ಈ ಪುಟವನ್ನು ಪರಿಶೀಲಿಸಲಾಗಿದೆ
ಬನಶಂಕರಿ ೧೪
ಮುಗಿದು ಇನ್ನೊಂದು ಆರಂಭವಾಯಿತು. ಅದು ಆಕೆಯ ಮದುವೆ. ನಾಲ್ವತ್ತ್ತು ಮೈಲಿಗ
ಳಾಚೆಯ ರಾಯನಹಳ್ಳಿಯ ಸದ್ಗೃಹಸ್ತರೊಬ್ಬರು ಒಮ್ಮೆ ಬಂದು ಆ ಎಳೆಯರ ವೃತಾಂತ
ವನ್ನು ಪರಿಚಿತರಿಂದ ತಿಳಿದು ಅಮ್ಮಿಯ ಜಾತಕವನ್ನು ಕೇಳಿ ಒಯ್ದರು.
ಆಮೇಲೊಂದು ದಿನ ಅಣ್ಣ ರಾಮಕೃಷ್ಣಹೇಳಿದ;
"ಅಮ್ಮಿ ಆ ದಿನ ಬಂದಿದ್ದರಲ್ಲ ಅವರು ನಿನ್ನನ ಸೊಸೆಯಾಗಿ ತರಕೋತಾರಂತೆ."
ಅವನ ಸ್ವರದಲ್ಲಿ ಸಂತೋಶದ ನಡುಕವಿತ್ತು; ದು:ಖದ ಆವೇಗವಿತ್ತು ಆದರೆ ಅಮ್ಮಿ ಕಿಡಿಬೆಂಕಿಯಾಗಿ ಅತ್ತು ರಂಪಮಾಡಿದಳು. "ಹೋಗಣ್ಣ ನಾಒಲ್ಲೆ... ಊಂ..." "ಹುಚ್ಚಿ. ಗಂಡ ಬರ್ತಾನೆ ಅಂದ್ರೆ ಒಲ್ಲೆ ಅಂತಾಳೆ.." ಮದುವೆ -ಅಮ್ಮಿಗೆ ಅದೇನೋ ಹೊಸ ವಿಷಯ. ಆ ವಿಶಯಯೋಚಿಸಿದಾಗ ಅವಳಿಗೆ ಒಂದು ರೀತಿಯ ಸಂತೋಷ ವಾಗುತಿತ್ತು. "ಅಂತು ನನ್ನನ ಬಿಟ್ಟು ಗಂಡನ ಮನೆಗೆ ಹೋಗ್ತೀಯಲ್ಲೇ!" ನಗೆ ಮಾತೆಂದು ರಾಮಕ್ರಷ್ನ ಹೇಳಲು ಹೊರಟಿದ್ದ ಆದರೆ ಅಗಲುವಿಕೆಸಾದ್ಯತೆ ಕಣ್ಣೆದುರು ನಿಂತಾಗ ಹೃದಯ ನಡುಗಿತು. "ಅಣ್ಣನನ್ನು ಬಿಟ್ಟು ಹೋಗುವ ಪ್ರಮೇಯ! ಅಮ್ಮಿಗೊಳೋಎಂದು ಅತ್ತಳು. ಆದರೆ ರಾಯನ ಹಳ್ಳಿಯ ಸದ್ಗೃಹಸ್ತರು ಮತ್ತೊಮ್ಮೆ ಬಂದು ಮೃದುವಾಗಿ ಶಾಂತವಾಗಿ ಮಾತಾಡಿದಾಗ ಅಣ್ಣ ರಾಮಕೃಷ್ಣ ಸಂತೋಷದಿಂದ .ಕಂಬನಿ ತುಂಬಿದ ಕಣ್ಣುಗಳಿಂದ
"ಆಗಲಿ ಆಗಲಿ" ಎಂದಾಗ ಅಮ್ಮಿಯ ಮನಸ್ಸು ಮೆಲ್ಲಗೆ ಬದಲಾಯಿತು.ಜೀವನ ಹಳ್ಳಿಯ
ಶ್ಯಾನುಭೋಗರು ಆ ಎಳೆಯಯರ ಪರವಾಗಿ ಹಿರಿತನದ ಜವಾಬುದಾರಿ ಹೊತ್ತರು. ಮಂಗಳವಾದ್ಯ...ಹಳ್ಳಿಯ ಮುತೈದೆಯರು ಕೈಯಲ್ಲಿ ಅಮ್ಮಿ ಅನುಬವಿಸಿದ ಸುಖಕರ ಸಂಗತಿ...ನೋಡದ ತಂದೆಯ ನೊಡಿಯೂ ನೆನೆಪಿಲ್ಲದ ತಾಯಿಯ ಸ್ಮರಣೆ
... ನನ್ನನ್ನು ಆರು ವರ್ಷ ಸಾಕಿದ ಅಜ್ಜಿ .ಅಣ್ಣ ರಾಮಕ್ರಷ್ಣ...ಇನ್ನೊಂದು
ಕೊಟಡಿಯಲ್ಲಿ ಎಲ್ಲರ ಗಮನದ ಕೇಂದ್ರ ತಾನೆಂಬ ಅಭಿಮಾನದಿಂದ ಕುಳಿತಿದ್ದ ಆ ಹೊಸ ಹುಡುಗ... ಮದುವಣಿಗನ ದಿಬ್ಬಣ ಬಂದದಿನ ಶ್ಯಾನುಭೋಗರ ಮಡದಿ-ಮಗಳು ಗವಾಕ್ಷಿಯ ಎಡೆಯಿಂದ ವರರಾಯನನ್ನು ಅಮ್ಮಿಗೆ ಕದ್ದು ತೋರಿಸಿದ್ದರು. ಗಾಡಿಯ ಪ್ರವಾಸದ ಬಳಳಿಕೆಯೂ ಆಗಲಿಲ್ಲವೇನೋ ಅವನಿಗೆ.....ಗೋದಿಕೆಂಪಾದ ಮೈಬಣ್ಣ.... ತೋರಿಕೆಯ ಗಾಂಭೀರ್ಯ..... ಆದರೂ ಕುತೂಹಲದಿಂದ ಅತ್ತಿತ್ತ ಕಳ್ಳ ನೋಟ
ಬೀರುತಿದ್ದ ಕಣ್ಣುಗಳು...ರೂಪ ಗುಣ ವಿಶೇಷ ಗಳೇನೂ ಅಮ್ಮಿಗೆ ಕಾಣಿಸಿರಲಿಲ್ಲ
ಹಾಗೆ ಬಣ್ಣಿಸಿ ಹೇಳಿದ್ದರು ಶ್ಯಾನುಭೋಗರ ಮನೆಯವರು. ಅಮ್ಮಿಯ ಕಣ್ಣಿಗೆ ಕಂಡದ್ದು ಅಣ್ಣನಿಗಿಂತ ಸ್ವಲ್ಪ ಹೆಚ್ಚು ಮೈತುಂಬಿಕೊಡು ಸುಂದರನಾಗಿ ತೋರಿದ ಹುಡುಗ' ಆಕೆಯ ಕಿವಿಗೆ ಬಿದ್ದದು "ಮನ್ಮಥಕಣೇ ಮನ್ಮಥ!" ಎಂಬಪಿಸುಮಾತು. ಮದುವೆ ಮುಗಿದು ಮನ್ಮಥನೊಂದಿಗೆ ರತಿ ಹೊರಟು ನಿಂತಳು. "ಅಮ್ಮೀ, ನನ್ನನ್ನು ಮರೀಬೇಡ ಅಮ್ಮೀ_ಅಮ್ಮೀ"