ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

388 ಕನಸು

 ದೊಡ್ಡದೊಂದು ಕೆಲಸವನ್ನು ಮಾಡಿ ಮುಗಿಸಿದವರಂತೆ.
       ಪಾಠದ ಬಳಿಕ ವಿದ್ಯಾರ್ಥಿಗಳು ಹೊರ ಹೋಗುತ್ತಿದ್ದಂತೆ ಕೆಲವರು ಮಹ
 ದೇವಯ್ಯನ ಕೈ ಕುಲುಕಿದರು. ಬೇರೆ ಕೆಲವರು, ಮುರಲೀಧರನಿಗೆ ಕೇಳಿಸುವಂತೆ
 ಕೀಟಲೆ ಮಾಡುವ ಧ್ವನಿಯಲ್ಲಿ ಅಂದರು:
       “ಸಂಪಾದಕರು! ಸಂಪಾದಕರು!”
       ಇಬ್ಬರೇ ಉಳಿದಾಗ ನಾರಣಪ್ಪನೊಡನೆ ಮುರಲೀಧರನೆಂದ:
       “ರೀ, ನಿಮ್ಮ ಮೇಲೆ ನನಗೆ ಬಹಳ ಸಿಟ್ಟು ಬಂದಿದೆ.”
       “ಹೌದೆ? ಯಾಕೆ?” ಎಂದು ನಾರಣಪ್ಪ ನಗುತ್ತ.
       “ಇನ್ನೇನು ಮತ್ತೆ?”
       “ಸುಮಿರಿ ಮುರಲಿ,  ನಾನು ಸರಿಯಾದ್ದನ್ನೇ ಮಾಡಿದೆ.”
       “ಏನೋಪ್ಪ...”
       ಮನೆಯ ಕಡೆ ಹೊರಟಾಗ ನಾರಣಪ್ಪ ನಕ್ಕು ಹೇಳಿದ:
       “ಮ್ಯಾಗಜೀನಿಗೆ ನಾನೊಂದು ಲೇಖನ ಕೋಡ್ತೀನಿ. ತಿರಸ್ಕರಿಸೋಡೀಪ್ಪಾ....”
       ....ಮೊದಲು ವರ್ಷದ ಇಬ್ಬರು ಪ್ರತಿನಿಧಿಗಳು, ದ್ವಿತೀಯ ವರ್ಷದ ಕಲಾ
 ವಿಭಾಗದಿಂದ ಇನ್ನೊಬ್ಬರು, ಮುರಲೀಧರ ಮತ್ತು ಮಹದೇವಯ್ಯ-ಹೀಗೆ ಐವರ
 ಸಂಪಾದಕ ಮಂಡಲ ಕೆಲಸ ಆರಂಭಿಸಿತು.
         "ಸಂಪಾದಕರಾದರೆ  ಸಾಲದು. ಸ್ವತಃ ನೀವೂ ಬರೀಬೇಕು,” ಎಂದರು
 ಶ್ರೀಕಂಠಯ್ಯ.
     ಅದು ಕಷ್ಟದ ಕೆಲಸವೆಂಬುದು ಹೆಚ್ಚಿನವರ ಅಭಿಪ್ರಾಯವಾಗಿತ್ತು.  ಅದಕ್ಕೆ
 ಅಪವಾದವಾಗಿದ್ದವನು ಲಕ್ಷ್ಮೀಕಾಂತ. ಆತ ಕೇಳಿದ:
     “ಕವಿತೆ ಎಷ್ಟು ಬೇಕಾಗಬಹುದು ಸಾರ್?”
     “ಕನ್ನಡ ವಿಭಾಗದಲ್ಲಿ ನಾಲೈದು.  ಇಂಗ್ಲಿಷ್ ವಿಭಾಗದಲ್ಲಿ ಒಂದೋ
 ಎರಡೋ,” ಎಂದರು ಶ್ರೀಕಂಠಯ್ಯ.
        “ಆ ಕೆಲಸ ನನಗೆ ಬಿಟ್ಟಿಡಿ ಸಾರ್.”
        “ಎಲ್ಲಿಂದ ತರೀಯಪ್ಪ?”
        ಕಣ್ಣೆವೆ ಕೂಡ ಅಲುಗಿಸದೆ ಆತ್ಮ ವಿಶ್ವಾಸದಿಂದ ಲಕ್ಷ್ಮೀಕಾಂತನೆಂದ:
        “ನಾನೇ ಬರೀತೀನಿ, ಇಂಗ್ಲಿಷ್ ಕನ್ನಡ ಎರಡರಲ್ಲ.”
        ಶ್ರೀಕಂಠಯ್ಯನವರ ಕಣ್ಣುಗಳಲ್ಲಿ ತುಂಟತನದ ನಗೆ ಮಿನುಗಿದುದನ್ನು 
    ಮುರಲೀ ಧರ ಗಮನಿಸಿದ.