ಪುಟ:ನಾಸ್ತಿಕ ಕೊಟ್ಟ ದೇವರು.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ಸಂಕಲನವನ್ನು ಕುರಿತು

ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ನಾನು ಬರೆದ ಸಣ್ಣಕತೆಗಳಿಂದ ಹನ್ನೆರಡನ್ನು ಆರಿಸಿ ಈ ಸಂಗ್ರಹದಲ್ಲಿ ಪ್ರಕಟಿಸಲಾಗಿದೆ.

ಸನ್ಮಿತ್ರರಾದ ಪ್ರೊ. ಜಿ. ವೆ೦. ಕತೆಗಳನ್ನು ತೂಗಿನೋಡಿ ಮೇಲ್ನುಡಿಯನ್ನು ಬರೆದುಕೊಟ್ಟು ಉಪಕಾರಮಾಡಿದ್ದಾರೆ.

ಗೆ. ಮಿತ್ರ ಸಂಕಲನವನ್ನು ಮುದ್ರಣಕ್ಕೆ ಅಣಿಗೊಳಿಸುವುದರಲ್ಲಿ ನೆರವು ನೀಡಿದ್ದಾರೆ.

ಗೆ. ಶೇಷನಾರಾಯಣರು ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಎಂ. ಶ್ರೀಕಂಠಯ್ಯ ಅಚ್ಚುಕೂಟದಲ್ಲಿ ಇದನ್ನು ಅಂದವಾಗಿ ಮುದ್ರಿಸಿಕೊಟ್ಟಿದ್ದಾರೆ.

ಇವರಿಗೆಲ್ಲ ನಾನು ಋಣಿ.

ಗಣೇಶ ಚತುರ್ಥಿ
೧೯೬೫ ನಿರಂಜನ
ಜಯನಗರ

i