ಪುಟ:ಚೆನ್ನ ಬಸವೇಶವಿಜಯಂ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸಲೀಕಟಹo (wಂಡಳಿ) [ಅಧ್ಯಾಯ ಯನ್ನು ಕೇಳಿ, ಅತ್ಯಂತರೋಷನೇರಿ, ತನ್ನ ಸೇನೆಯನ್ನು ಬ್ರಹ್ಮನನ ೮ ಸಾಗ.ವುದಕ್ಕೆ ಅಪ್ಪಣೆನಾಡಿ, ರಥದಲ್ಲಿ ಬಿಲ್ಲು ಬಾಣಗಳನ್ನು ತುಂಬಿ ಕೊಂಡು, ಏರಿ, ತಾವೇ ನಡೆದನು.– ಎದೆಗೆಟ್ಟಿದ್ದವರು ಮುಂದೆ ನಿಲ್ಲಲಿ ಅಂಜಪುರುಕು ಹಿಂದೆಗೆಯಲಿ; ಕಡುಗಲಿಗಳು ಕಾದಾಡಲಿ?” ಎಂದು ಹೇ ಳುತ್ತ, ಬ್ರಹ್ಮನಮೇಲೆ ಬಿದ್ದನು. ಅವನ ಘೋರಮೂರ್ತಿಯನ್ನು ಕಂ ಡಮಾತ್ರದಿಂದಲೆ ದೇವತೆಗಳು ಎದೆಗೆಟ್ಟು ಹಿಂಗಾಲಾದರು. ಮೊದಲು ಶುಂಭನು ಬಿಟ್ಟ ಬಾಣದಿಂದಲೇ ಬ್ರಹ್ಮನು ಮೂರ್ಛಗೊಂಡು ಧೃತಿಗೆ ಟ್ಟು ಹಿಂದೆಗೆದೋಡಿದನು. ದಿಕ್ಕಾಲಕರು ಬೆದರಿದರು. ಉಳಿದ ದೇವತೆ ಗಳೆಲ್ಲಾ ಖೋ ! ಎಂದು ಕೂಗಿ, ಬ್ರಹ್ಮನ ಬೆನ್ನಂಟಿ ಓಡಿದರು. ಹರಿಯು ಒಂದ್ರಾದಿಗಳವಸ್ಥೆಯನ್ನು ನೋಡಿ, ಸೇನೆಯೊಡನೆ ತಾನೇ ಕುಂಭಾ ಸುರನಿಗಿದಿರಾದನು, ಆತನಾದರೂ ವಿಷ್ಣುವನ್ನು ಕುರಿತು_ ಎಲೋ ಹ ರಿಯೆ ! ಇದುವರೆಗೆ ನಮ್ಮ ಸೇನೆಯಲ್ಲಿ ಆಗಿರುವ ನಷ್ಟ್ಯವನ್ನೆಲ್ಲ ನಿನ್ನೆ ಬ್ಬನನ್ನು ಕೊಲ್ಲುವುದರಿಂದ ತುಂಬಿಸಿಕೊಳ್ಳಗೆ ಬಿಡುವೆನೆ ? ” ಎಂದು ಈ ೪ ಗರ್ಜಿಸಿ, ಬಾಣಗಳನ್ನು ಪ್ರಯೋಗಿಸಿದನು. ಹರಿಯು ಅವನ್ನೆಲ್ಲ ಕ ತರಿಸಿ, “ ಎಲೋ ಅಧಮನೆ ! ನಾನಾರು ಬಲ್ಲೆಯಾ ? ಗರುಡನಮೇಲೆ ಹಾವು ಸೆಸುವಂತೆ ದಾನವಾರಿಯಾದ ನನ್ನ ಮೇಲೆ ದಾನವನಾದ ನೀನು ಯುದ್ಧಕ್ಕೆ ನಿಲ್ಲಬಹುದೆ ? ಪುಡಿದೇವತೆಗಳ ಮುಂದೆ ನಿನ್ನ ಜಂಭವನ್ನು ಕೊಚ್ಚಿಕೊಳ್ಳದೆ ನನ್ನ ಮುಂದೆ ಬಿಚ್ಚಿದರೆ ಸಾಗುವುದೆ ? ?” ಎಂದು ಮೂದ ಲಿಸಿ, ಪ್ರತಿಬಾಣಗಳನ್ನು ದೈತನಮೇಲೆ ಬಿಟ್ಟು, ಅವನ ರಥ ಸಾರಥಿಗಳ ನ ಕೆಡಹಿದನು, ಅದರಿಂದ ರಕ್ಕಸನು ಏಟು ತಿಂದ ಹಂದಿಯಂತೆ ಕೆ ರಳ, ಧನುರ್ಬಾಣಗಳನ್ನು ಒಂದುಕೈಯಲ್ಲಿ ಹಿಡಿದುಕೊಂಡು, ಭೂಮಿ ಗೆ ದಮಿಕಿ, ಹರಿಯು ಕುಳಿತಿದ್ದ ರಥವನ್ನೆ ಎತ್ತಿ, ಚಂಡನ್ನು ತಿರುಗಿಸು ವಂತೆ ತಿರುಗಿಸಿ, ಆಕಾಶಕ್ಕೆ ಎಸೆದನು, ಅದು ಬುಗುರಿಯಂತೆ ತಿರುಗುತ್ತ ಮೇಲಿಂದ ಕೆಳಗೆ ಬೀಳುವುದಕ್ಕೆ ಮುಂಚೆ, ಹರಿಯ ರಥದಿಂದೀಚೆಗೆ ಹಾ 8 ಶುಂಭನ ಮೇಲೆ ಬಿದ್ದು, ಅದರಿಂದ ಇಬ್ಬರೂ ನೊಂದು ಮೂರ್ಲೆ ಗೊಂಡರು. ಕ್ಷಣಕಾಲದಲ್ಲಿ ಎಚ್ಚತ್ತು ಇಬ್ಬರೂ ಮತ್ತೆ ರಥಾರೂಢರಾ ಗಿ ಕಾಳಗಕ್ಕೆ ನಿಂತರು. ಬಾಣಕ್ಕೆ ಬಾಣ, ಏಟಿಗೆ ಏಟು, ಗಾಯಕ್ಕೆ ಒಟ