ಪುಟ:ಚಂದ್ರಶೇಖರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಚಂದ್ರಶೇಖರ. ಅವನನ್ನು ನೋಡಿ ಮೆಲ್ಲಮೆಲ್ಲಗೆ ತನ್ನೊಳುತಾವೇ ನಕ್ಕರು, ಕೆಲವರು ದೂರವಾಗಿ ನಿಂತುನಿಂತು ಅವನ ಹಿಂದೆ ಹಿಂದೆ ಹೋದರು, ಪ್ರಾಚೀನರಾದವರು ಅವನನ್ನು ಕಂಡು ಮುಖವನ್ನು ಮರೆಮಾಡಿಕೊಂಡು ನಿಂತರು. ಚಂದ್ರಶೇಖರನು ವಿಸ್ಮಿತನಾದನು ; ಭೀತ ನಾದನು ; ಅನ್ಯವನನಾದನು. ಯಾವಕಡೆ ನೋಡದೆ ನೆಟ್ಟಗೆ ತನ್ನ ಮನೆಯ ಬಾಗಿಲಿಗೆ ಬಂದು ನಿಂತನು. - ಬಾಗಿಲು ಹಾಕಿತ್ತು ಹೊರಗೆ ಬಾಗಿಲನ್ನು ತಟ್ಟುತ್ತಲೆ ನೃತ್ಯನೊಬ್ಬನು ಎಂದು ತಲೆಬಾಗಿಲನ್ನು ತೆರೆದನು. ಚಂದ್ರಶೇಖರನನ್ನು ಕಂಡು ನೃತನು ಅಳುವುದಕ್ಕೆ ತೊಡ ಗಿದನು ! ಚಂದಶೇಖರನು, ಏನಾಯಿತು ? ಎಂದು ಕೇಳಿದನು. ನೃತನು ಏನೊಂದು ತರವನ್ನೂ ಹೇಳದೆ ಅಳುತ್ತ ಅಳುತ್ತ ಹೊರಟುಹೋದನು. - ಚಂದ್ರಶೇಖರನು ಮನಸ್ಸಿನಲ್ಲಿ ತನ್ನ ಇಹ್ಮದೇವತೆಯನ್ನು ಸ್ಮರಿಸಿಕೊಂಡನು. ಅಂಗಳ ವು ಗುಡಿಸಿರಲಿಲ್ಲ. ಕಸವು ಹಾಗೆಯೇ ಬಿದ್ದಿತ್ತು. ಚಂಡಿಯ ಮಂಟಪದಲ್ಲಿ ಧೂಳು ಮುಚ್ಚಿಕೊಂಡಿತು, ಅಲ್ಲಲ್ಲಿ ಮಸಾಲುಗಳ ಕರಕು ಬಿದ್ದಿತು. ಕೆಲವು ಬಾಗಿಲು ಗಳು ಒಡೆದಿದ್ದವು. ಚಂದಶೇಖರನು ಮನೆಯೊಳಗೆ ಹೋಗಿ ನೋಡಲಾಗಿ ಬಾಗಿಲುಗ? ಗೆಲ್ಲಾ ಹೊರಗೆ ಟಿಲಕಗಳು ಹಾಕಿದ್ದವು, ಪರಿಚಾರಿಕೆಯು ಅವನನ್ನು ಕಂಡು ಮರ ದಾಗಿ ಹೋಗಿ ನಿಂತವಳು ಹಾಗೆಯೇ ಹೊರಗೆ ಹೋಗಿ ಗಟ್ಟಿಯಾಗಿ ಅಳುವುದಕ್ಕೆ ತೊಡ ಗಿದಳು, ಅನಂತರ ಚಂದ್ರಶೇಖರನು ಅಂಗಳಕ್ಕೆ ಬಂದು ನಿಂತು ಅತ್ಯಂತ ವಿಕೃತವಾದ ಉಚ್ಚವಾದ ಕರದಿ೦ದ “ ಕೈವಲಿನೀ ! 1ಎಂದು ಕೂಗಿದನು. ದಾರೂ ಉತ್ತರವನ್ನು ಕೊಡಲಿಲ್ಲ. ಅವನ ವಿಕೃತವಾದ ಕಂಠಸ್ವರವನ್ನು ಕೇ? ಅಳುತ್ತಿದ್ದ ಪರಿಚಾರಿಕೆಯು ನಿಸ್ಸಯಾಗಿ ನಿಂತಳು. ಚಂದ್ರಶೇಖರನು ಪುನಃ ಕೂಗಿದನು. ಮನೆಯಲ್ಲಿ ಆ ಧ್ವನಿಯು ಪ್ರತಿಧ್ವನಿತವಾಗ ಲಾರಂಭಿಸಿತು. ದಾರೂ ಉತ್ತರವನ್ನು ಕೊಡಲಿಲ್ಲ. ಆ ಸಮಯದಲ್ಲಿ ರೈವಲಿನಿಯು ಪ್ರಯಾಣಮಾಡುತಲಿದ್ದ ಚಿತ್ರತರವಾದ ತರಣಿಯ ಮೇಲೆ ಗಂಗಾಂಬುಸಂಚಾರಿಯಾದ ಮೃದುವಾದ ಸವನಹಿಲ್ಲೋಲದಲ್ಲಿ ಇಂಗ್ಲೀಷರ ಕೆಂಪು ಧ್ವಜಪಟವು ಹಾರುತಲಿತ್ತು, ಹಡಗನ್ನು ನಡೆಸುತಲಿದ್ದ ಅಂಬಿಗರು ಹಾಡುತಲಿದ್ದರು. ಚಂದ್ರಶೇಖರನು ಸಮಾಚಾರವನ್ನೆಲ್ಲಾ ಕೇಳಿ ತಿಳಿದುಕೊಂಡನು. ಅನಂತರ ಚಂದ್ರಶೇಖರನು ಗೃಹದಲ್ಲಿ ಸರತ್ನ ಪರಸ್ಪರವಾಗಿ ಪ್ರತಿಪಿತವಾಗಿದ್ದ ಸಾಲಗ್ರಾಮ ಶಿಲೆಗಳನ್ನೆಲ್ಲಾ ತೆಗೆದುಕೊಂಡುಹೋಗಿ ಸುಂದರಿಯ ತಂದೆಯ ಮನೆಯಲ್ಲಿ ಇಟ್ಟಬಂದನು, ಸತ್ವಪದಾರ್ಥ, ಖಟ್ಟಿ ಮುಂತಾದ ಸಂಸಾರದ ಸಾಮಾನುಗಳನ್ನೆ ಲ್ಲಾ ದರಿದ್ರವಾದವರಿಗೆ ಒಂದೊಂದಾಗಿ ಕೊಟ್ಟನು. ಸಾಯಂಕಾಲದವರೆಗೂ ಈ ಕೆಲಸ ಗಳನ್ನೆಲ್ಲಾ ಮಾಡಿದನು. ಸಾಯಂಕಾಲದಲ್ಲಿ ಚಂದ್ರಶೇಖರನು ಬಹುಕದಿಂದ ಶೇಖರ