ಪುಟ:ಬತ್ತೀಸಪುತ್ತಳಿ ಕಥೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ht Y ಬತ್ತೀಸಪುತ್ತಳಿಕಥೆ, ಕಂಡು-ಈತನೇ ತನಗೆ ಪತಿಯೆಂದು ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಮಜ್ಜನ ಭೋಜನವ ಮಾಡಿಸಿ ಸಕಲಪರಿಮಳ ಸುಗಂಧ ತಾಂ ಬೂಲವ ಕೊಟ್ಟು ಅವನಲ್ಲಿ ಅನ್ನೋನ್ಯದಿಂದ ಕ್ರಿಡಿಸಿ ಆ ಬಳಿಕ ತನ್ನ ವೃ ತಾಂತವ ಹೇಳಿ,-ಎನಗೆ ನೀನೇ ಪತಿಯೆಂದು ಇರಿಸಿಕೊಳ್ಳಲಾಗಿ ; ಆಮೇಲೆ ಚೀಟ ನೋಡಲು ಅಲ್ಲಿ ಬೇರಿಯ ಹೊಡೆದ ಫಲವಾಗುವುದೆಂದು ಬರೆದು ಇರುವುದ ಓದಿ ನೋಡಿಕೊಂಡು ಸಂಭ್ರಮದಿಂದವಳೆಡನೆ ಕೊಡಿಯಿರು ತಿರುನಲ್ಲಿ-ಆ ಪಟ್ಟಣದ ವರ್ತಕನಾಗಿದ್ದ ರಶರ್ಮನೆಂಬವನಿಗೆ ಮಕ್ಕ ಇಲ್ಲದೆ ಮರಣನಾಗಲು, ಅವನ ಹೆಂಡತಿ ಅವನೊಡನೆ ಸಹಗಮನವಾದು ದಿಂದ ಈ ಸಮಾಚಾರವ ಈ ಜಯಪಾಲನು ಕೇಳಿ, ತನ್ನ ಸಮಾನಿಕನಾ ದವನು ಸತನೇ ಹರಹರ ! ಎಂದು ಅವನಿಗೆ ಉತ್ತರ ಕ್ರಿಯೆಗಳ ತಾನು ಮಾಡಿದನು. ಅವನ ವರ್ತಮಾನವ ನಮ್ಮ ರಾಯ ಕೇಳಿ, ಹರುಷ ಪಟ್ಟು, ಜಯಪಾಲನ ಕರೆಸಿ ತನ್ನ ಬಳಿಯಲ್ಲಿ ಇರಿಸಿಕೊಂಡಿದ್ದು ಕೆಲವು ದಿನದ ಮೇಲೆ ರಾಯ-ಜಯಪಾಲನೇ ? ನೀನು ಗಟ್ಟಕ್ಕೆ ಹೋಗಿ ಸಕಲ ವ್ಯಾಪಾ ರವ ತೆಗೆದುಕೊಂಡು ಬಾರೆಂದು ಬೇಕಾದಷ್ಟು ದ್ರವ್ಯವ ಕೊಟ್ಟು ಹಡಗ ಮಾಡಿಸಿ ಅರ್ದಲ್ಲಿ ಉದ್ದಿನ ಹಿಟ್ಟು ಹೆತ್ತ ತುಪ್ಪ ಮುಂತಾದ ಸಕಲ ಸದಾ ರ್ಥವ ತುಂಬಿಸಿ ಕಳುಹಿಸಲಾಗಿ; ಜಯಪಾಲನು ಹಡಗಿನಲ್ಲಿ ಕುಳಿತು ಸಮು ದ್ರದಲ್ಲಿ ಹೋಗುವಾಗ ಹುಚ್ಚು ಗಾಳಿಯು ಬೀಸಿ ಹಡಗ ಸುವರ್ಣದೀಪ ಕೈ ತೆಗೆದುಕೊಂಡು ಹೋಗಲಾಗಿ ; ಅಲ್ಲಿ ಮಣ್ಣೆಲ್ಲ ಚಿನ್ನವಾಗಿ ಜನಸಂ ಚಾರವಿಲ್ಲದಿರುವುದ ಕಂಡು, ಜಯಪಾಲ ಅತಿ ವ್ಯಸನ ಪಡುತ್ತ ಆ ಸುವ ರ್ಣದ ಮಣ್ಣ ಹಡಗಿಗೆ ತುಂಬಿ ಅಲೆ೦ದು ಗಟ್ಟದಲ್ಲಿಳಿದಿರಲಾಗಿ ; ಕೊ೦ ಡು ಹೋಗಿದ್ದ ಸದಾರ್ಥವೆಲ್ಲ ಮುಗಿದು ಆಹಾರಕ್ಕಿಲ್ಲದೆ ಬಹು ನಿಗ್ರಹವಾ ದುದkಿಂದ ಆಗ ಕೈಯಲಿದ್ದ ಚಿ೦ಟಿ ತೆಗೆದು ಓದಿನೋಡಲಾಗಿ ಉದ್ದಿನ ಹಿಟ್ಟು ಹೆತ್ತ ತುಪ್ಪ ಇರುವುದೆಂದು ಬರೆದಿರುವ್ರದ ಕಂಡು ಅದ ಭಕ್ಷಿಸಿ ಕೊಂಡು ಇರುವಷ್ಟಿ, ಪುನಃ ಅದೇವೆರೆಗೆ ಹುಚ್ಚು ಗಾಳಿಯು ಬೀಸಿ ಹಡಗ ಆ ದಾರಿಗೆ ತಂದು ಬಿಡಲಾಗಿ ; ಇನ್ನು ನಾನು ಬದುಕಿದೆನೆಂದು ಹಡಗ ಸಾಗಿಸಿಕೊಂಡು ಬಂದು ರಾಯನಿಗೆ ತಾನು ತಂದ ಸುವರ್ಣದ ಮಣ್ಣನೂ ಏನಿ ರಾಯನೊಡನೆ ತನಗಾದ ವೃತ್ತಾಂತವೆಲ್ಲ ಅಕೆಯ ಮಾಡಲಾಗಿ ; V m ೧ M 9 m. ವ