ಪುಟ:ಚೆನ್ನ ಬಸವೇಶವಿಜಯಂ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] _m ನೂರೊಂದು ವಿರತರವತರಣವು ೪೩ಗೆ ಕಜ್ಜಿ ಮೇಲಕ್ಕೆ ಹಾರುವಾಗ, ಊಾನು ಕಳೆದು ನೀರಿಗೆ ಬೀಳಲು, ಹಕ್ಕಿ ಯು ಒಡನೆಯೇ ದುಮಿಕಿ ಅದೇ ವಿಾನನ್ನು ಹಿಡಿದುಕೊಳ್ಳಲು, ಹಕ್ಕಿ ಯ ಚಟುವಟಿಕೆಗೆ ಒಡೆಯರು ಮೆಚ್ಚಿ,ತಮ್ಮ ಕೈಯಲ್ಲಿದ್ದ ರನ್ನದ ಒಂದು ಕಟಕವನ್ನು ತೆಗೆದು ಆ ಹಕ್ಕಿಗಾಗಿ ವಿಸವರು. ಅದು ನೀರಿನಲ್ಲಿ ಮುಳು ಗುವುದು, ದೊರೆಯು ಕಂಡು ಇದೇಕೆ ಕಟಕವನ್ನು ಬಿಸುಡಿದೆ ? ಎಂದು ಕೇಳಲು, ಹಕ್ಕಿಗಾಗಿ ಮಬ್ಬೆ ಕೊಟ್ಟೆನೆಂಬರು, ಎಲ್ಲಿ ಬಿಸುಡಿದೆ? ಯೆ «ಲು, ಮತ್ತೊಂದುಕಟಕವನ್ನೂ ಕಳೆದು ಮೊದಲು ಬಿಸುಡಿದ್ದ ಸ್ಥಲಕ್ಕೆ ಅದನ್ನೂ ಇಟ್ಟು ಅದೋ ಅಲ್ಲಿ ಎಂದು ತೋರಿಸುವರು, ದೊರೆಯು ಬೆಲೆಯು ೪ ರತ್ನದ ಕಟಕಗಳು ಹಾಳಾದುವೆಂದು ವ್ಯಸನಪಡುತ್ತಿರಲು, ಒಡೆಯರು.. ರಾಜನೆ! ಅದೇಕೆ ಚಿಂತಿಸುತ್ತೀಯೆ ? ನಿನ್ನ ಕಟಕಗಳು ಬೊಕ್ಕಸದಲ್ಲೇ ಇನೆ, ನೋಡಿಸು, ಎನ್ನಲು, ಗೊರೆಯು ಹುಡುಕಿಸುವಾಗ ಪೆಟ್ಟಿಗೆಯಲ್ಲೇ ಆ ಕಟಕಗಳಿರುವುವು. ದೊರೆಯು ಬೆರಗಾಗುವನು. ಅಗಸರ ಹೊನ್ನ “ನು ಎರಡು ಚಂದಗಾವಿಯ ಹಚ್ಚಡವನ್ನು ಮುಡಿವಾಡಿ, ವೀರಣೆ ಡೆಯರಿಗೊಂದನ್ನೂ ಅವರ ಹೆಂಡತಿಗೊಂದನ್ನೂ ಕೊಡುವನು. ಆಕೆಯ ಹಚ್ಚಡವನ್ನುಟ್ಟು ತಂದೆಯಾದ ದೊರೆಯ ಬಳಿಗೆ ಹೋಗಲು, ತನ್ನ ಈ ಹಚ್ಚಡವನ್ನು ಅಗಸನು ಆಕೆಗೆ ಹೇಗೆ ಕೊಟ್ಟನೆಂದು ಕರೆಯಿಸಿ ಕೇಳು ವಲ್ಲಿ, ಪ್ರಭುವೆ ತಮ್ಮ ಹಟ್ಟಡವು ಬೊಕ್ಕಸದಲ್ಲೆ ಇದೆ, ನನ್ನ ಗುರು ವಿನ ಒಡವೆಯನ್ನು ಗುರುವಿಗೆ ಒಪ್ಪಿಸಿದೆನು, ಎಂದು ಅಗಸನು ನುಡಿವನು. ದೊರೆಯು ನೆಡಿಸುವಲ್ಲಿ ಹಚ್ಚಡವು ಬೊಕ್ಕಸದಲ್ಲೆ ಇರುವುದು, ಹೊ ನೃಯ್ಯನೆ, ನೀನು ಸಾಧಾರಣನಾದ ಅಗಸನಲ್ಲ; ಮಹಾಮಹಿಮ; ಎಂದು ದೊರೆಯು ಕೊಂಡಾಡಲು, ತನ್ನ ಸ್ವರೂಪವು ಪ್ರಕಟವಾಯ್ದೆಂದು ತಿಳಿ ದು, ಹೊನ್ನಯ್ಯನು ಬಯಲಾಗುವನು. ಮಿಡಿಬಿಲ್ಲಶಾಂತಿದೇವನು ಬಿಲ್ಲಿಗೆ ತನ್ನ ಲಿಂಗವನ್ನು ಸೇರಿಸಿ, ಎಲ್ಲರಿಗೂ ಹೊಡೆಯುವುದಕ್ಕೆ ಹೋಗುವನು. ಇವನನ್ನು ಹುಚ್ಚನೆಂದು ತಿಳಿದು ಇತರರು ಓಡುವರು. ಹೀಗೆಯೇ ವೀರ ಡೆಯರ ಬಳಿಗೆ ಇವನು ಹೋಗಲು, ಅವರು ಲಿಂಗಾನುಸಂಧಾ ನವಾಯಿತು, ಹೊಡೆಯಬಹುದು ” ಎನ್ನಲು, ಆತನು ಲಿಂಗವನ್ನು ಬಿಲ್ಲಿ ನಿಂದ ಪ್ರಯೋಗಿಸಿ, ಅದರೊಡನೆಯೇ ಪ್ರಾಣವನ್ನೂ ಬಿಡುವನು, ಹೇಟ