ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೩೬ ನೋವು
" ನೋಡ್ದೆ. ಪಡಸಾಲೇಲಿ ಮಲಕೊಂಡಿದಾರಲ್ಲ." " ಲಾಯರು ಮೋಹನರಾಯರ ಮಗಳ ಜಾತಕವೂ ನಿನ್ದೂ ಕೂಡುತ್ವಂತೆ, ಹುಡುಗಿ
ಓದಿದವಳು. ಚೆನಾಗಿದ್ದಾಳಂತೆ."
"ಸ್ವಲ್ಪ ಸಾರು, ದೊಡ್ಡಮ್ಮ." " ನೀನೊಮ್ಮೆ ನಿನ್ನ ಅಣ್ಣಯ್ಯನ ಜತೆ ನಗರಕ್ಕೆ ಹೋಗಿ ಹುಡುಗೀನ ನೋಡ್ಕೋಂಡು
ಬರ್ತೀಯಾ ?"
" ಸಾರು ಸಾಕು." " ನಿಧಾನವಾಗಿ ಊಟ ಮಾಡು. ಏನೀಗ ಅವಸರ ?" " ಏನೀಗ ಅವಸರ ಅಂತ ನಾನೂ ಕೇಳಿದ್ರೆ ?" " ಇಲ್ಲ ಶೀನೆ, ಗೋವಿಂದನ್ದೂ ನಿನ್ದೂ ಮದುವೆ ಇಷ್ಟು ಆಯ್ತೂ೦ದ್ರೆ-" " ಆಗಲಿ ದೊಡ್ಡಮ್ಮ. ಪುನಃ ಅದರ ಪ್ರಸ್ತಾಪ ಯಾಕೆ ?" " ಅದಕ್ಕೇ ಅಂದಿದ್ದು. ಹುಡುಗೀನ ಒಮ್ಮೆ ನೋಡಿ—" " ಅಣ್ಣಯ್ಯನಿಗೆ ಒಪ್ಪಿಗೆಯಾಗ್ಲಿಲ್ವೆ ?" " ಛೆ! ನೀನೊಬ್ಬ. ಹುಡುಗೀನ ನೋಡಿ ಬಾ ಅ೦ದ್ರೆ...ಅನ್ನ ಹಾಕ್ತೀನಿ, ಮಜ್ಜಿಗೆಗೆ." " ಅನ್ನ ಬೇಡ, ಹಸಿವಿಲ್ಲ. ಆ ಲೋಟದಲ್ಲಿ ಮಜ್ಜಿಗೆ ಕೊಟ್ಬಿಡು." " ಬೆಳೆಯೋ ಹುಡುಗರು ಹೀಗಂದ್ರೆ ಹ್ಯಾಗೋ? ಒಂದು ತುತ್ತು ಹಾಕ್ತೀನಿ. ಒಂದೇ
ತುತ್ತು."
" ಆಗಲಿ, ಬಡಿಸು. ಹ್ಞ, ಸಾಕು." " ಇಕೋ, ಮಜ್ಜಿಗೆ, ಅನ್ನಕ್ಕೆ ಹಾಕಿ ಉಳಿದದ್ದನ್ನ ಕುಡಿದ್ಬಿಡು... ಅದೇ ಆ ಹುಡುಗಿ
ವಿಷಯ... "
" ಕೇಳಿಸ್ತು ದೊಡ್ಡಮ್ಮ. ಧಾರಾಳವಾಗಿ ನೋಡೋಣ." " ಬಂಗಾರ ಕಣಪ್ಪ, ನೀನು." " ಊಟ ಮಾಡು , ದೊಡ್ಡಮ್ಮ, ನಿನ್ನೆದಿನ್ನೂ ಆಗಿಲ್ಲ ಅಂತ ಕಾಣುತ್ತೆ." " ನೀನು ಕೊಟ್ಟ ಒಪ್ಪಿಗೆಯಿಂದ್ಲೇ ಹೊಟ್ಟೆ ತುಂಬಿದೆ. ಆಗಲಿ, ಒಂದು ತುತ್ತು ನಾನೂ
ತಿ೦ತೀನಿ."
ಪದ್ಮನಾಭ ಎದ್ದು ಕೈ ತೊಳೆಯಲು ಹೋದ. ಅವನ ಎಲೆಯು ಎದುರು ತಾವೊಂದನ್ನು ಹಾಕಿಕೊಂಡು ದೊಡ್ಡಮ್ಮ ಕುಳಿತರು: ಕೊಠಡಿಗೆ ಬಂದ ಪದ್ಮನಾಭ ಕಿಟಿಕಿಯಾಚೆಗೆ ಬಿರುನೋಟ ಬೀರುತ್ತ ಒಬ್ಬನೇ ಸ್ವಲ್ಪ
ಹೊತ್ತು ಕುಳಿತ.
ಬಳಿಕ ಎದ್ದು ಒಳಗೆ ನಡೆದು, ಊಟದ ಕೊನೆಯ ಹಂತದಲ್ಲಿದ್ದ ದೊಡ್ಡಮ್ಮನನ್ನುದ್ದೇಶಿಸಿ
ಅವನೆಂದ :
" ನಿನ್ನ ಹತ್ತಿರ ಒಂದು ವಿಷಯ ಮಾತಾಡ್ಬೇಕಲ್ಲ, ದೊಡ್ಡಮ್ಮ."