ಪುಟ:ಕೋಹಿನೂರು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿಸುಕು ಪರಿಚಾರಿಕೆಯು ಕೈ ಬೆರಳನ್ನು ಕೊಠಡಿಯಕಡೆಗೆ ತೋರಿಸಿದಳು. (F ಅವಳೇನು ಮ ತಾವೇ ಒಳಗೆ ಹೋಗಿ ವಿಚಾರಿಸೋಣಾಗಬಹುದು ! ರಾಜಕುಮಾರನು ಒಳಗೆ ಹೋಗಿ ನೋಡಿದನು. ಅಂಬಾಲಿಕೆಯು ನೆಲದಮೇಲೆ ಒಬ್ಬಳೇ ಕುಳಿತು ಒಂದು ಅಸಂಪೂರ್ಣವಾದ ಚಿತ್ರವನ್ನಿಟ್ಟು ಕೊಂಡು ಚಿತ್ರ ಬರೆಯುವ ಲೇಖನಿಕೆಯಿಂದ ಚಿತ್ರವನ್ನು ಸರಿಮಾಡುತಿದ್ದಳು. ರಾಜಕುಮಾರನು ಒಳಗೆ ಬಂದ ದು ಅವಳರಿಯಳು, ನಡಿಯುವಾಗ ಕಾಲಿಂದ ಹೆಚ್ಚು ಶಬ್ದವನ್ನು ಮಾಡಿದನು. ಆಗಲೂ ರಾಜಕುಮಾರಿಯು ಅನನ್ಯಮನಸ್ಕ ೪ಾಗಿ ಚಿತ್ರಪಟವನ್ನು ನೋಡುತ್ತ ತಿದ್ದು ತಿದ್ದಳು. ಕೇಸರಿಸಿಂಹನು ಹೆಚ್ಚು ತಾಳಲಾರದೆ ಪರಷಭಾವದಿಂದ, “ ರಾಜಕುಮಾರಿ ! ೨೨ ಎಂದು ಕೂಗಿದನು. ರಾಜಕುವರಿಯು ಚಮಕಿಯಾಗಿ ನೆಲದಮೇಲಿದ್ದ ಚಿತ್ರವನ್ನೆತ್ತಿ ಕೊಂಡು ಅವನ ಕಡೆ ತಿರುಗಿ ನೋಡಿದಳು. ಯ.ವರಾಜನು ( ರಾಜಸಂದನಿ ! ಹೀಗೆ ಏಕಾಗ್ರಚಿತ್ತದಿಂದ ಕುಳಿತು ಯಾರ ಚಿತ್ರವನ್ನು ಚಿತ್ರಿಸುತಿದ್ದೆ { ೨೨ ಎಂದು ಕೇಳಿದಳು. ರಾಜಕುಮಾರಿಯದ್ದು ನಿಂತು ನೆಲದಮೇಲೆ ದೃಷ್ಟಿಯಿಟ್ಟುಕೊಂಡು “ ತಾವು ಇಲ್ಲಿಗೆ ಏತಕ್ಕೆ ಬರೋಣಾಯಿತು ? ” ಎಂದಳು. ಯುವರಾಜ-( ಪುನಃ )-ಯಾರ ಚಿತ್ರವನ್ನು ಬರೆಯುತಿದ್ದೆ ? ನೀಚ ವಂಶದಲ್ಲಿ ಹುಟ್ಟಿದಾ ಸೈನಿಕ ವೇಷದ ಕೃಷಿಕ ಯವಕನ ಚಿತ್ರವಲ್ಲವೆ ? ಈ ತಡವೆ ರಾಜಕುಮಾರಿಗೆ ತಾಳ್ಮೆಯು ತಪ್ಪಿತು. ಲಜ್ಜೆಯು, ರೋಷ ದಲ್ಲಿ ಯ ಅಭಿಮಾಸದಲ್ಲಿ ಯಡಿ ಪರಿಣಮಿಸಿತು, ಪೂರ್ಣಾಯುತwಚನೆ ಯಾಗಿ ಯುವರಾಜ ಕೇಸರಿಸಿಂಹನನ್ನು ನೋಡಿ, “ ತಾವು ಊಹಿಸಿದ ದು ನಿಜ! ಇದು ಕೃಷಿಕನ ಚಿತ್ರವೇ ಅಹುದು ! ನಾನು ಬಹಳ ದಿವಸಗಳಿಂದ ಬಹಳ ಪ್ರಯತ್ನದಿಂದ ಬಹಳ ಶ್ರವ.ಪಟ್ಟು, ಶರಣ ಸೈನಿಕನಾ ವೀರ ಮೂರ್ತಿಯನ್ನು ಈ ಪಟದಲ್ಲಿ ಚಿತ್ರಿಸಲೆತ್ನಿಸಿದ್ದೇನೆ ೨೨ ಎಂದಳು. ಯುವರಾಜ-ಛೀ ! ರಾಜನಂದಿನಿ ! ಆ ಪಟವನ್ನು ಹರಿದ.ಹಾಕು. ರಾಜಕುಮಾರಿಯು, ಮುತ್ತಿನಹಾಗಿದ್ದ ಹಲ್ಲುಗಳಿಂದ ತುರಿಯನ್ನು ಕಡಿದು, ಕೈಯಲ್ಲಿದ್ದ ಚಿತ್ರಪಟವನ್ನು ಪಕ್ಷದಲ್ಲಿಟ್ಟು ಕೊಂಡು, ಗದ್ದದ ಸ್ವರ