ದ ಶಾಶ್ವಾಸಂ. ಆ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬v೦ನೆಯ ಈಶ್ವರ ಸಂವತ್ಸರದ ಶ್ರಾವಣ ಬಹುಳ ಗುರುವಾರದೊಳೆ ಬಸವಪ್ಪ ನಾಯಕರ ಪತ್ನಿ ಚನ್ನ ವೀರಮ್ಯಾಜಿಯವರ್ಗೆ ಗೃಹೀತಪತುನಾದ ಸೋಮಶೇಖರ ನಾಯಕರ್ಗೆ ರಾಜಪಟ್ಟಮಾದುದಾ ವಿವರಣವೆಂತೆಂದೊಡೆ, ಚನ್ನ ಬಸವೇಂದ್ರಭೂಸಂ ಪನ್ನ ಗಭೂಷಣಸೊಳ್ಳೆಕ್ಯವಾಗಲೊಡನಾ | * ಚನ್ನ ವೀರಾಂಬೆ ಸಂಸ್ಥಾ ನನ್ನ ಡೆವೊಡೆ ಮುಂತೆ ಮಾರ್ಗಮಂ ಕಾಣದಣಂ || ಪಿರಿದುಂ ಚಿಂತಿಸಿ ಬಳಕೌಂ ದುರುಪಥಮಂ ಕಂಡು ತಮ್ಮ ಸೋದರಮಾವಂ || ಗುರ ಪುತ್ರರ್ನಾ೦ರಿರ್ಪ ರ್ಪರಿಕಿಪೊಡಾ ನಾಲ್ವರೊಳೆ ಕನಿಷ್ಣಾತ್ಮಜನಂ || ಸುಲಭದೆ ಗೃಹೀತಪುತ್ರನ | ನೋಲವಿಂದಂ ಮಾಡಿಕೊಂಡು ಸಂಸ್ಥಾನಕ್ಕಂ | ನಿಲಿಪುದೆ ಸುಮಂತ್ರವೆಂದಾ “ಲಲನಾಮಣಿ ತನ್ನ ಮನದೆ ನಿಶ್ಚಯಿಸುತ್ತು | ವರಬಸವಲಿಂಗಶಾಸ್ತ್ರೀ ಸರಸಿದ್ದಪನಾಯಕಾರಶಿವಲಿಂಗಪಮು | ಬ್ಲರೊಳಿದನಾಳೋಚಿಸಿ ಸ ರ್ವರ ಸಮ್ಮತದಿಂದೆ ತಹುದ ನಿಶ್ಚಯಗೈದಳೆ || ಇಂತು ನಿಶ್ಚಯಂಗೈದನಂತರಮಾ ಚನ್ನವೀರಮ್ಯಾಜಿ ಈಶ್ವರ ಸಂವತ್ಸರದ ಶ್ರಾವಣ ಬಹುಳ ಪಂಚಮಿ ಗುರುವಾರದೊಳ್ಳಮ್ಮ ಸೋ K. N. VIJAYA 28