ಪುಟ:ನವೋದಯ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

426

ಸೇತುವೆ

"ಇವತ್ತಿನ್ದು ಇವತ್ತೇ ಸಂದಾಯವಾಗ್ಬೇಕೇನು?"
[ಅವರಿಬ್ಬರಿಗೇ ಸಂಬಂಧಿಸಿದ ಮಾತು. ಸುನಂದೆಗೆ ಅರ್ಥವಾಯಿತು.]
“ಹೂಂ."
ಶಯನ. ಕತ್ತಲೆಯಲ್ಲಿ ಛಾವಣಿ ನೋಡುತ್ತ ಪಿಸುಮಾತು. ಬಳಿಕ ಮುಖಕ್ಕೆ
ಮುಖ.
“ಮುಸುರೆ ತಿಕ್ಕೋಕೆ ಯಾರನ್ನಾದರೂ ಗೊತ್ತು ಮಾಡೋಣ್ವೆ ಸುನಂದಾ?"
"ಖಂಡಿತ ಬೇಡಿ."
"ಯಾವಾಗ್ಲೂ - ಯಾವಾಗ್ಲೂ - ಒಬ್ಬಳಿಂದ್ಲೇ ಕೆಲಸಮಾಡೋಕೆ ಆಗುತ್ತಾ?"
"ಆಗದೆ ಇದ್ದಾಗ ನೋಡ್ಕೊಳ್ಳೋಣ."
"ಒಬ್ಬಳೇ ಇರೋಕೆ ಬೇಸರ ಅಲ್ವಾ?"
"ಹೂಂ."
"ಇನ್ನೊಬ್ಬರು ಯಾರಾದರೂ ಬಂದರೆ?"
“ಯಾರು?"
"ಪೆದ್ದುಕಣೇ ನೀನು."
"ಹೋಗ್ರಿ."
"ಇಷ್ಟರತನಕ ಆಸಾಮಿಯ ಪತ್ತೆ ಇಲ್ಲ. ಮುಂದೆ ಹ್ಯಾಗೆ ಹೇಳೋಣ?”
“ಥೂ!"
"ಸುನಂದಾ......"
"ಏನು?"
“ಕೆಲಸ ಮಾಡಿ ಸಂಪಾದಿಸ್ಬೇಕೂಂತ ನಿನಗೆ ಆಸೇನಾ?"
"ಇಲ್ವಲ್ಲಾ ... "
"ಇಷ್ಟೊಂದು ಓದಿಯೂ ಏನೂ ಮಾಡದೇ ಇದ್ದರೆ?"
"ಏನು ಮಾಡೋದು?"
"ನಾನು ಹೇಳ್ಲಾ?"
"ಹೇಳಿ."
"ಇನ್ನೊಂದು ವರ್ಷವಾದ್ಮೇಲೆ ಅಕ್ಕಪಕ್ಕದ ಚಿಕ್ಕ ಹುಡುಗರ್ನೆಲ್ಲಾ ಮನೇಲಿ
ಸೇರಿಸಿ ಪಾಠ ಹೇಳ್ಕೊಡು."
"ಸರಿ ಸರಿ...."
"ಆಗ ನಿನ್ನ ಮಗನಿಗೋ ಮಗಳಿಗೋ ಆಟವಾಡೋಕೆ ಸ್ನೇಹಿತರು ಬೇಕಾಗ್ತಾರೆ
ಕಣೇ."
"ನಿಮಗೆ ನಾಚಿಕೆ ಇಲ್ಲ."
"ಆ ಮೇಲೆ ವಯಸ್ಕರ ಶಿಕ್ಷಣ ಸಮಿತಿಯವರು, ಇಲ್ಲೊ೦ದು ಶಾಖೆ ತೆರೆದಾಗ,