ಪುಟ:ಕೆಳದಿನೃಪವಿಜಯಂ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

218 ಕೆಳದಿನೃಪವಿಜಯಂ ದರಮಾವನಾದ ಬಂಕಾಪುರದ ಪಟ್ಟಣಸೆಟ್ಟಚನ್ನವೀರಪ್ಪನವರ ಕನಿಷ ಪುತ್ರನಂ ಸರ್ವಸಂಭ್ರಮದೊಳರಮನೆಯ ದೇವರ ಭವಂತಿಗೆ ಬಿಜಯಂ ಗೈಸಿ ತಂದಶೇಷಗುರಿಕಾರರು ಮುಂದಿಟ್ಟು ಕುಮಾರನಂ ಶಾಸ್ಕೊ ಕ್ಕೆ ಪ್ರಕಾರದಿಂ ತನಗೆ ಗೃಹೀತಪುತ್ರನಂ ಮಾಡಿಕೊಂಡಾ ಕುಮಾರಂಗಂ ಸೋಮಶೇಖರನಾಯಕನೆಂದು ನಾಮಕರಣಮಂ ರಚಯಿನಿ ಗಗನ ಮಹಲ ಚಾವಡಿಯ ಸದರಿನೊಳಿ ಕುಳ್ಳಿರಿಸಿ 1 ರಾಜಪಟ್ಟಮಂ ಕಟ್ಟಿಸಿ ಸಂಸ್ಥಾನಾಧಿಪತ್ಯಕ್ಕೆ ನಿಲಿಸಿ ತದಾರಭ್ಯವಾ ಸೋಮಶೇಖರನಾಯಕರ ಚಾಲಕರಾದ ಕಾರಣದಿಂದಾ ಕುಮಾರನಂ ಮುಂದಿಟ್ಟುಕೊಂಡು ತಮ್ಮ ರಸನಾಳಿಬರುತ್ತಿರ್ದ ರಾಜರಾಷ್ಟ್ರ ದೇಶ ಕೋಶ ಪ್ರಜೆ ಪರಿವಾರ ಪರಿ ಸೈರಣ ಮಂತ್ರಿ ನಿಯೋಗಿ ಸಾಮಾಜಿಕ ಸಾಮಂತ ಗುರಿಕಾರ ಪುರಜನ ಪರಿಜನ ಮಿತ್ರಜನ ಸೇವಕಜನರ್ವಂತಾದ ಸಮಸ್ತ ಜನರಂ ಸಂರಕ್ಷೆ ಸುತ್ತುಂ ಸಂಸನದೊಳಗುಂಟಾದ ಕಾರಗಳನೆಲ್ಲಮಂ ತಾನೆ ವಹಿಸಿ ವಿಚಾರಂಗೆಯು ನಿರ್ವಹಿಸಿ ನಡೆಸುತ್ತುಂ ಸದ್ಧರ್ಮದಿಂ ರಾಜಪ್ರತಿ ಪಾಲನಂಗೆಯ್ಯುತ್ತಮಿರ್ದು ಶೃಂಗಪುರದ ಧರ್ಮಸಂಸ್ಥಾನದ ಸ್ಯಾಮಿ ಗಳ ಮಠಕ್ಕೆ ಬಹಳ ಋಣಭಾರವಾಗಿರ್ಪುದೆಂಬ ವರ್ತಮಾನವ 1 ಸಮಸ್ಯ ಮಂತ್ರಿ ನಿಯೋಗಿ ಸಾಮಜಿಕ ಗುರಿಕಾರ ಪ್ರಜೆ ಪರಿವಾರ ಮಹಾನಾಡು ಕೋಟೆ ಕಂದಾಚಾರ ಮಂದಿ ಮಕ್ಕಳು ಮುಂತಾದವರಿಂದುಡುಗೆರೆ ಗಳಂ ಮಾಡಿಸಿ ಕೈಮುಗಿಸಿ (ಕ.) © 2 ವಸುಧಾರೆ ಕಳಸಯ್ಯ, ಅ ಕೃಷ್ಣಪ್ಪಯ್ಯ, ಹಲಸಗಾರ ನಾಗಪ್ಪ, ಕೋ ೪ಾಲದ ಮರಿಯಪ್ಪಯ್ಯ, ಮುಂತಾದ ಬ್ರಾಹ್ಮಣ ಗುರಿಕಾರರ್ಗ, ರಾಯಸದ ವೆಂಕಟನಾರಣಪ್ಪಯ್ಯ, ಗಂಗಾಧರಯ್ಯ, ವಿಶ್ವೇಶ್ವರಯ್ಯ, ಸಬ್ಬುನೀಸ ಕೃಷ್ಟ ಸ್ಪಯ್ಯ, ಆ ವಿಶ್ವೇಶ್ವರಯ್ಯ, ಸಬ್ಬಾಯಿತ ಹೊಸಂಗಡಿ ವೆಂಕಪ್ಪಯ್ಯ, ಈ ಮುಂ ತಾದ ಬ್ರಾಹ್ಮಣನಿಯೋಗಿಗಳ, ಸಿದ್ದಪ್ಪ ನಾಯಕ ನಂಬಯ್ಯ, ದಳವಾಯಿ ಅಂಡಿಗೆ ನೀರಭದ್ರಯ್ಯ, ಮನೆವಾರ್ತೆ ವೀರಭದ್ರಯ್ಯ, ಅವಸರದ ಕೆಂಡಪ್ಪ ಮುಂತಾದ ಶಿವಭಕ್ಕಗುರಿಕಾರಣನರ್ಗ: ತತ್ತದ್ಯೋಗ್ಯತಾನುಸಾರವರಿಧುಚಿತಾಧಿ ಕಾರಂಗಳನಿತ್ತು ನಡೆಸಿಕೊಳುತ್ತು' (ಕ)