ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬನಶಂಕರಿ ೧೨
ಅದಾದ ಮೇಲೆ ಜೀವನಳ್ಳಿಯಿಂದ ಅವರ ಒಡಹುಟ್ಟಿದ ಸೋದರ ರಾಮಕೃಷ್ಣ ಬಂದು ಹೋದ ತಂಗಿಯ ಮದುವೆಯಾದಾಗ ದೊಡ್ಡ ದೊಂದು ಹೊರೆ ತನ್ನ ತಲೆಯ ಮೇಲಿಂದ ಇಳಿದ
ಹಾಗಾಯಿತೆಂದು ಆತ ಬಾವಿಸಿದ್ದ.
:ಆದರೆ ನಮ್ಕೈಲಿ ಏನಿದೆ ಮಾವ ಎಲ್ಲಾ ಆ ಪರಮಾತ್ಮನ ಲೀಲೆ" -ಇದೀಗ ಆ ಯುವಕ ಆಡಿದ ಮಾತು. ಅಣ್ಣನ ಮಡಿಲಲ್ಲಿ ಮುಖವಿಟ್ಟು ಮನದಣಿಯೆ ಅತ್ತು ಹೃದಯ ಹಗುರಗೊಳಿಸಬೇಕೆಂಬ ಬಯಕೆಯಾಯಿತು, ಅಮ್ಮಿಗೆ ಆದರೆ ಮನೆಗೆಲಸ, ಅತ್ತೆಯ ಆರೈಕೆಗಳ ನಡುವೆ ಅಂತಹ ಮಾತುಕತೆಗೆ ಅವಕಾಶ ದೊರಕಲಿಲ್ಲ. ಅಲ್ಲಿ ಎರಡು ದಿನಗಳಿದ್ದುಹಳ್ಳಿಗೆ ಹೊರಟು ನಿಂತಾಗ ಆತ ಹೇಳಿದ; "ಊರಿಗೆ ಹೋದ್ಮೇಲೆ ಕಾದಗ ಬರಿತೀನಿ ಅಮ್ಮಿ".. "ಇವತ್ತೆ ಹೊರಟು ಬಿಡ್ತೀಯ ಅಣ್ಣ? "ಹೂನಮ್ಮ..." "ಅಣ್ಣಾ!" ಮತ್ತೆ ಅಳು ಮಾವ ಅಂದರು "ಅಳಬಾರದಮ್ಮಾ ಅತ್ತರೆ ಹೋದದ್ದು ವಾಪಸ್ಸು ಬರುತ್ತ್ಯೆ?" ತಡೆಲಾರದ ನೋವಿನಿಂದ ಕುಗ್ಗಿದ ಬಾಗಿದ ಜೀವದಿಂದ ಬಂದ ಕ್ಷೀಣವಾಗಿ ಮಾತುಗಳು ಹೊರ ಟಿದ್ದವು. ದುಮುಕುತ್ತಾ ಬರುತಿದ್ದ ಕಂಬನಿಯ ಪ್ರವಾಹವನ್ನು ಪ್ರಯಾಸದಿಂದ ತಡೆಯಗಟ್ಟುತ್ತಾ ಅಣ್ಣ ಹೊರಟು ಹೋಗಿದ್ದ. ಅವನ ಕಾಗದ ಬಂದಿರಲಿಲ್ಲ ಬಂದರೂ ಆತ ಏನು ಬರೆಯ ಬಹುದು? ದಿನಗಳು ಉರುಳಿದವು ದವು ಒಂದರಂತೆಯೇ ಇನ್ನೊಂದು. ..ಹಲವು ದಿನಗಳ ಮೃಲೆ ಅತ್ತೆ ಎದ್ದು ಕುಳಿತು ಕೊಳ್ಳಲು ಶಕ್ತರಾದರು, ಸೊರಗಿ ಕಡ್ದಿಯಾಗಿಆ ಜೀವ ಎಳೆಯ ಮಕ್ಕಳಿಗಾಗಿ ಬದುಕಿತು. ಆ ಅತ್ತೆ ಮತ್ತು ಮಾವ.. "ನನ್ನ ಪ್ರಾರಬ್ದ ಕರ್ಮ" ಎನ್ನುತಿದ್ದರು ಅಮ್ಮಿಯ ಅತ್ತೆ 'ಯಾರೇನು ಮಾಡೋಕಾಗುತ್ತೆ ಅದೆಲ್ಲಾ ನಮ್ಕೈಲಿದ್ಯೆ?" ಎನ್ನುತಿದ್ದರು ಮಾವ "ನೀನು ಮನೆಗೆ ಕಾಲಿಟ್ಟು ಹೀಗಾಯಿತು" ಎಂದು ಅವರೆಂದೂ ಅಮ್ಮಿಗೆ ಛೀಮಾರಿ ಹಾಕಲಿಲ್ಲ. ಆದರೆ ಹೊರಗಿನಿಂದ ಅಲ್ಲೊಂದು ಇಲ್ಲೊಂದು ಸ್ವರ ಕೇಳಿಸಿತು; "ಹುಟ್ಟೋಕ್ಮುಂಚೆ ತಂದೆ, ಹುಟ್ಟೂತ್ನೆ ತಾಯಿ; ಈಗ ಗಂಡ?" ಅಮ್ಮಿ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ ಹುಡುಗಿ ಅದು ಮುದ್ದಾದ ಹೆಸರಿನ ನಕ್ಷತ್ರ. ಅದರ ತಪ್ಪೇನು ಇರಲಿಲ್ಲ. :ಪಾಪ! ಆ ಮಗೂನ ಯಾತಕ್ಕೆ ಅಂತಾರೆ? -ನಿಂದೆಯ ಮಾತುಗಳೆಡೆಯಲ್ಲಿ ಹಾಗೆ ಕನಿಕರದೊಂದು ಸ್ವರವೂ ಕೇಳಿತಿತ್ತು ಆಗಾಗ್ಗೆ. ಮಾವ ತೋಟ ಹೊಲಗಳ ಕೆಲಗಸದಲ್ಲಿ ನಿರತವಾಗಿ ನೋವನ್ನು ಮರೆಯಲು ಯತ್ನಿಸಿ