ಪುಟ:ದಕ್ಷಕನ್ಯಾ .djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀ | ಕ್ಷಮಾಪಣೆ. ಯಾರನ್ನು ಕುರಿತು ಕ್ಷಮೆಯನ್ನು ಕೋರಬೇಕು ? ಏನೆಂದು ಹೇಳಿ ಕೇಳಬೇಕು ? ಇದಾವುದೂ ಬಗೆಹತ್ತುವಂತಿಲ್ಲ. ಕ್ಷಮಾಪಣೆಯನ್ನು ಕೋರುವದರಿಂದ ಎಷ್ಟರ ಫಲವಾಗಬಹುದೋ, ಅಷ್ಟೇ ಫಲವೇ ಕೇಳ ದಿದ್ದರೂ ದೊರೆಯಬಹುದು ಎಂದರೆ-ಕ್ಷಮಾಶೀಲರಾದ ವಾನನಿಧಿಗಳು, ಅದೊಂದು ತಮ್ಮ ಜನ್ಮ ವ್ರತವೆಂದು ತಿಳಿದೇ ಇರುವುದರಿಂದ, ತಾವು ಕೋರಲ್ಪಡದೆಯೇ ಅಲ್ಪಜ್ಞರ ಎಷ್ಟೇ ಅಪರಾಧಗಳನ್ನಾದರೂ ಕ್ಷಮಿಸಿ, ಅವರನ್ನು ಉನ್ನತಿಗೆ ತರಬಲ್ಲವರಾಗಿರುವರು ಅಂತವರಲ್ಲಿ ಕ್ಷಮೆಯನ್ನು ಕುರಿತು ಕೇಳಬೇಕಾದ ಅಗತ್ಯವೇ ಉಳಿದಿರುವುದಿಲ್ಲ. ಕ್ಷಮಿಸಿಲ್ಲದವ ರಲ್ಲಿ ಹಲ್ಲಿ ರಿದು ಬೇಡಿದರೂ ಫಲವಿಲ್ಲ, ಇದನ್ನು ತಿಳಿದೂ ಇಂದಿನ ಕ್ಷಮಾ ಪಣೆಯ ದೀರ್ಘಲೇಖನಕ್ಕೇಕೆ ಪ್ರಯತ್ನಗೊಳ್ಳಬೇಕೆಂದರೆ-ಲೋಕಮ ರ್ಯಾದೆಯನ್ನು ಯಾರೂ ಮಾರಬಾರದಷ್ಟೆ , ಕರ್ತವ್ಯದಲ್ಲಿ ಕಟ್ಟುಬಿದ್ದಿ ರುವ ನಾವು ಕ್ಷಮಾಪಣೆಯನ್ನು ಕೊರಲೇಬೇಕು. ಅಪರಾಧವೆಂತಹುದೆಂದರೆ, ಹಿತೈಷಿಣಿಗೆ ಈ ವರೆಗೂ ಮುತ್ತಿದ್ದ ಅಜ್ಞಾತವಾಸವೆಂಬುದೇ ಉತ್ತರವು, ಏತರಿಂದ ಎಂಬುದಕ್ಕೆ ಸಮಾಧಾನ ವಾಗಿ, ಯಾವ ಕಾರಣಗಳನ್ನು ಹುಡುಕುವ ? ಸಾಮಾನ್ಯವಾಗಿ ನೋಡಿ ದರೆ, ನಾಲ್ಕು ಮುಖ್ಯ ಕಾರಣಗಳು ಮುಂದೆ ನಿಲ್ಲುವವು. 1. ಪತ್ರಪ್ರಚಾರದ ಅಪದೆಸೆಗೆ ಮುದ್ರಾಲಯದವರ ಅವಿಧೇ ಯತೆ, ಅಲಸತೆ, ಆಶಾಪರತೆಗಳೇ ಪ್ರಬಲ ಕಾರಣವೆಂಬುದು ಮೊದಲ ನೆಯ ಸಮಾಧಾನವು - 2, ವಾಚನಾಭಿರುಚಿಯಿಲ್ಲದ ಈ ಕರ್ಣಾಟಕದಲ್ಲಿ, ಭಾಷಾದ್ರೋ ಹಿಗಳಾದ ದೇಶೀಯರ ನಿಷ್ಟುರತೆಯೇ ಪತ್ರಿಕೆಗಳ ಅವನತಿಗೆ ಕಾರಣವೆಂ ಬುದು ಎರಡನೆಯ ಸಮಾಧಾನವು.