ಪುಟ:ಚಂದ್ರಶೇಖರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ಳಿ ಚಂದ್ರಶೇಖರ. ಈವು ಸೇರುವುದು, ಚಂದ್ರಕಿರಣದಿಂದ ಪ್ರದೀಪ್ತವಾದ ಗಂಗಾಜಲದಲ್ಲಿ ವಾಯುಪೀಡನ ದಿಂದ ನೊರೆಸಹಿತವಾಗಿ ಉಂಟಾದ ತರಂಗವನ್ನು ಬೆಳದಿಂಗಳಿಂದ ಪ್ರತಿಫಲಿತವಾದರೆ ಆಗ ಉಜ್ವಲದಲ್ಲಿ ಮಾಧುರವು ಸೇರುವುದು, ಮತ್ತು ಸ್ಪಾರ್ಕಲಿಂಗ ಪಾಂರ್ಪೇ(Sparkling Champaign ಮಿರುಗುವ ಮದ್ಯವಿಶೇಪ ) ತರಂಗತರಂಗವಾಗಿ ಉಕ್ಕು ಸ್ಪಟಿಕಪಾತ್ರದಲ್ಲಿ ಪ್ರಕಾಶಿಸುತಲಿದ್ದರೆ ಆಗ ಉಚ್ಚಿಲದಲ್ಲಿ ಮಾಧುರವು ಸೇರುವುದು. ಜ್ಯೋತಾಮಯಿಯಾದ ರಾತ್ರಿಯಲ್ಲಿ ದಕ್ಷಿಣ ವಾಯುವು ಸೇರಿದರೆ ಆಗ ಉಪ್ಪಲದಲ್ಲಿ ಮಾಧುರವು ಸೇರುವುದು, ಮತ್ತು ಲಾಡು ಚಿರೋಟ ಊಟವಾದಮೇಲೆ ರಜತಮು ಧೈಯ ದಕ್ಷಿಣೆಯ ಸಮೇತವಾದ ತಾಂಬೂಲವನ್ನು ಕೊಟ್ಟರೆ ಆಗ ಉಚ್ಚಿಲದಲ್ಲಿ ಮಾಧು ರೈವು ಸೇರುವುದು, ಪ್ರಾತಃಸೂರ ಕಿರಣದಿಂದ ಹರ್ಷೋತ್ಸುಕ್ತವಾಗಿ ವಸಂತಕಿ ಲೆಯು ಕೂಗಿದರೆ ಆಗ ಉಜ್ಜಲದಲ್ಲಿ ಮಾಧುರವು ಸೇರುವುದು, ಮತ್ತು ಪ್ರದೀಪ ಮಾಲೆಗಳ ಬೆಳಕಿನಲ್ಲಿ ರತ್ನಾ ಭರಣಗಳಿಂದ ಭೂತೆಯಾದ ರಮಣಿಯು ಸಂಗೀತವನ್ನು ಹಾಡಿದರೆ ಆಗ ಉಲದಲ್ಲಿ ಮಾಧುರವು ಸೇರುವುದು, ಉಜ್ಯದಲ್ಲಿ ಮಾಧುರವು ಶೇರಿತು, ಆದರೆ ಶೇಟಗಳ ಅಂತಃಕರಣವು ಅದರೊಂ ದಿಗೆ ಸೇರಲಿಲ್ಲ. ಅವಗ ಅಂತಃಕರಣವು ಗುರಗಣಖಾನಿನ ಅಂತಃಕರಣದೊಂದಿಗೆ ಸೇರಿತ್ತು. ಬಂಗಾಳಾ ರಾಜ್ಯದಲ್ಲಿ ಸಮುರಾಗ್ನಿ ಯು ಹತ್ತಿ ಉರಿಯುತಲಿತ್ತು, ಕಲಕತ್ತೆಯಿಂದ ಅಪ್ಪಣೆಯು ಬರುವುದಕ್ಕೆ ಮೊದಲೇ ಸಾಟ್ಟಾದಲ್ಲಿದ್ದ ಎಲಿಸ ಸಾಹೆಬನು ಪುಟ್ಟಾ ದುರ್ಗ ವನ್ನು ಆಕ್ರಮಣ ಮಾಡಿದ್ದನು. ಮೊದಲು ಅವನು ದುರ್ಗವನ್ನು ವಶಮಾಡಿಕೊಂ ಡನು, ಆದರೆ ಮಾಂಗೀರನಿಂದ ಮುಸಲ್ಮಾನರ ಸೈನ್ಯವು ಎಂದು ಪುನಃ ಸಟ್ಟಾ ನಗ ರವು ಮಾರಕಾಸೀವನ ಕೈವಶವಾಯಿತು. ಪಟ್ಟಾದಲ್ಲಿದ್ದ ಎಲಿಸು ಮುಂತಾದ ಇಂಗ್ಲಿ ಪರು ಮುಸಲ್ಮಾನರ ಕೈಗೆ ಬಿದ್ದು ಮಾಂಗೀರನಲ್ಲಿ ಬಂದಿಯಾಗಿದ್ದರು. ಈಗ ಉಭಯ ಪಕ್ಷದವರೂ ಯುದ್ಧ ಸನ್ನಾ ಹವನ್ನು ಮಾಡುತಲಿದ್ದರು. ಶೇಟರ ಸಂಗಡ ಗುರಗಣಖಾ ನನೂ ವಿಶೇಷ ಮಾತನಾಡುತಲಿದ್ದನು, ನೃತ್ಯಗೀತಗಳೆಲ್ಲಾ ನೆಪಮಾತ್ರಕ್ಕೆ, ಜಗತೆ ಶೇಟರಾಗಲಿ ಗುರಗಣಖಾನನಾಗಲಿ ನೃತ್ಯಗೀತಗಳಿಗೆ ಗಮನ ಕೊಡುತ್ತಿರಲಿಲ್ಲ. ಇಂತಹ ಕಚೇರಿಯಲ್ಲಿ ದೊಡ್ಡ ಮನುಷ್ಯರು ಸಾಧಾರಣವಾಗಿ ಮಾಡುವಹಾಗೆ ಅವರೂ ಮಾಡುತ ಲಿದ್ದರು. ಕೇಳುವುದಕ್ಕಾಗಲೀ ನೋಡುವುದಕ್ಕಾಗಲೀ ಸಂಗೀತದ ಕಚ್ಚೇರಿಯನ್ನು ಯಾರುತಾನೇ ಮಾಡಿಸುತ್ತಾರೆ ? ಗುರಗಣಖಾನನ ಇಪ್ಪವು ಸಿದ್ದಿಯಾಯಿತು, ಅವನು ಮನಸ್ಸಿನಲ್ಲಿ, ಉಭಯ ಪಕ್ಷದವರೂ ಕದನವಾಡಿ ಬಲಕುಗ್ಗಿದವರಾದರೆ, ತಾನು ಉಭದು ಪಕ್ಷದವರನ್ನೂ ಪರಾ ಜಯ ಮಾಡಿ ಬಂಗಾಳಾ ರಾಜ್ಯವನ್ನು ಸ್ವಂತಕ್ಕೆ ಇಟ್ಟುಕೊಳ್ಳಬೇಕೆಂದು ಯೋಚಿಸಿ ದನು. ಆ ಅಭಿಲಾಪ್ರಸಿದ್ಧಿಗೆ ಮೊದಲು ಬೇಕಾದ ಸೈನ್ಯದ ಜನರು ಅವನ ವಶವಾಗಿಯೇ ಇದ್ದರು. ಆದರೂ ಹಣವಿಲ್ಲದಿದ್ದರೆ ಸೈನ್ಯದವರು ವಶವಾಗಿರುವುದಿಲ್ಲ. ಕುಬೇರರಾದ