ಪುಟ:ಚೆನ್ನ ಬಸವೇಶವಿಜಯಂ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

**] : - ೧ ಬಲ ನಮುಕಿ ದೈತ್ಯಾದಿಯುದ್ಧವು ಟ್ಯನುಕೋಟೆಯಾಗಿ ದೇವತೆಗಳಮೇಲೆ ಬಿದ್ದು ನೋಯಿಸಿದುವು. ಎತ್ತ ಲೂ ಹಳ್ಳ, ಎತ್ತಲೂ ಮುಳ್ಳ, ಎತ್ತಲೂ ಹೊಳೆ, ಎತ್ತಲೂ ಬೆಂಕಿ, ಎ ತಲೂ ಗಾ೪, ಎತ್ತಲೂ ಭೂತಪ್ರೇತಪಿಶಾಚಗಳು ಕಾಣುತ್ತಿದ್ದುವು. ಈ ವಿಕಾರಗಳನ್ನೆಲ್ಲ ಬ್ರಹ್ಮನು ಕಂಡು ದೈತ್ಯನ ಸಾಮರ್ಥಕ್ಕೆ ತಲೆದೂಗಿದ ನು, ಮತ್ತೂ ಇದಕ್ಕೆ ತಕ್ಕ ಪ್ರತೀಕಾರವನ್ನು ಮಾಡಬೇಕೆಂದು ಯೋ ಚಿಸಿ, ಅದೃಶ್ಯರೂಪಿನಿಂದ ರಕ್ಕಸನ ಸುತ್ತಲೂ ತಿರುತಿರುಗುತ್ತ ಅನಂತಗ ಳಾದ ಬಾಣಗಳನ್ನು ಬಿಟ್ಟು ಅವನ ದೇಹದ ಎಲ್ಲಾ ಕಡೆಯಲ್ಲಿ ನಡುತ್ತಿ ದ್ದನು. ಆಗ ಶತಮಾಯನು ತಾನೂ ಅದೃಶ್ಯರೂಪವನ್ನು ಧರಿಸಿ, ಪಳ ಯಕಾಲದ ಮೇಘವು ಮಳೆಗರೆವಂತೆ ದೇವತೆಗಳಮೇಲೆಲ್ಲ ಸಾಂದ್ರವಾದ ಬಾಣವೃಷ್ಟಿಯನ್ನು ಸುರಿಸಿ, ಮೂರ್ಛಗೊಳಿಸುತ್ತ ಬಂದನು. ಎಲ್ಲಿ ಹುಡುಕಿದರೂ ಬ್ರಹ್ಮನಕಣ್ಣಿಗೆ ಕಾಣದಂತೆ ಶತಮಾಯನು ಲಯಗೊ೪ ಸುತ್ತಿದ್ದನು, ಅವನ ಬಿಲ್ಲಿನ ಕಬ್ದ ಬಾಣಗಳ ಸುರಿವು ಮಾತ್ರ ಗೋಚರಿಸು ತಿದ್ದಿತು. ಬ್ರಹ್ಮನು ರಕ್ಕಸನ ಬಾಣಗಳನ್ನು ತರಿತರಿದು ಬೇಸತ್ತು, ಅ ವನನ್ನು ಕಡಿದಿಕ್ಕಬೇಕೆಂದು ಪ್ರಯತ್ನಿಸಿದರೂ ಕಣ್ಣಿಗೆ ಕಾಣಿಸದೆ ಯಿ ದ್ದು ದರಿಂದ ಉಪಾಯಗೆಟ್ಟು, ಶಿವಧ್ಯಾನಮಾಡಿ, ಅರಿವಿನಿಂದ ಎಚ್ಚತ್ತು, ಬತ್ತಳಿಕೆಯಲ್ಲಿದ್ದ ರುದ್ರಾಸ್ತ್ರವನ್ನು ತೆಗೆದುಕೊಂಡನು. ಅದರ ತೇಜಸ್ಸು ದೊರಕ್ಕೆ ಚೆಲ್ಲಿದ ಮಾತ್ರದಿಂದಲೇ ಮಾಯೆಯ ಕತ್ತಲೆಯು ಹರಿದುಹೋ ಯಿತು. ಬಿಲ್ಲಿನಲ್ಲಿ ಹೂಡಿದ ಮಾತ್ರದಿಂದ ಎಲ್ಲಾ ಕಡೆಯೂ ಲೋಕವು ಉರಿಯುವಂತಾಯಿತು. ಬಾಣವನ್ನು ಕಿವಿವರೆಗೆ ಸೆಳೆದ ಮಾತ್ರದಿಂದ ರ ಕಸರೆಲ್ಲರೂ ಮೂರ್ಛಗೊಂಡರು, ಬಿಟ್ಟ ಉತ್ತರಕಣದಲ್ಲಿ ಶತಮಾಯ ನ ತಲೆಯನ್ನು ಕತ್ತರಿಸಿ ರುಂಡಮುಂಡಗಳೆರಡನ್ನೂ ಹೊತ್ತುಕೊಂಡು ಹೋಗಿ ಸಸ್ತಸಮುದ್ರಗಳಿಂದಾಚೆ ಮರುಭೂಮಿಯಲ್ಲಿಟ್ಟಿತು. ದೇವತೆಗ ಳು ದುಂದುಭಿಯನ್ನು ಬಾರಿಸಿ ಹೂಮಳೆಗರೆದರು. ಬ್ರಹ್ಮನು ಕ್ಷಣಕಾ ಲವೂ ನಿಂತಲ್ಲಿ ನಿಲ್ಲದೆ ದೈತ್ಯಸೇನೆಯಲ್ಲೆಲ್ಲ ರಥವನ್ನು ಹರಿದಾಡಿಸಿ, ಬಾಣ ಹತಿಯಿಂದ ಲಯಗೊಳಿಸುತಲಿದ್ದನು. ಅವನಿಗಿದಿರಾಗುವವರು ದೈತ್ಯರಲ್ಲಿ ಒಬ್ಬರೂ ಇಲ್ಲದೆ ಉಳಿದವರೆಲ್ಲರೂ ಅಂಧಕನ ಬಳಿಗೆ ಓಡುತ್ತಿದ್ದರು. ಅ ವರನ್ನು ಕುಂಭಾಸುರನು ಕಂಡು, ಅವರಿಂದ ಶತವಾಯನ ಮರಣವಾರೆ