ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೩ ಮಾಡಿದ್ದು ಮಹಾರಾಯ, ಕೊಂಡು ಮಲಗಿದ್ದ ಒಬ್ಬನಮೇಲೆ ಕತ್ತಲೆಯಲ್ಲಿ ಕಾಣದೆ ಕಾಲಿ ಟ್ಟು ತುಳಿದೆ. ಅವನು ತನ್ನ ಮಗ್ಗಲಲ್ಲಿರಿಸಿಕೊಂಡಿದ್ದ ದೊಂಣೆಯನ್ನು ಎತ್ತಿ ಎರಡು ಬಾರಿ ಬೀಸಿದ. ಮೊದಲನೇ ಏಟು ಬಲದರಟ್ಟೆಗೆ ಬಿತ್ತು. ಕೈಲಿದ್ದ ಪೆಟ್ಟಿಗೆ ಕೆಳಕ್ಕೆ ಬಿತ್ತು. ಸದ್ದಾಯಿತು. ಮನೆಯವರೆಲ್ಲಾ ಎದ್ದರು. ಕೈಲಿದ್ದ ಬಾಕು ಎಲ್ಲಿಯೋಹೋಯಿತು. ಅವನು ಎರಡನೇಸಾರಿ ಬೀಸಿ ದಾಗ ದೊಂಣೆಪಟ್ಟು ನನ್ನ ತೊಡೆಗೆ ಬಿತ್ತು. ನಾನು ಜ್ಞಾ ನತಪ್ಪಿ ಕೆಳಕ್ಕೆ ಬಿದ್ದೆ. ದೀಪಾ ಹತ್ತಿಸಿದಹಾಗೆ ಕಂಡಿತು. ನನ್ನ ಕೈ ಕಾಲುಗಳನ್ನು ನವಾರದಿಂದ ಬಿಗಿದಹಾಗೆ ತೋರಿತು. ಬೆಳಗಿನಜಾವದಲ್ಲಿ ಜ್ಞಾನಬಂತು. ಈಗ ನನ್ನ ಸಂಗಡ ಬಂ ದಿರುವ ನಮ್ಮ ಜೊತೆಗಾರರನ್ನು ಹಿಂಗಟ್ಟು ಕಟ್ಟಿ ತಂದು ಇರಿಸಿಕೊಂಡಿದ್ದರು. ಸಯ್ಯಾರದವರು ಬಂದು ನೋಡಿ ನಾವು ಮೈಸೂರುಸೀಮೆಯವರೆಂದು ನನ್ನನ್ನು ಇಲ್ಲಿಗೆ ಕರೆದು ತಂದರು. ಅಮಾಸೆಯು ಈ ಪ್ರಕಾರ ತನ್ನ ಕಥೆಯನ್ನು ಹೇಳಿ ಮುಗಿಸಿದನು. ಇದನ್ನು ಕೇಳಿದ ಕಳ್ಳಬಂದನು ಇದನ್ನು ಗುಟ್ಟಾಗಿ ಬಂದೀಖಾನೇ ದರೋಗನಿಗೆ ಮಾತ್ರ ಹೇಳಿದನು. ೧೨ ನೆ ಅ ಧ್ಯಾ ಯ . ಅಮಾಸೆಯು ತನ್ನ ಪೂರವೃತ್ತಾಂತವನ್ನೆಲ್ಲಾ ಹೇಳಿ ಮುಗಿಸಿದ ಮರುದಿವಸಗಳ ತರುವಾಯ ಮೈಸೂರಿಂದ ಅಧಿಕಾರಿಗಳು ಬಂದು ನಗರದ ಆಮಿಾಲರಮನೆಯನ್ನೂ ಕಿಲ್ಲೇ