ಪುಟ:ತೊಳೆದ ಮುತ್ತು.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ಸಂಪೂರ್ಣ- ಕಥೆಗಳು

ಅನ್ಯಳೊರ್ವಳು ಅದೇ ವ್ರತವನ್ನು ಮಾಡಿದರೆ, ಆ ದೇವನು ಗಿರಿರಾಯ ನನ್ನೊಯ್ದು ಅನ್ಯಳ ಸ್ವಾಧೀನ ಮಾಡಿದನೇ! ನಾ ಮಾಡಿದ ಕರ್ಮ ಬಲವಂತನಾದರೆ, ನೀ ಮಾಡುವದೇನೋ ಸರಿಯೇ' ಎಂದು ಹರಿದಾಸರು ಹೇಳಿದ್ದು ಸಟಿಯೇ ?

ಕರ್ಮಧರ್ಮ ಸಂಯೋಗದಿಂದೆ ಗಿರಿರಾಯನಿದ್ದ ಊರಿಗೆ ಡೊಂಬರಾಟ ಬಂದಿತು ಅವರಲ್ಲಿ ಓರ್ವ ಮೋಹನಾಂಗಿಯಾದ ಯುವತಿಯ ಬಹು ಚಮತ್ಕಾರವಾದ ಆಟಗಳನ್ನುಡಿ ತೋರಿಸುತ್ತಿದ್ದಳಾದ್ದರಿಂಜೆ ಆ ಡೊಂಬರಾಡಂಬರಕ್ಕೆ ಬಹುಜನರು ಮೊಣಹಿತರಾಗಿದ್ದರು. ಮಾನಪ್ಪನ ಗಿರಿರಾಯರ ಮನೆಗೆ ಬಂದು ಭಯರೇ, ಆ ಡೊಂಬನಿಯ ಆಟವನ್ನು ತಾವು ನೋಡದಿದ್ದರೆ ಹುಟ್ಟಿದ್ದು ಆಸಾರ್ಥವಾದಂತಾಗುವದೆಂದು ಹೇಳಿದನು ಕೇಳುವದೇನು ? ಆಟಕ್ಕೆ ಪ್ರಾರಂಭವಾಯಿತು ಹದಿನಾರು ವಗ್ರದ ಪ್ರಾಯದವಳಾದ ಆ ಚೊಂಬ ಸುಂದರಿಯು ಪಟ್ಟೆ, ಸೀತಾಂಬರವನ್ನು, ತಲೆಗೆ ಚಿತ್ರಮಯವಾದ ಜರದ ಟೊಪ್ಪಿಗೆಯನ್ನಿಟ್ಟು, ಅಂಥದಲ್ಲಿ ಹಿಡಿದಿರುವ ಹಗ್ಗದ ಮೇಲೆ ಇಟ್ಟಿರುವ ಹರಿವಾಣದಲ್ಲಿ ತನ್ನ ಕಾಲುಗಳನ್ನಿಟ್ಟು, ಹರಿವಾಣವನ್ನು ಸರಿಸುತ್ತೆ ತಳ್ಳಿ ಈಚೆಯ ತುದಿಯಿಂದ ಆಚೆಳು ತುದಿಗೆ ಹೋಗುತ್ತಿರುವಾಗ ನಭಾರಿಣಿಯಾದ ಊರ್ವಶಿಯಂತೆ ಕಂಡಳು, ಹಾಗೆ ನಡೆದಿರುವ ಈ ಒಯ್ಯಾರೆಯು ತನ್ನ ತೂಕವನ್ನು ಹಿಡಿದಿರುವವರಲ್ಲಿ ತದೇಕಚ್ಛಾನಳಾಗಿದ್ದರೂ ಆಗಾಗ ಘ ತೀವ್ರವಿಂದ ಕಟಾಕ್ಷದಿಂದ ಗಿರಿ ರಾಯನನ್ನು ನೋಡುತ್ತಿರಲು ಆ ಹಚ್ಚನು ಅವಳ ಮೋಹಪಾರ್ಶಲ್ಲಿ ಸಂಪೂರ್ಣವಾಗಿ ಸಿಕ್ಕನು.

ತಾರೆಯ ಪ್ರಾಯಶ್ಚಿತ್ತಕಗಿಯೇ ತಾನು ಆ ಡೊಂಬರ ಮೋಹಳವಾಚೆ ಬೊಂಬೆಯನ್ನು ವಶಮಾಡಿಕೊಳ್ಳವನೆಂದು ಹೇಳಿ ಗಿರಿಯನು ಬಳ್ಳಾರಿಯಲ್ಲಿಯ ಬಂಗಲೆಗಳನ್ನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ತಂದು ಅವಳೊಡನೆ ದುರ್ಶ್ಯಾಷಶವನ ಮಾಡಲಾರಂಭಿಸಿದನು. ಹರಕೆ ಹೊತ್ತು ಹಡೆದ ಮಗನು ಈ ರೀತಿ ದುಮಗಿಯಾಗಿ ಹಿರಿಯರ ಹೆಸರಿಗೆ ಜೀರಿನಂಥ ಕಲಂಕವನ್ನು ತಂದದ್ದಲ್ಲದೆ, ಮನೆಯ ಸಂಪತ್ತು ಈಡಾಡಿ ಸುಕುಮಾರಿಯಾದ ತನ್ನ ಸೊಸೆಯ ಸೌಖ್ಯಲತೆಗೆ ಬೆಂಕಿ