ಪುಟ:ದಾಮಿನಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ. ಸ್ವಾರಸೂಚಕವಾದ ಮಾತುಗಳನ್ನಾಡಿದಳು. ಆ ಮೇಲೆ, ಅಲ್ಲಿದ್ದ ನೆರೆಕರೆಯವ ರನ್ನು ಉದ್ದೇಶಿಸಿ,--“ಅಹುದೆ? ಇನ್ನು ನಿಮ್ಮದಾದರೂ ಎಂತಹ ಆಚರಣೆ? ನಿಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಅನ್ಯರ ಮಕ್ಕಳನ್ನು ಆಡಿಸಬಂದಿರಿ! ನಿನ ಗೆಲ್ಲರಿಗೂ ಇದೇ ಸಮಯವೆಂದು ತೋರುತ್ತಿದೆ. ಇರಲಿ: ಪರಮೇಶ್ವರನು ಒಂದ ' ದಿಗ್ಟರೆ ಒಂದು ದಿನ ನನಗೂ ಕೊಟ್ಟಾನು; ನನಗೂ ಒಂದು ದಿನ ಇಂತಹ ಸಮ ಯವು ಸಿಕ್ಕಿತು! ಎಂದಳು. ಆರೂ ಆದ ಉತ್ತರವನ್ನೂ ಕೊಡಲಿಲ್ಲ. ಎಲ್ಲರೂ ಒಬ್ಬೊಬ್ಬರಾಗಿ ಹೊರ ಟುಹೋದರು, ದಾಮಿನಿಯ ಕಣ್ಣೀರನ್ನೊರಸಿಕೊಂಡು, ಸಿಬ್ಬವಾಗಿ ಕುಳಿತಳು. ನೆರೆಕರೆಯ ಹೆಂಗುಸರೆಲ್ಲರೂ ತಮ್ಮತಮ್ಮ ಮನೆಗೆಲಸಗಳನ್ನು ಮಾಡುವುದಕ್ಕಾಗಿ ಹೊರಟುಹೋದರು. ಅವರಲ್ಲಿ ದಾಖಸಿಯ ಸಮವಯಸ್ಯೆಯಾದವಳೊಬ್ಬಳು ಮಾತ್ರ ಸ್ವಲ್ಪ ದೂರ ಹೋಗಿ ನಿಂದಿದ್ದಳು. ರಮೇಶನ ಮಲತಾಯಿಯು ಮೊದಲಿ ನಂತೆಯೆ ಬಾಗಿಲನ್ನು ಹಾಕಿಕೊಂಡು ಹೊರಟುಹೋದ ಮೇಲೆ, ಅವಳು ದಾಮಿನಿ ಯ ಹತ್ತಿರ ಒಂದು,-"ಒಮ್ಮೆ ಎದ್ದು ಬಾರೆ: ಅಮ್ಮ!” - ಎಂದಳು, “ನಾನಿನ್ನೆಲ್ಲಿ ಗೂ ಬರುವದಿಲ್ಲ; ಎಲ್ಲಿಗೆ ಹೋಗುವೆನೆಂದರೂ, ಈಗ ನನಗೆ ಸ್ಥಳವಿಲ್ಲ; ಆರೂ ಇನ್ನು ನನಗೆ ಆಶ್ರಯಕೊಡುವರಿಲ್ಲ !” - ೧೨ಂದು ದಾಮಿನಿಯು ಕಂಬನಿದುಂಬಿದಳು. ಸಮವಯಸ್ಯೆಯು ಕೇಳಿದಳು:- “ಹಾಗಾದರೆ ಏನು? ಇಲ್ಲಿಯೇ ಬದು ಸಾಯುವೆಯಾ?? ದಾಮಿನಿಯು ಉತ್ತರಕೊಟ್ಟಳು:- ಇಲ್ಲಿಯೆ ಸಾಯುತ್ತೇನೆ, ನನಗೆ ಇ ನ್ನು ಸ್ಥಳವೆಲ್ಲಿದೆ? ಅವರು ನನ್ನನ್ನು ಇಲ್ಲಿಯೆ ಬಿಟ್ಟು ಹೋಗಿದ್ದಾರೆ: ನಾನಿಲ್ಲಿಯೇ ಇರುತ್ತೇನೆ. ಎಷ್ಟು ದಿನಗಳ ಪರ್ಯ೦ತವಾಗಿ ಅವರಿಗೆ ಬರುವುದಿಲ್ಲವೊ ಅಷ್ಟು ದಿನಗಳು ಏನಾದರೂ ಮಾಡಿ ಕೂಡಿದರೆ, ಬದುಕಿರುತ್ತೇನೆ, ಅವರನ್ನು ನೋಡಿ ದೆಯೆ ಸಾಯುವುದಕ್ಕೆ ಮಾರ್ಗವಿಲ್ಲ!” – ದಾಮಿನಿಯು ನಿಶ್ಯಬ್ದವಾಗಿ ಅಳತೊಡಗಿದಳು. ಸಮವಯಸ್ಯೆಯು ಹೇಳಿದಳು:- “ಇನ್ನೆಲ್ಲಿಗೂ ಹೋಗಬೇಡವಮ್ಮ ಈ ಮರದಡಿಯಲ್ಲಿಯಾದರೂ ಬಂದು ಕುಳಿತುಕೊ, ಬಿಸಿಲು ಸಹಿಸುವುದಕ್ಕಾಗುವು ದಿಲ್ಲ. ನನಗೂ ಇನ್ನು ಇಲ್ಲಿರಲಾಗುವುದಿಲ್ಲ.” ಮೆಲ್ಲ ಮೆಲ್ಲನೆ ದಾಮಿನಿಯು: ಅಮ್ಮ! ಮನೆಗೆ ಹೋಗು, ನಿನಗೆ ಮನೆ ಯಿದೆ. ಮನೆಯಲ್ಲಿ ನಿನ್ನನ್ನು ನೋಡದಿದ್ದರೆ, ನಿಮ್ಮ ತಾಯಿಕಳವಳಪಡುವಳು.

  • ಹೆಂಗಸರು ಗಂಡಂದಿರ ಹೆಸರನ್ನು ಹೇಳುವುದಿಲ್ಲ.