ಪುಟ:ಚೆನ್ನ ಬಸವೇಶವಿಜಯಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no ನಿಧಿ ಚೆನ್ನಬಸವೇಶವಿಜಯಂ, [ಅಧ್ಯಾಯ ರುವರು. ನೀನೂ ಅಲ್ಲಿಗೆ ಹೋಗಿ ಮಾನವಾಕಾರದಿಂದ ಜನಿಸಿ, ಅವರೆಲ್ಲ ರಿಗೂ ಪದ್ಮಲತತ್ವವನ್ನು ಪದೇಶಿಸಿ, ಮುಕ್ತರನ್ನು ಮಾಡಬೇಕೆಂದು ಬೆಸಸಿದನು ಆಗಳಾಕುವರನು ಕೈ ಜೋಡಿಸಿ ನಿಂತು, ದೇವನೇ! ನಾನು ಮಾನವರಲ್ಲಿ ಜನಿಸಿ, ನಂದ್ಯಾದಿಗಣಸಂಕುಲಕ್ಕೆ ಪಟ್ಟಿಲ ರಹಸ್ಯವನ್ನು ಬೋಧಿಸಬೇಕಾದ ಕಾರಣವೇನು? ಎಂದು ಕೇಳಿಕೊಳ್ಳಲು, ಶಿವನು ನಕ್ಕು, ಅಯ್ಯಾ! ನಮ್ಮ ಚಿತ್ಕಳೆಯೆ ಈ ರೂಪವಾಗಿರುವ ನೀನು ಆರು ಮುಖಂಗಳಲ್ಲಿ ಆರು ಪ್ರಣವಗಳ ಸ್ವರೂಪನಾಗಿ ಷಣ್ಮುಖಿಯೂ, ಪ ಟೂಲಬಹಿಯೂ ಎನಿಸಿಕೊಂಡಿರುವೆ. ಇಂಥ ನಿನಗೆ ತಿಳಿಯದಿರುವ ವಿಷಯವಾವುದಿರುವುದು? ಆದರೆ ನನ್ನ ಮುಖವಚನದಿಂದ ತಿಳಿಯಬೇಕೆಂ ಬುದು ನಿನ್ನ ಸೇಕ್ಷೆಯಾಗಿದ್ದರೆ ಹೇಳುತ್ತೇನೆ ಕೇಳು.ಹಿಂದೆ ಒಂದು ದಿವಸ ನಾನು ಇದೇ ರೀತಿಯಲ್ಲಿ ಒಡೋಲಗದಲ್ಲಿರುವಾಗ್ಗೆ ನಾರದನುಹರ್ಷಿ ಯು ಬಂದ ಸಾಷ್ಟಾಂಗವಾಗಿ ನಮಸ್ಕರಿಸಿ ನಿಂತಿರುವಲ್ಲಿ ಸಭೆಯಲ್ಲಿದ್ದ ನಂದಿತನು-ಎಲೈ ಮನಿಪನೆ: ! ನೀನು ಬಂದ ಕಾರ್ ವಾವುದು? ಸ. ವಿಗೆ ಬಿತ್ತೈಸು, ಎಂದು ಬೆಸಸಲು, ಆ ಖುಷಿಯು ಭೂಲೋಕದ ಭರತಖಂಡದಲ್ಲಿ ಕಲಿ ಪ್ರಬಲವಾಗಿ ಸತ್ಯ ಸದಾಚಾರ ಶಿವಭಕ್ತಿ ಸಿದ್ಧ ಕಾಗಗಳಲ್ಲಿ ಅಡಗಿ, ದಿತಿ, ಕಾಪಟ್ಟ, ಅನೃತ, ವಂಚನೆ, ಅನಾಚಾರ ಮೊದಲಾದುವುಗಳು ಪ್ರಬಲವಾಗಿರುವುವು, ಜೈನ ಬೌದ್ಧ ಚಾರಾಕಾದಿ ಮತಗಳು ಹೆಜ್ಜೆ ಶಿವನನ ಜರೆಯುತ್ತಿರುವುವು, ಅಷ್ಟಾವರಣಗಳನ್ನೂ ಶಿವಭಕ್ತರನ್ನೂ ದೂಷಿಸುತ್ತಿರುವ ಪ್ರಭುಗಳು ಹೆಚ್ಚಾದರು. ಶಿವಾಲಯ ಗಳೂ ಇಂಗವರ ಮಠಗಳ ಹಾಳಾದವು. ಅವಕ್ಕೆ ಕೊಟ್ಟಿದ್ದ ಮಾಧ್ಯ ಗಳೆಲ್ಲವೂ ಅಪಹೃತವಾಗಿರುವುವು, ಎಲ್ಲೆಲ್ಲೂ ಜೈನರ ಒಸ್ತಿಗಳೇ ತುಂಬಿ ಕೊಂಡಿರುವುವು, ದುಷ್ಯರ ಹಾವಳಿಯನ್ನು ತಡೆಯಲಾರದೆ ಕೊಟಗೊ ಬೆಬ್ಬ ಶಿವಶರಣರು ಅಲ್ಲಲ್ಲಿ ಸೀಗೆಯೊಳಗಣ ಬಾಳೆಯಂತೆಯೂ, ಬಿದಿ ರಿನೊಳಗಣ ಗಂಧದ ಮರಗಳಂತೆಯ, ಅಡಗಿಕೊಂಡು, ಕಷ್ಟದಿಂದ ವಾಸ ಮಾಡುತ್ತಿರುವರು, ಬೆಸಗೆಯಿಂದ ಒಣಗುತ್ತಿರುವ ಬಳ್ಳಿಗಳು ಮಳೆಯ ನ್ನು ಇದಿರು ನೋಡುತ್ತಿರುವಂತೆ, ಶಿವ ಶರಣರುಗಳು, ಪರಮತಗಳೆಲ್ಲವೂ ಅಡಗಿ ಶಿವಮತವು ಎಂದಿಗೆ ಪ್ರಬಲಿಸುವುದೋ ಎಂದು ಹೇಳಿಕೊಂಡು ಬ ೭