ಪುಟ:ಜ್ವರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 4 ] ಬರುವದು. ಇದಕ್ಕೆ ಸಿಂಹರಸವೆನ್ನುತ್ತಾರೆ. ಈ ಔಷಧಕ್ಕೆ ಸಿಟ್ಟು, ಸಾಹಸ, ಸ್ತ್ರೀಸಂಗ, ವ್ಯಾಯಾಮಗಳು ವರ್ಜ್ಯ, ೧೭ ಕಹಿಪಡುವ ಮತ್ತು ಪದಕ ಇವಗಳ ಕಷಾಯ ಮಾಡಿ, ಆರಿಸಿ, ಜೇನುತುಪ್ಪ ಕೂಡಿಸಿ ಕೆಡಬೇಕು, ಕಷಾಯ ಕುಡಿದೊಡನೆಯೇ ಅಂತ ರ್ದಾಹ, ನೀರಡಿಕೆ ಮತ್ತು ಪಿತ್ತ ಜ್ವರಗಳ ನಾಶವಾಗುವದು, ಅಥವಾ ೪ ತಲಿ ಹವೀಜಗಳನ್ನು ರಾತ್ರಿ ನೀರಲ್ಲಿ ನೆನೆಹಾಕಿಟ್ಟು ಬೆಳಿಗ್ಗೆ ಅರೆದು ಸೋಸಿ ಅದರಲ್ಲಿ ಕಲ್ಲಸಕ್ಕರೆ ಹಾಕಿ ಕೊಡಬೇಕು. ಇದರಿಂದ ಅಂತರ್ದಾಹವು ಕಡಿಮೆಯಾಗುತ್ತದೆ. ೧೧ ರಕ್ತಪಿತ್ಥಜ್ವರ. ಲಕ್ಷಣ:-ಉಳಿದ ಲಕ್ಷಣಗಳಲ್ಲಿ ಪಿತೃ ಜ್ವರದಂತೆಯೇ ಇರುವವಲ್ಲದೆ, ಬಾಯಿಂದ ರಕ್ತ ಇಲ್ಲವೆ ರಕ್ತ ವಿಶ್ರ ಕೆಂಪು ಉಗುಳು ಬೀಳುತ್ತದೆ. ರಕ್ತಪಿತ್ಥಜ್ವರಕ್ಕೆ ಉಪಾಯ. ೧ ಬಾಳಹಿಣದ ಚೂರ್ಣವನ್ನು ಎಣ್ಣೆ, ತುಪ್ಪ, ಇಲ್ಲವೆ ಜೇನುತುಪ್ಪ ದೊಡನೆ ನೆಕ್ಕಿಸಿದರೆ ದಾಹಜ್ವರ, ಕೆಮ್ಮು, ರಕ್ತಪಿತ್ತ, ಎಸರ್ಪ, ಶ್ವಾಸ, ವಾಂತಿ ಗಳ ಸಹಿತವಾಗಿ ಜ್ವರ ನಿಲ್ಲುತ್ತವೆ. ೨ ನೆಲtoಗಳ, ಅತಿಬಜಿ, ನೆಲಬೇವು, ಕಟಕರೋಣ, ಅಡಸಾಲದ ಎಲೆ, ಕಲ್ಲು ಸಬ್ಬಸಿಗಿ, ಕ೦ದಾಕ್ಷಿ ಇವುಗಳ ಕಷಾಯದಲ್ಲಿ ಸಕ್ಕರೆ ಹಾಕಿ ಕೊಟ್ಟರೆ ವೀರಕ, ದಾಹ, ವೈ ಕಡತ, ರಕ್ತಪಿತೃ ಜ್ವರ ಇವುಗಳ ನಾಶವಾಗುತ್ತವೆ - ೩ ನೆಲಇ೦ಗಳ, ಕಲ್ಲು ಸಸಿಗಿ, ಗೌಲ, ನೆಲಬೇವು, ಅಡಸಾಲ, ಕಟುಕ ರdಣಿ ಇವುಗಳ ಕಷಾಯದಲ್ಲಿ ಸಕ್ಕರೆ ಕೂಡಿಸಿ ತಕೊಂಡರೆ ಕೃಷೆ, ರಕ್ತಪಿತ್ತ ೬ರ, ರಕ್ತ ಬೀಳುವದು, ದಾಹ ಇವೆಲ್ಲವುಗಳ ನಾಶವಾಗುತ್ತವೆ, ೪ ಅಕಬಳ್ಳಿ, ಆಳಕಾಯಿ ಪುಡಿ, ಕಲ್ಲುಸಸಿಗಿ ಇವುಗಳ ಕವಾಯು ದಿಂದ ರಕ್ತ ಪಿತ್ಥಜ್ವರವು ಕಡಿಮೆಯಾಗುತ್ತದೆ. ೫ ಬಾಳದಬೇಕು, ಜೇಕಿನಗಡ್ಡೆ, ಕಲ್ಲುಸಸಿಗಿ, ಶು೦ಠಿ, ರಕ್ತಚಂದನ, ಹವೀಜ, ಬೇವಿನ ಕಡ್ಡಿ, ಪದ್ಮ ಕಾಷ್ಠ ಇವುಗಳ ಕಷಾಯವನ್ನು ರಕ್ತ ಪಿತ್ತಜ ರಕ್ಕೆ ಕೊಡಬೇಕು; ಇದರಿಂದ ಆ ಜ್ವರದ ಶಮನವಾಗುವುದಲ್ಲದೆ ದಾಹ, ಕಷ, ಓಕರಿಕಗಳ ನಾಶವಾಗಿ ಜಠರಾಗ್ನಿಯು ಪ್ರದೀಪ್ತವಾಗುತ್ತದೆ. ೬ ಬೇವು, ಅತಿಬಜಿ, ಲೋಧ್ರ, ಜಾಲರಿಯು ಗಿಡ, ಜೇಕಿನಗಡ್ಡಿ, ಕಡುಮುಕುಕನ ಬೀಜ, ಅಮೃತಬಳ್ಳಿ, ಬಾಳದಬೇರು, ಹವೀಜ, ಎಳೆಪತ್ರಿ ಕಾಯಿ ಇವುಗಳ ಕಷಾಯವನ್ನು ಮಾಡಿ ಆರಿಸಿ, ಅದರಲ್ಲಿ ಜೇನುತುಪ್ಪ ಹಾಕಿ