ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ದೂಧಚಂದ್ರಿಕೆ. ಮೂಯಗೆ ಆಸ್ಪದ ಕೊಡದಿರುವ ತ್ರಿಕಾಲಾಬಾಧಿತವಾದ ಶುದ್ದವೂ-ಸಾ ಕವೂಸತ್ಯವೂ ಆದ ಅನುಭವದ ಬೋಧ ಇವುಗಳಿಂದ ಜನರ ವೃತ್ತಿ ಪರಿವರ್ತನಮೂಡಿ, ಅದನ್ನು ಸನ್ಮಾರ್ಗಕ್ಕೆ ಎಳೆಯುವವರಲ್ಲಿ ಯಾ ಶ್ರೇಷ್ಠರೆನಿಸಿಕೊಂಡರು ಪ್ರಿಯ ವಾಚಕರೇ, ನಮ್ಮ ಗುರುಗಳು ಜನರನ್ನು ಕಂಡ ಕೂಡಲೆ ಈಶ್ವ ರಭವನೆಯಿಂದ ರಅವನ್ನು ಮಟ್ಟ ಮೊದಲು ನಮಸ್ಕರಿಸುತ್ತಿದ್ದರಲ್ಲದೆ, ಅಹಂಭಾವನೆಯಿಂದ ತಾವು ಮೊದಲು ಜನರಿಂದ ನಮಸ್ಕೃತರಾಗಿ, ಆಮೇಲೆ ತಾವು ನಮಸ್ಕಾರ ಮೂಡುತ್ತಿ ದ್ವಿಲ್ಲ. ಜನರು ಒಮ್ಮೆ ನಮಸ್ಕಾರಮಾಡುವದರೊಳಗಾಗಿ, ಅವರು ಜನರಿಗೆ ಹತ್ತು ಸಾರೆ ನಮಸ್ಕರಿಸುತ್ತಿದ್ದ ರು. ಶ್ರೀ ಸಾಧುಗಳು ತಮಗೆ ನಮಸ್ಕಾರಮೂಡುದವರನ್ನು ಕುರಿತು ಸತ್ಯವಾದ ಭಾವನೆಯಿಂದ-ಮಹಾರಾಜಾ, ನೀವು ಸ್ವತಃ ಈಶ್ವರಸ್ವ ರೂ ಪರಿದ್ದು, ಈ ದೇಹಕ್ಕೆ ಯಾಕೆ ನಮಸ್ಕರಿಸುತ್ತೀರಿ? ನಿಮ್ಮ ಹತ್ತು ಜನರೊಳಗಿನದೇ ಇದು ಇರುತ್ತದೆ, ಇದರಲ್ಲಿ ಯಾವ ಯೋಗ್ಯತೆಯಿರುತ್ತದೆ? ಇದರ ಎದೆಸೀಳಿ ದರೆ ಮೂರು ಅಕ್ಷರಗಳಿಲ್ಲ: ಇದು ಸದ್ದು ರವಿಗೆ ಶರಣುಹೋದದ್ದಲ್ಲ; ಜಗತ್ತನ್ನೇ ಈಶ್ವರಸ್ಯ ರೂಪವೆಂದು ಭಾವಿಸಿದ್ದಲ್ಲ; ಮಾತಾಪಿತೃಗಳನ್ನು ದೇವರೆಂದು ಪೂಜಿಸಿ ದ್ದಲ್ಲ; ಭಾವನೆಯಿಂದ ಬ್ರಾಹ್ಮಣಾರಾಧನೆ ಮೂಡಿದ್ದಲ್ಲ; ಶುದ್ದ ಕರಿಬಂಡೆಬೆಳೆದಂತೆ ಬೆಳೆದಿರುತ್ತದೆ; ಚಿಕ್ಕಂದಿನಲ್ಲಿ ಇದನ್ನು ಕುಂಟ ಸ್ಯಾ ಸು ನೆಂದು ಸಣ್ಣವರ, ದೊಡ್ಡ ದರೂ, ಮುದುಕರೂ ಕೂಡಿಯೇ ಕರೆದಿರುವರು, ಮಹಾರಾಜಾ, ಸ್ಕಾವಿಯು ತನ್ನ ಸೇವೆಯಲ್ಲಿ ಹ್ಯಾಗೆ ಇದನ್ನು ಎಳಕೊಂಡನೋ ತಿಳಿಯದು, ಅಭಿಮನ ದಿಂದ ಇದು ಸೇವೆಯನ್ನು ಮಾಡಿದರೆ, ಮರುದಿನ ನಡೆಯಲಾರದು.” ಇತ್ಯಾದಿ ಯಥಾರ್ಥ ವಾದ ವಿನಯಕ್ತಿಗಳನ್ನು ನುಡಿಯುತ್ತಿದ್ದ ರು; ಆದ್ದರಿಂದಲೇ ನಮ್ಮ ಗುರುಗಳನ್ನು ದಾಸಭಾವತಾಳುವವರಲ್ಲಿ ಶ್ರೇಷ್ಠರೆಂದು ಮೇಲೆ ಹೇಳಿರುವೆವು. ಪ್ರಿಯವಾಚಕರೇ, ನಮ್ಮ ಗುರುಗಳ ಈ ಕೈಂಕರ್ಯಭಾವವನ್ನೆ ಸಂತರ ಶ್ರೇಷ್ಠವಾದ ಧರ್ಮ ಎಂದು ನಾವು ತಿಳಿಯುತ್ತೇವೆ: ಯಾಕಂದರ, ಈ ಪ್ರಕರಣದ ಮೇಲ್ಗಡೆಯಲ್ಲಿ ಬರೆದ ಭರ್ತೃಹರಿಯ ಸಂಸ್ಕೃತ ಉಕ್ತಿಯಂತೆ ಸಂತರು ತಾವಾಗಿ ಪರಹಿತದಲ್ಲಿ ತೊಡಗಿದವರಾಗಿರುವರು” ಶುಕಾರಾಮನ ಮಹಾರಾಷ್ಟ್ರ ಉಕ್ತಿಯಂತ 6“ಸಂತರ ವಿಭೂತಿಯು ಜಗತ್ತಿಗೆ ಕಲ್ಯಾಣಕಾರಕವಾಗಿರುವದು.” ಸರ್ವಜ್ಞನ ಕನ್ನಡ ಉಕ್ತಿಯಂತೆ ('ಸಂತರು ತನ್ನಂತೆ ಪರರನ್ನು ತಿಳಿಯುವರು ” ಈ ಮೂವರ ಉಕ್ತಿಗಳಲ್ಲಿ ತುಂಬಿತುಳುಕುತ್ತಿರುವ ಸಂತರ ಶ್ರೇಷ್ಠ ವಾದ ಧರ್ಮದ ಮೂರ್ತಿಯೇ ಅಗಡಿಯ ಶ್ರೀ ಸಾಧುಗಳು ಆಗಿದ್ದರೆಂದು ಹೇಳುವೆವು; ಯಾಕಂದರೆ ಶ್ರೀ ಸಾಧು