ಸೆ ಯಲ್ಲಿ ಸೇರಿಕೊಂಡು, ಇಂದಿನವರೆಗೂ ಯಾರಿಗೂ ವಿರೋ೪ ಧವಿಲ್ಲದಂತೆ ಕೆಲಸಮಾಡಿಕೊಂಡಿದ್ದನು. ಆದುದರಿಂದಲೇ ಯಜಮಾನನಿಗೆ ಆತನಲ್ಲಿ ಪರಮಪ್ರೀತಿಯಿದ್ದಿತು. ಶರಶ್ಚಂದ್ರನು ಯಜಮಾನನ ಅಪ್ಪಣೆಯನ್ನು ತೆಗೆದು ಕೊಂಡು ಮಧುವನದ ಕಡೆ ತೆರಳಿದನು. ಅಮರನ ಥನು ತನ್ನ ಕೆಲಸದ ಮೇಲೆ ಕುಳಿತುಕೊಂಡು ಲೆಕ್ಕ ಪತ್ರಗಳನ್ನು ನೋಡಲಾರಂಭಿಸಿದನು. ಈ ರೀತಿಯಲ್ಲಿ ಒಂದೆರಡು ಗಂಟೆಗಳು ಕಳೆದುಹೋದುವು. ಆ ಸಮಯಕ್ಕೆ ಸರಿಯಾಗಿ ಅಪರಿಚಿತನೊಬ್ಬನು ಆತನಿದ್ದಲ್ಲಿಗೆ ಬಂದನು. ಅಪ್ಪಣೆಯಿಲ್ಲದೆ ಅಮರನಾಧನ ಕೋಣೆಯೊಳಗೆ ಯಾ ರೂ ಸ ವೇಶಮಾಡಕೂಡದೆಂದು ನಿಯಮವಿದ್ದಿತು, ಈ ಅಪರಚಿತನು ಹಠಾತ್ತಾಗಿ ತಾನಿದ್ದಲ್ಲಿಗೆ ಬಂದುದನ್ನು ನೋಡಿ, ಅಮರನಾಥನು ಅಪರಿಚಿತನಾರೆ ಮಾನವಾದೆಗಳನ್ನರಿ ಯದ ಸಾಮಾನ್ಯ ಮನುಷ್ಯನಾಗಿರಬೇಕೆಂದು ತಿಳಿದು-ದಯೆ ಮಾಡೋಣಾಗಲಿ, ಎಂದು ಹೇಳಿದನು, ಅಪರಿಚಿತ - ಅಮರನಾಥಮಹಾಶಯರು ತಾವೇ ಅಲ್ಲವೆ ? - ಅಮರ-ಅಕದು, ತಾವು ಆರೋ ಗೊತ್ತಾಗಲಿಲ್ಲ. ಅಪರಿಚಿತ-ಗೊತ್ತಾಗಲು ಕಾರಣವಿಲ್ಲ. ನಾನು ತ ಮೃನ್ನು ನೋಡಲು ಬಂದವನಲ್ಲ. ಅಮರತಾವು ಯಾರನ್ನು ನೋಡಬೇಕೆಂದಿರುವಿರಿ? ಅಪರಿಚಿತ-ತಮ್ಮಲ್ಲಿ ಕೆಲಸಕ್ಕೆ ಇದ್ದ ಶರಚ್ಚಂದ್ರನ ನ್ನು ನಾನು ನೋಡಬೇಕೆಂದು ಬಂದೆನು. ಅಮರ-ಆತನು ಈಗತಾನೆ ಹೊರಟುಹೋದನು.