ಪುಟ:ದಾಮಿನಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. , ೮ ಕೇಳಿದನು:- ( ಅವನ ಮೇಲೆ ಕೋಪವೇನು??” ಅವಳು ಮಾತನಾಡಲಿಲ್ಲ. ಆವ ಉತ್ತರವೂ ಬಾರದುದನ್ನು ನೋಡಿ, ಬಟ್ಟೆಯ ಸೆರಗಿನಲ್ಲಿದ್ದ ಕೆಲವು ಕಾಳುಗಳನ್ನು ತೆಗೆದು ಅವಳ ಮುಂದಿರಿಸಿ, ಹುಡುಗನು ಪಾಠಶಾಲಾಭಿಮುಖನಾಗಿ ಹೊರಟು ಹೋದನು. - ಹುಡುಗನ ಹೆಸರು ರಮೇಶನು, ದಾಮಿನಿಗೆ ಅವನು ಏನೂ ಆಗಬೇಡ. ನೆರೆಯವನೆಂದು ಅವಳವನನ್ನು ಅಣ್ಣನೆನ್ನುವಳು; ಅವನನ್ನು ಆವಾಗಲೂ “ ಅಣ್ಣಾ!” ಎಂದು ಸಂಬೋಧಿಸುವಳು. ರಮೇಶನೆಂದರೆ, ದಾಮಿನಿಗೆ ಬಲು ಇಷ್ಟ; ಆವ ಬೆಕ್ಕನ್ನು ನೋಡಿದರೆ ತನಗೆ ಬಹುಭಯವಾಗುತ್ತಿದ್ದಿತೋ ಅದನ್ನು ರಮೇಶನು ನೋಡಿದೊಡನೆ ಹೊಡೆಯತೊಡಗುವನು. ಅದಕ್ಕಾಗಿಯೇ, ಅವಳು ಅವನ ಅನು ಗತೆಯಾಗಿರುವಳು, ಸ್ನಾನಮಾಡುತ್ತಿದ್ದಾಗ, ರಮೇಶನು ದಾಮಿನಿಗಾಗಿ ನೀರಲ್ಲಿ ಆದು, ಎಷ್ಟೋ ಪ್ರಯಾಸದಿಂದ, ಬಲಪುಷ್ಪಗಳನ್ನು ತಂದುಕೊಡುವನು. ಅದನ್ನ ವಳು ತೆಗೆದುಕೊಂಡು, ನಗುನಗುತ್ತ, ಹೆರಳಿಗೆ ಸೂಡಿ, ಮತ್ತೆ ತಲೆದಗ್ಗಿಸಿ, “ನೋಡಣ್ಣ! ಹೇಗಿದೆ?” ಎಂದು ಕೇಳುವಳು. ಬಹುಶಃ, ರಮೇಶನು ಚೆನ್ನಾಗಿ ದೆಯೆಂದೇ ಹೇಳುವನು; ಆದರೆ, ಮಧ್ಯೆಮಧ್ಯೆ ಮನಸ್ಸಿಗೆ ಬಾರದಿದ್ದರೆ, ಸ್ವತಃ ಅದನ್ನು ಸರಿಯಾಗಿ ಮುಡಿಯಿಸುವನು. ಗ್ರಾಮದಲ್ಲಿನ ಎಲ್ಲ ಹುಡುಗಿಯರಿಂದಲೂ, ತನ್ನ ದಾಮಿನಿ ಸ್ವಾಭಾವಿಕವಾಗಿ ಶಾಂತೆಯೆಂದೂ ದುಃಖಿನಿಯೆಂದೂ ರಮೇಶನು ತಿಳಿದಿದ್ದನು. ಅಂತೆಯೆ, ದಾಮಿನಿಯೂ ಆ ಗ್ರಾಮದ ಹುಡುಗರಲ್ಲಿಯೆಲ್ಲ ತನ್ನ ರಮೇಶನನ್ನು ಸ್ವಜನವೆಂದು ಭಾವಿಸಿಕೊಂಡಿದ್ದಳು, ಇತರರಾರೂ ತನಗಾಗಿ ಹೂಗ ಳನ್ನು ತಂದುಕೊಡುತ್ತಿಲ್ಲ; ಹಕ್ಕಿಗಳನ್ನು ಹಿಡಿಯುತ್ತಿಲ್ಲ; ಕಾಳುಗಳನ್ನು ಸಂಗ್ರಹಿ ಸುತ್ತಿಲ್ಲ; ತನ್ನ ವೈರಿಯಾದ ಬೆಕ್ಕನ್ನು ಹೊಡೆದೋಡಿಸುತ್ತಿಲ್ಲ. ಆದುದರಿಂದ, ರಮೇಶನನ್ನು ನೋಡಿದಳೆಂದರೆ, ದಾಮಿನಿಯೋಡಿಹೋಗಿ, ಅವನ ಬಳಿ ನಿಲ್ಲುತ್ತಿ ದೃಳು, ನಗೆಮೊಗದಿಂದ, ಅವನ ಮಾತುಗಳಿಗೆ ಉತ್ತರಗುಡುತ್ತಿದ್ದಳು. ಆದರೆ, ಇಂದು ಅವನನ್ನು ನೋಡಿ, ಮೊದಲಿನಂತೆ ಅವಳು ಆಹ್ಲಾದವನ್ನು ಸೂಚಿಸಲಿಲ್ಲ' ದಾಮಿನಿ ಶೈಶವದಲ್ಲಿಯೂ ಗಂಭೀರೆಯಾಗಿಹೋಗಿದ್ದಾಳೆ! ಶೈಶವದಲ್ಲಿಯೂ, ದಾಮಿನಿಗೆ ಇಷ್ಟು ಗಂಭೀರಪ್ರಕೃತಿಯೇಕೆ? ಆವನು ಸುಖಿ ಯೋ, ಅವನು ಚಂಚಲನು; ಆವನು ದುಃಖಿಯೋ, ಅವನು ಶಾಂತನೂ, ಧಿರ ನೂ, ಗಂಭೀರಪ್ರಕೃತಿಯುಳ್ಳವನೂ ಆಗಿರುವನು. ಇದು ಸ್ವಭಾವವು. ದಾರುಣ ವಾದ ಒಂದು ದುಃಖದ ದೆಸೆಯಿಂದ, ದಾಮಿನಿಯೆಂದು, ಈ ಶೈಶವದಲ್ಲಿ ಯೂ, ಕಾತರೆಯಾಗಿರುವಳು. ಅವಳ ಆ ತಾಯಿಯೆಲ್ಲಿ ?-ಏನು? ಸತ್ತು ಹೋಗಿರಬಹುದೆ? ಹಾಗಾಗಿದ್ದರೆ, ಜನಗಳೇಕೆ ಹಾಗೆ ಹೇಳುವುದಿಲ್ಲ? ಹಳ್ಳಿಯ ಎಲ್ಲ ಮಕ್ಕಳೂ ತಾಯ