ಪುಟ:ಚೆನ್ನ ಬಸವೇಶವಿಜಯಂ.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈವಶರಣರ ಕಥೆಗಳು ೩೫ ಜಂಗವಾರಾಧನೆಯಿಲ್ಲದೆ ಭುಂಜಿಸದ ವ್ರತದಿಂದಿರುತ್ತ, ೪೦ ದಿನಗಳವರೆ ಗೂ ಜಂಗಮರು ನಿಕ್ಕದಿರಲು ಉಪವಾಸವಾಗಿಯೇ ಇದ್ದ ರು. ಇರಿವತ್ತಾಂ ಡಾರಿಯೆಂಬ ಹುಟ್ಟು ಕುರುಡಭಕ್ತನು ಶಿವನ ಮಜ್ಜನದ ನೀರಿಗಾಗಿ ಬಾವಿ ಯನ್ನಗೆಯುತ್ತಲಿದ್ದು, ಅದಕ್ಕೆ ವಿಘ್ನವನ್ನಾಚರಿಸಿದಕ್ಕೆನರನ್ನೆಲ್ಲ ಶಿವಾನುಗ್ರ ಹದಿಂದ ಕುರುಡರನ್ನು ಮಾಡಿದನು. ಅತಿಭಕ್ತನು ಬಲೆಯ ಕಾಯಕವನ್ನು ಮಾಡುತ್ತ, ಮೊದಲು ಸಿಕ್ಕಿದ ವಿಾನನ್ನು ಶಿವಾರ್ವಿತವಾಡಿ, ಬ೪ಕ ನಿ ಕ್ಕಿದುದನ್ನು ಹಿಡಿದು ಮಾರಿ, ಬಂದ ಹಣದಿಂದ ಜಂಗಮಸೇವೆಯನ್ನು ಮಾ ಡುತ್ತಿದ್ದನು. ಇವರೆಲ್ಲರೂ ಮೆಲೆಕಂಡ ಆಯಾಕ್ರಿಯೆಗಳಿಂದ ಶಿವನ ನ್ನು ಮೆಚ್ಚಿಸಿ ಕೈಲಾಸವನ್ನು ಪಡೆದವರು. ಮತ್ತೂ ಮಳಯರಾಜ ನು ತನ್ನ ಸಕಲರಾಜ್ಯದೊಡನೆಯ, ಮಲ್ಲಣನು ಘನಭಕ್ತಿಯಿಂದ ತನ್ನ ಕಾಂತೆಯಾದ ಮಲ್ಲಣಿಯೊಡನೆಯೂ, ಓಹಿಲಯನು ಧೂಪವನ ರ್ವಿಸುವ ಭಕ್ತಿಯಿಂದ ಸ್ಕೂಲದೇಹಸಮೇತನಾಗಿಯೂ, ಕೈಲಾಸವನ್ನು ಪಡೆದರು, ನಲುವದಿಗೆ ಯೆಂಬ ಊರಿನಲ್ಲಿ ಕುಷ್ಠರೋಗಿಣಿಯಾಗಿದ್ದ ಮಾದರಗುಡ್ಡವೊಯು ತನ್ನನ್ನು ಪರವಾದಿಗಳು ಓಡಿಸಲು, ತಾನು ಸ ರಾಷ್ಟ್ರ ಸೋಮನಾಥನ ಅನುಗ್ರಹದಿಂದ ನಿರೋಗಿಣಿಯಾದಳು. ಕಾ ೪ಂಗರಾಜನು ಗೋಡೆಯ ಮೇಲೆ ಬರೆದಿದ್ದ ಹುಲಿಯನ್ನು ನೋಡಿ, ಹೆದ ರಿ ಪ್ರಾಣವನ್ನು ಬಿಡಲು, ಚೆನ್ನ ವೈಯು ಸತ್ತ ಆತನ ಹೆಣವನ್ನೇ ಮದುವೆ ಯಾಗಿ, ಬಸವನ ನೋಂಮಿಯನ್ನು ಮಾಡಿ, ಶಿವಾನುಗ್ರಹದಿಂದ ಗಂಡನ ಪ್ರಾಣವನ್ನು ಪಡೆದು ಮುತ್ತೈದೆಯಾಗಿದ್ದು, ಕಡೆಗೆ ಪತಿಯೊಡನೆ ಶಿವ ಲೋಕವನ್ನೆದಿದಳು. ಉದ್ಧಟಾನು ಮೃತನಾಗಲು, ಆತನನ್ನು ಸುಟ್ಟ ಹೊಗೆಯ ಸೋಂಕಿನಿಂದ ಅನೇಕ ವಿಶಾಚಗಳು ತಮ್ಮ ನೀಚಜನ್ನವನ್ನು ಕ ಳೆದುಕೊಂಡುವು - ಹೊಗೆ ದೊರೆಯದೆ ಉಳಿದಿದ್ದ ಒಂದು ವಿಶಾಚವು ಉ ಧೃವಾನ ತಿಪ್ಪನಾದ ಭೋಜನನ್ನು ಬೇಡಿ, ಗುರುವಿನ ಮೂಳೆಯನ್ನು ಹೊತ್ತಿಸಿ ಹೊಗೆಯನ್ನುಂಟುಮಾಡಿಸಿ, ಅದರ ಸೋಂಕಿನಿಂದ ತಮಗೆ ವಾ ಸವಾಗಿದ್ದ ಆಲದಮರದ ಸಮೇತವಾಗಿ ರಾಜ ಮಂತ್ರಿ, ಪ್ರಮುಖರೆಲ್ಲರನ್ನೂ ಕೂಡಿ ಕೈಲಾಸವನ್ನು ಸೇರಿತು, ಹೀಗೆಯೆ ಗಣನಿಂಗಯ್ಯ, ಸಾತ್ವಿಕಸಂ ಗಯ್ಯ, ದೇವರಸ, ಪಡಿಹಾರಿಬಸವಯ್ಯ, ಕಾಮಲದೇವಿ, ದೇವಯ್ಯ